ಬಾಗಲಕೋಟೆ ಜಿಲ್ಲೆಯಾದ್ಯಂತ ಸೋಂಕಿತರು ಭರ್ತಿ..! ಆಗುವುದೇ ಬೆಡ್‌ಗೆ ಕುಸ್ತಿ..?

ರವಿರಾಜ್‌ ಆರ್‌. ಗಲಗಲಿ : ಪ್ರತಿ ದಿನ ಹೆಚ್ಚಾಗುತ್ತಿರುವ ಕೋವಿಡ್‌ನಿಂದ ಜಿಲ್ಲೆಯಲ್ಲೂ ಬೆಂಗಳೂರಿನಂತೆ ಬೆಡ್‌ ಕೊರತೆ ಎದುರಾಗುವ ಸ್ಥಿತಿ ನಿರ್ಮಿಸಿದೆ. ಕಳೆದ 15 ದಿನಗಳಲ್ಲಿ 400ಕ್ಕೂ ಹೆಚ್ಚು ಕೋವಿಡ್‌ ಸೋಂಕಿತರು ಪತ್ತೆಯಾಗಿದ್ದಾರೆ. ವೈರಸ್‌ ಉಲ್ಬಣಗೊಳ್ಳುತ್ತಿರುವುದರಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಭರ್ತಿಯಾಗುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಲಭ್ಯ. ಆದರೆ ಸೋಂಕು ವಿಪರೀತವಾದರೆ ಬೆಡ್‌ಗಾಗಿ ಪರದಾಡಬೇಕಾಗುತ್ತದೆ. ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್‌ ಆಸ್ಪತ್ರೆಯಾಗಿ ಬದಲಾಯಿಸುವ ಮೂಲಕ ಬೆಡ್‌ ನಿಭಾವಣೆಗೆ ಆಡಳಿತ ಮುಂದಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ರೋಗಿಗಳಿಗೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ ಕೋವಿಡ್‌ ಸ್ಥಿತಿಯಲ್ಲಿಇದೇ ಕ್ರಮ ಕೈಗೊಳ್ಳಲಾಗಿತ್ತು. ಖಾಸಗಿ ಭರ್ತಿ: 350 ಹಾಸಿಗೆಗಳಿರುವ ಜಿಲ್ಲಾಸ್ಪತ್ರೆಯಲ್ಲಿ 250 ಆಕ್ಸಿಜನ್‌ ಸೌಲಭ್ಯವುಳ್ಳ ಬೆಡ್‌ಗಳಿವೆ. ಸದ್ಯ 201 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರರ್ಥ ಇನ್ನೂ 150 ಹಾಸಿಗೆಗಳು ಖಾಲಿಯಿವೆ. ಖಾಸಗಿ ಆಸ್ಪತ್ರೆಗಳಲ್ಲಿ ತಲಾ 40 ರಿಂದ 50 ಹಾಸಿಗೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಮೂಲಗಳ ಪ್ರಕಾರ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್‌ನಿಂದ ದಾಖಲಾಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಪರಿಣಾಮ ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾಗುತ್ತಿವೆ. ತಾಲೂಕು ಆಸ್ಪತ್ರೆಯತ್ತ ಚಿತ್ತ: ಬೆಡ್‌ ಸಮಸ್ಯೆ ಎದುರಾದೀತು ಎಂಬ ಕಾರಣಕ್ಕೆ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ. , ಮುಧೋಳ, ಬೀಳಗಿ, ಬಾದಾಮಿ, ಜಮಖಂಡಿಯ ತಾಲೂಕು ಆಸ್ಪತ್ರೆಗಳಲ್ಲಿ ತಲಾ 30 ಬೆಡ್‌ ಮೀಸಲಿಟ್ಟು ಜಿಲ್ಲಾಸ್ಪತ್ರೆಯ ಒತ್ತಡ ಕಡಿಮೆಗೊಳಿಸುವ ಯತ್ನ ನಡೆದಿದೆ. ಆದರೆ ಪ್ರತಿ ದಿನ 100 ರಿಂದ 200ರವರೆಗೆ ಕೋವಿಡ್‌ ಸೋಂಕಿತರು ಪತ್ತೆಯಾದರೆ ಬೆಡ್‌ ಒದಗಿಸುವುದು ಕಷ್ಟ. ಹೋಂ ಐಸೋಲೇಶನ್‌ ಅಗತ್ಯವಿರುವವರು ಶೇ.30 ರಷ್ಟಿದ್ದರೆ ಇನ್ನುಳಿದವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೀಗಾಗಿ ಕುಮಾರೇಶ್ವರ ಆಸ್ಪತ್ರೆಯಲ್ಲಿ 100 ಬೆಡ್‌ ಮೀಸಲಿಟ್ಟು ಚಿಕಿತ್ಸೆ ಕೈಗೊಂಡರೆ ವಿಕೋಪ ನಿಭಾಯಿಸಬಹುದು ಎನ್ನಲಾಗುತ್ತಿದೆ. ಅಂದಾಜು 600 ಹಾಸಿಗೆಗಳು ಚಿಕಿತ್ಸೆಗೆ ಲಭ್ಯವಿದ್ದು 400 ಹಾಸಿಗೆ ಭರ್ತಿಯಾಗಿವೆ. ಹೊರ ಜಿಲ್ಲೆ ರೋಗಿಗಳು ಹೆಚ್ಚು: ಉಸಿರಾಟ, ಜ್ವರದ ತೊಂದರೆಯಿಂದ ಬಳಲಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅನ್ಯ ಕಾಯಿಲೆಗಳ ರೋಗಿಗಳಿಗೂ ಚಿಕಿತ್ಸೆ ನೀಡಬೇಕಿರುವುದರಿಂದ ಖಾಸಗಿ ಆಸ್ಪತ್ರೆಗಳು ಸಂಪೂರ್ಣವಾಗಿ ಕೋವಿಡ್‌ಗೆ ಬೆಡ್‌ ಮೀಸಲಿಡುವುದು ಕಷ್ಟ. ಪಕ್ಕದ ವಿಜಯಪುರ ಜಿಲ್ಲೆಯಲ್ಲಿ ಬೆಡ್‌ ಕೊರತೆ ಎದುರಾಗಿದ್ದು, ರೋಗಿಗಳು ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. 'ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್‌ ಬೆಡ್‌ಗಳು ಭರ್ತಿಯಾಗಿವೆ. ಬೆಡ್‌ ಖಾಲಿಯಿರುವ ಆಸ್ಪತ್ರೆಗಳಿಂದ ಮಾಹಿತಿ ಪಡೆದು ಅಲ್ಲಿ ರೋಗಿಗಳನ್ನು ದಾಖಲಿಸಲಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಬೆಡ್‌ ಸಾಲುವುದಿಲ್ಲ' ಎನ್ನುವುದು ಖಾಸಗಿ ವೈದ್ಯರೊಬ್ಬರ ಅಭಿಮತ. ಸದ್ಯ ಯುದ್ಧೋಪಾದಿಯಲ್ಲಿ ಬೆಡ್‌ಗಳನ್ನು ಒದಗಿಸುವ ವ್ಯವಸ್ಥೆ ಕೈಗೊಂಡರೆ ರೋಗಿಗಳು ಪರದಾಡುವುದು ತಪ್ಪಲಿದೆ. 'ರೋಗ ಲಕ್ಷಣವಿರುವವರ ಪರೀಕ್ಷೆ ನಡೆಸಿ ಆಸ್ಪತ್ರೆಗೆ ದಾಖಲಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲು ಸೂಚಿಸಲಾಗುತ್ತದೆ' ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.


from India & World News in Kannada | VK Polls https://ift.tt/3eycLOu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...