ಮೂರನೇ ಕ್ರಮಾಂಕದಲ್ಲಿ ರಸೆಲ್‌ ಆಡಿದರೆ 2 ಶತಕ ಬಾರಿಸಬಲ್ಲರು ಎಂದ ಡೇವಿಡ್ ಹಸ್ಸಿ!

ಮುಂಬೈ: ತಂಡ ಸಂಕಷ್ಟದಲ್ಲಿ ಇರುವಾಗಲೂ ದೈದ್ಯ ಬ್ಯಾಟ್ಸ್‌ಮನ್‌ ಅವರನ್ನು ಕೆಳ ಕ್ರಮಾಂಕದಲ್ಲೇ ಆಡುವಂತೆ ಮಾಡಿದ್ದಕ್ಕೆ ಇರುವ ನೈಜ ಕಾರಣ ಏನೆಂಬುದನ್ನು ತಂಡದ ಮೆಂಟರ್‌ ಬಹಿರಂಗ ಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಕೆಕೆಆರ್‌ ತಂಡ 6 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ನೈಟ್‌ ರೈಡರ್ಸ್‌ ತನ್ನ 20 ಓವರ್‌ಗಳಲ್ಲಿ 133/9 ರನ್‌ಗಳ ಅಲ್ಪ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ರನ್‌ ಗಳಿಸಲು ಉಳಿದ ಬ್ಯಾಟ್ಸ್‌ಮನ್‌ಗಳು ತಿಣುಕಾಡುತ್ತಿದ್ದ ಸಂದರ್ಭದಲ್ಲಿ ದೈತ್ಯ ಆಟಗಾರ ಆಂಡ್ರೆ ರಸೆಲ್ ಅವರನ್ನು ಕೆಕೆಆರ್‌ ತಂಡ 7ನೇ ಕ್ರಮಾಂಕದಲ್ಲಿ ಆಡಿಸಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ರಸೆಲ್‌ಗೆ 16ನೇ ಓವರ್‌ನಲ್ಲಿ ಬ್ಯಾಟಿಂಗ್‌ ಸಿಕ್ಕಿತ್ತು. ಅವರಿಗೆ ಹೆಚ್ಚಿನ ಓವರ್‌ಗಳು ಆಡಲು ಸಿಗಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ ಆರಂಭಿಕ ಕುಸಿಕ ಕಂಡ ಕಾರಣ ಪವರ್‌ ಪ್ಲೇ ಹೊತ್ತಿಗಾಗಲೇ ಆಂಡ್ರೆ ರಸೆಲ್ ಕ್ರೀಸ್‌ಗೆ ಬಂದಿದ್ದರು. ಪರಿಣಾಮ ಅವರಿಗೆ ಹೆಚ್ಚಿನ ಓವರ್‌ಗಳು ಲಭ್ಯವಾಗಿ, ಇದರ ಸದ್ಬಳಕೆ ಮಾಡಿದ ರಸೆಲ್ 22 ಎಸೆತಗಳಲ್ಲಿ 54 ರನ್‌ ಸಿಡಿಸಿ ಮಿಂಚಿದ್ದರು. ಆದರೆ, ರಾಯಲ್ಸ್‌ ಎದುರು 7 ಎಸೆತಗಳಲ್ಲಿ 9 ರನ್‌ ಗಳಿಸಲಷ್ಟೇ ಶಕ್ತರಾದರು. ಎರಡು ಶತಕ ಸಿಡಿಸಬಲ್ಲರು: ಹಸ್ಸಿರಸೆಲ್‌ ಇನಿಂಗ್ಸ್‌ ಅಂತ್ಯದಲ್ಲಿ ಅಂದರೆ 7ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ ಮಾಡಿ 15 ಎಸೆತಗಳಲ್ಲಿ 30-40 ರನ್‌ ಗಳಿಸಲಿ ಎಂಬುದಷ್ಟೇ ತಂಡ ಅವರಿಂದ ಬಯಸುತ್ತಿದೆ ಎಂದು ಕೆಕೆಆರ್‌ ತಂಡದ ಮೆಂಟರ್‌ ಡೇವಿಡ್‌ ಹಸ್ಸಿ ಹೇಳಿದ್ದಾರೆ. "ಆಂಡ್ರೆ ರಸೆಲ್‌ ಬ್ಯಾಟಿಂಗ್‌ಗೆ ತೆರಳುವ ಮುನ್ನ ಕ್ರೀಸ್‌ನಲ್ಲಿ ದಿನೇಶ್‌ ಕಾರ್ತಿಕ್ ಮತ್ತು ರಾಹುಲ್ ತ್ರಿಪಾಠಿ ನಡುವೆ ಉತ್ತಮ ಜೊತೆಯಾಟ ನಡೆಯುತ್ತಿತ್ತು. ರಸೆಲ್ ಬ್ಯಾಟ್‌ ಮಾಡಲು ಹೋದಾಗ ಇನ್ನು 4 ಓವರ್‌ಗಳು ಬಾಕಿ ಇತ್ತು. ಅಲ್ಲಿ 15 ಎಸೆತಗಳಲ್ಲಿ ಅವರು 30-40 ರನ್‌ ತಂದುಕೊಡುತ್ತಾರೆ ಎಂಬುದಷ್ಟೇ ನಮ್ಮ ನಿರೀಕ್ಷೆ. ಎಲ್ಲವೂ ಸರಿಯಿದ್ದು 3ನೇ ಕ್ರಮಾಂಕದಲ್ಲಿ ರಸೆಲ್ ಬ್ಯಾಟ್‌ ಮಾಡಿದರೆ ಅವರು 2 ಶತಕ ಸಿಡಿಸಬಲ್ಲರು. ಆದರೆ, ಈ ರಾತ್ರಿ ಅದು ಸಾಧ್ಯವಾಗಿಲ್ಲ ಅಷ್ಟೆ," ಎಂದು ಪಂದ್ಯದ ಬಳಿಕ ಮಾತನಾಡಿದ ಡೇವಿಡ್‌ ಹಸ್ಸಿ ಹೇಳಿದ್ದಾರೆ. ಬ್ಯಾಟಿಂಗ್‌ ತಂತ್ರಗಾರಿಕೆಯಲ್ಲಿ ಬದಲಾವಣೆ ಸತತ ನಾಲ್ಕು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪಿರುವ ಕೋಲ್ಕತಾ ನೈಟ್‌ ರೈಡರ್ಸ್‌, ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಖಂಡಿತಾ ಬ್ಯಾಟಿಂಗ್‌ ವಿಭಾಗದಲ್ಲಿ ಕೆಲ ತಂತ್ರಗಾರಿಕೆಯ ಬದಲಾವಣೆ ಮಾಡುವುದಾಗಿ ಡೇವಿಡ್‌ ಹಸ್ಸಿ ಹೇಳಿದ್ದಾರೆ. "ನಮ್ಮ ಬ್ಯಾಟಿಂಗ್‌ನಲ್ಲಿನ ಕೆಲ ತಂತ್ರಗಾರಿಕೆಯಲ್ಲಿ ಖಂಡಿತಾ ಬದಲಾವಣೆ ತರಲಿದ್ದೇವೆ. ಇನ್ನೆರಡು ದಿನಗಳಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ ಆಡಲಿದ್ದೇವೆ. ಪಂದ್ಯ ಗೆಲ್ಲಲು ಎಲ್ಲ ರೀತಿಯ ಅವಕಾಶಗಳ ಬಗ್ಗೆ ಗಮನ ನೀಡಲಿದ್ದೇವೆ," ಎಂದಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಆಡಿದ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಕೆಕೆಆರ್‌ ತಂಡ ಸತತ ನಾಲ್ಕು ಸೋಲುಂಡಿದೆ. ಹೀಗಾಗಿ ಸೋಮವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಗೆದ್ದು ಕಮ್‌ಬ್ಯಾಕ್‌ ಮಾಡುವ ಕಡೆಗೆ ಐಯಾನ್ ಮಾರ್ಗನ್ ಪಡೆ ಎದುರು ನೋಡುತ್ತಿದೆ. ಸಂಕ್ಷಿಪ್ತ ಕೋಲ್ಕತಾ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್‌ (ನಿತೀಶ್‌ ರಾಣಾ 22, ರಾಹುಲ್ ತ್ರಿಪಾಠಿ 36, ದಿನೇಶ್ ಕಾರ್ತಿಕ್ 25, ಪ್ಯಾಟ್‌ ಕಮಿನ್ಸ್‌ 10; ಕ್ರಿಸ್‌ ಮಾರಿಸ್‌ 23ಕ್ಕೆ 4). ರಾಜಸ್ಥಾನ್ ರಾಯಲ್ಸ್‌: 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 134 ರನ್ (ಯಶಸ್ಸವಿ ಜೈಸ್ವಾಲ್ 22, ಸಂಜು ಸ್ಯಾಮ್ಸನ್‌ ಅಜೇಯ 42, ಶಿವಂ ದುಬೇ 22, ಡೇವಿಡ್‌ ಮಿಲ್ಲರ್‌ ಅಜೇಯ 24; ವರುಣ್ ಚಕ್ರವರ್ತಿ 32ಕ್ಕೆ 2, ಶಿವಂ ಮಾವಿ 19ಕ್ಕೆ 1, ಪ್ರಸಿಧ್ ಕೃಷ್ಣ 20ಕ್ಕೆ 1). ಪಂದ್ಯಶ್ರೇಷ್ಠ: ಕ್ರಿಸ್‌ ಮಾರಿಸ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3sPOWXB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...