ಹುಬ್ಬಳ್ಳಿ: ಸಾಮಾನ್ಯವಾಗಿ ಮಹಿಳೆಯರಿಗೆ, ಹಸು ಮತ್ತು ಮರಗಳಿಗೆ ಸೀಮಂತ ಮಾಡುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಂದು ಮನೆಯಲ್ಲಿ ಶ್ವಾನಕ್ಕೂ ಸೀಮಂತ ಮಾಡಿರುವುದು ವಿಶೇಷ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸಾರಿಗೆ ನೌಕರ ರಮೇಶ ಪಡತೇರ ಮನೆಯಲ್ಲಿಇಂಥದೊಂದು ವಿಶೇಷ ನಡೆದಿದೆ. ಕಳೆದ ವರ್ಷ ತಂದಿದ್ದ ಶ್ವಾನಕ್ಕೆ ಲೂಸಿ ಎಂದು ಹೆಸರಿಟ್ಟಿದ್ದ ರಮೇಶ ಪಡತೇರ ಅವರ ಪುತ್ರ ಪೃಥ್ವಿ ಪಡತೇರ ಹಾಗೂ ಅವರ ಕುಟುಂಬದ ಸದಸ್ಯರು ಶ್ವಾನ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ಯಾವ ರೀತಿ ಸೀಮಂತ ಮಾಡುತ್ತಾರೋ ಅದೇ ರೀತಿಯಾಗಿ ಶ್ವಾನಕ್ಕೆ ಸೀರೆ ಉಡಿಸಿ, ಕೊರಳಿಗೆ ಹೂವಿನ ಹಾರ ಹಾಕಿ ಸಿಂಗರಿಸಲಾಗಿತ್ತು. ಇನ್ನು ಲೂಸಿಗೆ ಸುಮಂಗಲೆಯರು ಆರತಿ ಬೆಳಗಿದರು. ಇನ್ನು ವಿಶೇಷ ತಿಂಡಿ-ತಿನಿಸುಗಳು, ಹೂ, ಹಣ್ಣು-ಹಂಪಲುಗಳನ್ನು ಲೂಸಿ ಮುಂದೆ ಇಡಲಾಗಿತ್ತು. ಅರಶಿನ, ಹಸಿರ ಬಳೆ ನೀಡು ಲೂಸಿಗೆ ಉಡಿ ತುಂಬಿಸುವ ಕಾರ್ಯವು ನಡೆಯಿತು. ಇನ್ನು ಮನೆಯವರು ಮಾತ್ರವಲ್ಲದೆ ನೆರೆ ಹೊರೆಯವರನ್ನು ಕರೆದು ಈ ಕುಟುಂಬ ಸೀಮಂತ ಪ್ರಯುಕ್ತ ಊಟ ಕೂಡ ಹಾಕಿದೆ.
from India & World News in Kannada | VK Polls https://ift.tt/3rkpLMr