ಸ್ಮಿತ್‌ ಔಟ್‌ ಮಾಡಲು ರೂಪಿಸಿದ್ದ ರಂಣತಂತ್ರ ಬಿಚ್ಚಿಟ್ಟ ಶಾರ್ದುಲ್ ಠಾಕೂರ್‌!

ಕ್ಯಾನ್ಬೆರಾ: ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳಿಗೆ ಸಿಕ್ಕಾಪಟ್ಟೆ ತಲೆ ನೋವು ತರಿಸಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್‌ ಸ್ಮಿತ್ ಅವರನ್ನು ಔಟ್‌ ಮಾಡಲು ರೂಪಿಸಿದ್ದ ಯೋಜನೆಯನ್ನು ಶಾರ್ದುಲ್ ‌ ಠಾಕೂರ್‌ ಬಹಿರಂಗಪಡಿಸಿದ್ದಾರೆ.ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಪರ ಫಾರ್ಮ್‌ಗಾಗಿ ತಿಣುಕಾಡುತ್ತಿದ್ದ ಸ್ಟೀವನ್ ಸ್ಮಿತ್‌, ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಭರ್ಜರಿ ಲಯಕ್ಕೆ ಮರಳಿದರು. ಓಡಿಐ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕೇವಲ 62 ಎಸೆತಗಳಲ್ಲಿ ಶತಕಗಳನ್ನು ಸಿಡಿಸುವ ಮೂಲಕ ಭಾರತದ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಟೀವನ್‌ ಸ್ಮಿತ್‌ ಅವರನ್ನು ಕಟ್ಟಿಹಾಕುವುದು ಹೇಗೆಂದು ನಾಯಕ ವಿರಾಟ್‌ ಕೊಹ್ಲಿ ಸಿಕ್ಕಾಪಟ್ಟೆ ತಲೆ ನೋವಾಗಿತ್ತು. ಆದರೆ, ಮೂರನೇ ಹಣಾಹಣಿಯಲ್ಲಿ ಶಾರ್ದುಲ್ ‌ ಠಾಕೂರ್ ಶಿಸ್ತುಬದ್ಧ ಬೌಲಿಂಗ್‌ ಮಾಡಿ ಕೇವಲ 7 ರನ್‌ಗಳಿಗೆ ಆಸ್ಟ್ರೇಲಿಯಾ ಮಾಜಿ ನಾಯಕನನ್ನು ಆರಂಭದಲ್ಲಿಯೇ ಪೆವಿಲಿಯನ್‌ಗೆ ಕಳುಹಿಸಿದರು. ಕಳೆದ 2017ರಲ್ಲಿಯೇ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಾರ್ದುಲ್ ‌ ಠಾಕೂರ್‌ ಈ ಹಿಂದೆ ಸ್ಥಿರ ಪ್ರದರ್ಶನದ ಕೊರತೆಯಿಂದ ಕಳೆದ ಕೆಲ ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಿರವಾಗಿ ಆಡಿರಲಿಲ್ಲ. ಇದುವರೆಗೂ ಅವರು ಭಾರತದ ಪರ 27 ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಆಡಿದ್ದಾರೆ. ಬುಧವಾರದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಮಾಡಿದ ಶಾರ್ದೂಲ್‌ ಠಾಕೂರ್‌ 10 ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿ, ಮೂರು ವಿಕೆಟ್‌ಗಳನ್ನು ಪಡೆದುಕೊಂಡರು.

ಭರ್ಜರಿ ಲಯಕ್ಕೆ ಮರಳಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಅವರನ್ನು ಮೂರನೇ ಏಕದಿನ ಪಂದ್ಯದಲ್ಲಿ ಕಟ್ಟಿ ಹಾಕಲು ರೂಪಿಸಿದ್ದ ಗೇಮ್‌ ಪ್ಲ್ಯಾನ್‌ ಅನ್ನು ಟೀಮ್‌ ಇಂಡಿಯಾ ವೇಗಿ ಶಾರ್ದುಲ್ ‌ ಠಾಕೂರ್ ಬಹಿರಂಗಪಡಿಸಿದರು.


ಸ್ಮಿತ್‌ ಔಟ್‌ ಮಾಡಲು ರೂಪಿಸಿದ್ದ ರಣತಂತ್ರ ಬಿಚ್ಚಿಟ್ಟ ಶಾರ್ದುಲ್ ಠಾಕೂರ್‌!

ಕ್ಯಾನ್ಬೆರಾ:

ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳಿಗೆ ಸಿಕ್ಕಾಪಟ್ಟೆ ತಲೆ ನೋವು ತರಿಸಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್‌ ಸ್ಮಿತ್ ಅವರನ್ನು ಔಟ್‌ ಮಾಡಲು ರೂಪಿಸಿದ್ದ ಯೋಜನೆಯನ್ನು ಶಾರ್ದುಲ್ ‌ ಠಾಕೂರ್‌ ಬಹಿರಂಗಪಡಿಸಿದ್ದಾರೆ.

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಪರ ಫಾರ್ಮ್‌ಗಾಗಿ ತಿಣುಕಾಡುತ್ತಿದ್ದ ಸ್ಟೀವನ್ ಸ್ಮಿತ್‌, ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಭರ್ಜರಿ ಲಯಕ್ಕೆ ಮರಳಿದರು. ಓಡಿಐ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕೇವಲ 62 ಎಸೆತಗಳಲ್ಲಿ ಶತಕಗಳನ್ನು ಸಿಡಿಸುವ ಮೂಲಕ ಭಾರತದ ಬೌಲರ್‌ಗಳಿಗೆ ಬೆವರಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಸ್ಟೀವನ್‌ ಸ್ಮಿತ್‌ ಅವರನ್ನು ಕಟ್ಟಿಹಾಕುವುದು ಹೇಗೆಂದು ನಾಯಕ ವಿರಾಟ್‌ ಕೊಹ್ಲಿ ಸಿಕ್ಕಾಪಟ್ಟೆ ತಲೆ ನೋವಾಗಿತ್ತು. ಆದರೆ, ಮೂರನೇ ಹಣಾಹಣಿಯಲ್ಲಿ ಶಾರ್ದುಲ್ ‌ ಠಾಕೂರ್ ಶಿಸ್ತುಬದ್ಧ ಬೌಲಿಂಗ್‌ ಮಾಡಿ ಕೇವಲ 7 ರನ್‌ಗಳಿಗೆ ಆಸ್ಟ್ರೇಲಿಯಾ ಮಾಜಿ ನಾಯಕನನ್ನು ಆರಂಭದಲ್ಲಿಯೇ ಪೆವಿಲಿಯನ್‌ಗೆ ಕಳುಹಿಸಿದರು.

ಕಳೆದ 2017ರಲ್ಲಿಯೇ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಾರ್ದುಲ್ ‌ ಠಾಕೂರ್‌ ಈ ಹಿಂದೆ ಸ್ಥಿರ ಪ್ರದರ್ಶನದ ಕೊರತೆಯಿಂದ ಕಳೆದ ಕೆಲ ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಿರವಾಗಿ ಆಡಿರಲಿಲ್ಲ. ಇದುವರೆಗೂ ಅವರು ಭಾರತದ ಪರ 27 ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಆಡಿದ್ದಾರೆ. ಬುಧವಾರದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಮಾಡಿದ ಶಾರ್ದೂಲ್‌ ಠಾಕೂರ್‌ 10 ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿ, ಮೂರು ವಿಕೆಟ್‌ಗಳನ್ನು ಪಡೆದುಕೊಂಡರು.



ಸ್ಮಿತ್‌ಗೆ ಲೆನ್ತ್‌ ಎಸೆತಗಳನ್ನು ಸ್ಥಿರವಾಗಿ ಹಾಕಲಾಯಿತು
ಸ್ಮಿತ್‌ಗೆ ಲೆನ್ತ್‌ ಎಸೆತಗಳನ್ನು ಸ್ಥಿರವಾಗಿ ಹಾಕಲಾಯಿತು

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಸ್ಮಿತ್‌ಗೆ ರೂಪಿಸಿದ್ದ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾರ್ದುಲ್ ‌ ಠಾಕೂರ್‌, "ಲೆನ್ತ್‌ ಎಸೆತಗಳನ್ನು ಸ್ಥಿರವಾಗಿ ಹಾಕುವುದು ತುಂಬಾ ಮುಖ್ಯವಾಗಿತ್ತು. ಅಲ್ಲದೆ, ಸ್ಮಿತ್‌ ಕಳೆದ ಪಂದ್ಯಗಳಲ್ಲಿ ಕಟ್‌ ಹಾಗೂ ಪುಲ್‌ ಶಾಟ್‌ಗಳನ್ನು ಹೊಡೆದಿದ್ದರು. ಇದನ್ನು ಅರಿತುಕೊಂಡಿದ್ದ ನಾನು, ಅವರನ್ನು ಆ ಶಾಟ್‌ಗಳಿಂದ ನಿಯಂತ್ರಿಸಿದೆ ಹಾಗೂ ವಿಕೆಟ್‌ ಟು ವಿಕೆಟ್‌ಗೆ ನೇರವಾಗಿ ಬೌಲಿಂಗ್‌ ಮಾಡಿದೆ, ಇದು ನನಗೆ ವರ್ಕ್‌ಔಟ್‌ ಆಯಿತು. ಸ್ಮಿತ್‌ ಅವರನ್ನು ಬೇಗ ಔಟ್‌ ಮಾಡಿದ್ದು ಒಳ್ಳೆಯದೇ ಆಯಿತು," ಎಂದು ಹೇಳಿದರು.

"ಮೈದಾನ ತುಂಬಾ ದೊಡ್ಡದಾಗಿದ್ದರಿಂದ ಪಂದ್ಯದಲ್ಲಿ ನಾನು ವಿಭಿನ್ನ ಎಸೆತಗಳನ್ನು ಪ್ರಯೋಗ ಮಾಡಿದೆ ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದೆ. ಇಲ್ಲಿನ ವಿಕೆಟ್‌ ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ನಲ್ಲಿ ವಿಭಿನ್ನ ಎಸೆತಗಳನ್ನು ಹಾಕಲು ತುಂಬಾ ನೆರವಾಯಿತು. ಪ್ರತಿಯೊಂದು ಎಸೆತದಲ್ಲಿಯೂ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಪಂದ್ಯದಲ್ಲಿ ಕೀ ಯೋಜನೆಯಾಗಿತ್ತು," ಎಂದು ಶಾರ್ದುಲ್ ‌ ಠಾಕೂರ್‌ ತಿಳಿಸಿದರು.

ಜಡೇಜಾ ಸ್ಫೋಟಕ ಬ್ಯಾಟಿಂಗ್‌ ಬೆನ್ನಲ್ಲೆ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾದ ಮಾಂಜ್ರೇಕರ್‌!



‌ವಾರ್ನರ್‌ ಗೈರು ನಮಗೆ ಲಾಭವಾಯಿತು
‌ವಾರ್ನರ್‌ ಗೈರು ನಮಗೆ ಲಾಭವಾಯಿತು

ಕೀ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್‌ ಮೂರನೇ ಪಂದ್ಯಕ್ಕೆ ಗೈರಾಗಿದ್ದು ನಮಗೆ ಲಾಭವಾಯಿತು. ಅವರ ಅನುಪಸ್ಥಿತಿಯಲ್ಲಿ ಪಂದ್ಯ ಗೆಲ್ಲಲು ನಮಗೆ ಉತ್ತಮ ಅವಕಾಶ ಸಿಕ್ಕಿತು. ಈ ಅವಕಾಶವನ್ನು ನಾವು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದೇವೆ. ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿಯೂ ಇದೇ ಲಯವನ್ನು ನಾವು ಮುಂದುವರಿಸುತ್ತೇವೆ ಹಾಗೂ ಚುಟುಕು ಸರಣಿಯನ್ನು ಗೆಲ್ಲುತ್ತೇವೆ ಎಂದು ಶಾರ್ದುಲ್‌ ಠಾಕೂರ್‌ ಭರವಸೆ ನೀಡಿದ್ದಾರೆ. ಡೇವಿಡ್‌ ವಾರ್ನರ್‌ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿ, ಆಸ್ಟ್ರೇಲಿಯಾ ಓಡಿಐ ಸರಣಿ ಗೆಲುವಿಗೆ ನೆರವಾಗಿದ್ದಾರೆ.

ಎರಡನೇ ಪಂದ್ಯದಲ್ಲಿ ಕ್ಯಾಚ್‌ ಬಿಟ್ಟಿದ್ದಕ್ಕೆ ನಿದ್ರೆಯೇ ಮಾಡಿರಲಿಲ್ಲವೆಂದ ಜಡೇಜಾ!



ಯೋಜನೆ ಕಾರ್ಯಗತಗೊಳಿಸುವುದು ಮುಖ್ಯ
ಯೋಜನೆ ಕಾರ್ಯಗತಗೊಳಿಸುವುದು ಮುಖ್ಯ

ಮುಂದಿನ ವರ್ಷದ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಕೆಲವೇ ಕೆಲವು ಟಿ20 ಪಂದ್ಯಗಳಿವೆ, ಈ ಹಿನ್ನೆಲೆಯಲ್ಲಿ 50 ಓವರ್‌ಗಳ ಮಾದರಿಗೆ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "50 ಓವರ್‌ಗಳ ಪಂದ್ಯದಲ್ಲಿ ನಾವು ವಿವಿಧ ಬಗೆಯ ಕ್ರಿಕೆಟ್‌ ಆಡುತ್ತೇವೆ. ಆರಂಭ ವೇಗವಾಗಿರುತ್ತದೆ. ಮಧ್ಯೆದಲ್ಲಿ ನಿಧಾನಗತಿಯಿಂದ ಕೂಡಿರುತ್ತದೆ ಹಾಗೂ ಅಂತಿಮವಾಗಿ ಬ್ಯಾಟ್ಸ್‌ಮನ್‌ಗಳು ದಾಳಿ ನಡೆಸುತ್ತಾರೆ. ಹಾಗಾಗಿ ಪಂದ್ಯ ಹಲವು ಏರಿಳಿತಗಳನ್ನು ಹೊಂದಿರುತ್ತದೆ. ಈ ಎರಡೂ ಮಾದರಿಯಲ್ಲಿ ನಾವು ಬಿಳಿ ಚೆಂಡಿನಲ್ಲಿ ಆಡುತ್ತೇವೆ. ವಿಶ್ವಕಪ್-ದ್ವಿಪಕ್ಷೀಯ ಸರಣಿ ಅಥವಾ ಯಾವುದೇ ಮಾದರಿಯಾದರೂ ನಾವು ಯೋಜನೆಯನ್ನು ಕಾರ್ಯಗತಗೊಳಿಸುವುದು ತುಂಬಾ ಮುಖ್ಯ," ಎಂದು ಹೇಳಿದರು.

ಗ್ಯಾಲರಿ: ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಒಡಿಐ ಪಂದ್ಯದ ಫೋಟೊಗಳು ಇಲ್ಲಿವೆ



ನಟರಾಜನ್‌ ಬೌಲಿಂಗ್‌ ಮೆಚ್ಚಿದ ಶಾರ್ದುಲ್ ‌
ನಟರಾಜನ್‌ ಬೌಲಿಂಗ್‌ ಮೆಚ್ಚಿದ ಶಾರ್ದುಲ್ ‌

ಬುಧವಾರ ಭಾರತದ ಪರ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಟಿ ನಟರಾಜನ್‌ ಅವರನ್ನು ಶಾರ್ದುಲ್ ಠಾಕೂರ್‌ ಗುಣಗಾನ ಮಾಡಿದರು. ಆರಂಭದಲ್ಲಿ ಸ್ವಲ್ಪ ಎಡವಿದರೂ ಎಡಗೈ ವೇಗಿ ಕೊನೆಯಲ್ಲಿ ಅತ್ಯುತ್ತಮವಾಗಿ ಕಮ್‌ಬ್ಯಾಕ್‌ ಮಾಡಿದ್ದರು.

"ಐಪಿಎಲ್‌ ಟೂರ್ನಿಯಲ್ಲಿ ನಟರಾಜನ್‌ ಅದ್ಭುತ ಪ್ರದರ್ಶನ ತೋರಿದ್ದಾರೆ ಹಾಗೂ ಸಾಕಷ್ಟು ಯಾರ್ಕರ್‌ಗಳನ್ನು ಕಾರ್ಯಗತಗೊಳಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಎಡವಿದರೂ ಕೊನೆಯಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿದರು. ಇವರಂಥ ಆಟಗಾರರು ನಮಗೆ ಅಗತ್ಯವಿದೆ. ವೈಟ್‌ ಬಾಲ್‌ ಮಾದರಿಯಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ಕಮ್‌ಬ್ಯಾಕ್‌ ಮಾಡಲು ಮುಖ್ಯವಾದ ಅಂಶ ಯಾವುದು? ಅದೇ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ," ಎಂದು ಟಿ ನಟರಾಜನ್‌ಗೆ ಶಾರ್ದುಲ್‌ ಸಲಹೆ ನೀಡಿದರು.

ಟೀಮ್ ಇಂಡಿಯಾದ ಡಿಆರ್‌ಎಸ್‌ ಡ್ರಾಮಾ ಟೀಕಿಸಿದ ನೆಟ್ಟಿಗರು!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3muRx70

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...