-ಎಂ.ಎನ್.ಗುರುಮೂರ್ತಿ ಬೆಂಗಳೂರು: ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಸಣ್ಣ ಕಾರ್ಯಕರ್ತನಿಗೆ ಪಕ್ಷದಲ್ಲಿ ದೊಡ್ಡ ಅವಕಾಶ ದೊರೆತಿದೆ, ಇದಕ್ಕೆ ನನಗೆ ಖುಷಿಯೂ ಇದೆ. ಆದರೆ, ಇದೇ ವೇಳೆ ನನ್ನ ಮುಂದೆ ಅನೇಕ ದೊಡ್ಡ ಸವಾಲುಗಳಿವೆ. ಒಂದೆಡೆ ಪಕ್ಷ ಸಂಘಟನೆ, ಮತ್ತೊಂದೆಡೆ ಬಿಜೆಪಿಯ ಭ್ರಷ್ಟಾಚಾರ, ವೈಫಲ್ಯಗಳು, ಸುಳ್ಳಿನ ಸರಮಾಲೆಗಳ ವಿರುದ್ಧ ದೇಶದ ಯುವ ಸಮುದಾಯದಲ್ಲಿ ಜನ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ 3 ತಿಂಗಳಲ್ಲಿ ಯುವ ಕಾಂಗ್ರೆಸ್ಗೆ ಹೊಸ ಚೈತನ್ಯ ನೀಡಿ ಹೋರಾಟಕ್ಕೆ ಸಜ್ಜಾಗಲು ಸಂಕಲ್ಪ ಮಾಡಿದ್ದೇನೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ. ದೇಶದ ಯುವ ಜನಾಂಗ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಬಿಜೆಪಿ ಒಂದು ರೀತಿ ಸುಳ್ಳಿನ ಫ್ಯಾಕ್ಟರಿ, ಸುಳ್ಳು ಹೇಳುವುದರಿಂದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ, ಅವರ ಹೊಟ್ಟೆಯೂ ತುಂಬುವುದಿಲ್ಲ. ಕೇವಲ ಹಿಂದುತ್ವದ ಜಪ, ಕೋಮುವಾದ ಹುಟ್ಟು ಹಾಕುವುದೇ ಬಿಜೆಪಿಯ ಗುರಿ. ಇದನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ದೇಶವ್ಯಾಪಿ ಯುವ ಜನಾಂಗವನ್ನು ಜಾಗೃತಿಗೊಳಿಸಲು 'ಉದ್ಯೋಗ ಕೊಡಿ' ಅಭಿಯಾನ ಆರಂಭಿಸಲಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು 'ವಿಜಯ ಕರ್ನಾಟಕ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದ್ದಾರೆ.ಸಂಘಟನೆ, ಹೋರಾಟದ ಮೂಲಕ ಬಂದ ಭದ್ರಾವತಿ ಮೂಲದ ಶ್ರೀನಿವಾಸ್, ದಿಲ್ಲಿಯಲ್ಲಿ ತಮ್ಮದೇ ಛಾಪು ಮೂಡಿಸಿ ಕಾಂಗ್ರೆಸ್ನ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅಚ್ಚುಮೆಚ್ಚಾಗಿರುವ ಶ್ರೀನಿವಾಸ್ ಸದ್ಯ ಕಾಂಗ್ರೆಸ್ಗೆ ಸಿಕ್ಕ ಹೊಸ ಚೈತನ್ಯವಾಗಿದ್ದಾರೆ. ಹಾಗಾದರೆ ಘಟಾನುಘಟಿಗಳು ನಿರ್ವಿಹಿಸಿದ ಈ ಹುದ್ದೆಯನ್ನು ಅಲಂಕರಿಸಿರುವ ಬಿವಿ ಶ್ರೀನಿವಾಸ್ ಅವರ ಮುಂದಿನ ಯೋಜನೆಗಳೇನು? ಯಾವ ರೀತಿ ಕಾಂಗ್ರೆಸನ್ನು ಬೆಳೆಸಲು ಪ್ಲಾನ್ ರೂಪಿಸಿದ್ದಾರೆ? ಇಲ್ಲಿದೆ ಅವರೊಂದಿಗಿನ ವಿಶೇಷ ಸಂದರ್ಶನ.

-ಎಂ.ಎನ್.ಗುರುಮೂರ್ತಿ
ಬೆಂಗಳೂರು:
ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಸಣ್ಣ ಕಾರ್ಯಕರ್ತನಿಗೆ ಪಕ್ಷದಲ್ಲಿ ದೊಡ್ಡ ಅವಕಾಶ ದೊರೆತಿದೆ, ಇದಕ್ಕೆ ನನಗೆ ಖುಷಿಯೂ ಇದೆ. ಆದರೆ, ಇದೇ ವೇಳೆ ನನ್ನ ಮುಂದೆ ಅನೇಕ ದೊಡ್ಡ ಸವಾಲುಗಳಿವೆ. ಒಂದೆಡೆ ಪಕ್ಷ ಸಂಘಟನೆ, ಮತ್ತೊಂದೆಡೆ ಬಿಜೆಪಿಯ ಭ್ರಷ್ಟಾಚಾರ, ವೈಫಲ್ಯಗಳು, ಸುಳ್ಳಿನ ಸರಮಾಲೆಗಳ ವಿರುದ್ಧ ದೇಶದ ಯುವ ಸಮುದಾಯದಲ್ಲಿ ಜನ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ 3 ತಿಂಗಳಲ್ಲಿ ಯುವ ಕಾಂಗ್ರೆಸ್ಗೆ ಹೊಸ ಚೈತನ್ಯ ನೀಡಿ ಹೋರಾಟಕ್ಕೆ ಸಜ್ಜಾಗಲು ಸಂಕಲ್ಪ ಮಾಡಿದ್ದೇನೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ. ದೇಶದ ಯುವ ಜನಾಂಗ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಬಿಜೆಪಿ ಒಂದು ರೀತಿ ಸುಳ್ಳಿನ ಫ್ಯಾಕ್ಟರಿ, ಸುಳ್ಳು ಹೇಳುವುದರಿಂದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ, ಅವರ ಹೊಟ್ಟೆಯೂ ತುಂಬುವುದಿಲ್ಲ. ಕೇವಲ ಹಿಂದುತ್ವದ ಜಪ, ಕೋಮುವಾದ ಹುಟ್ಟು ಹಾಕುವುದೇ ಬಿಜೆಪಿಯ ಗುರಿ. ಇದನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ದೇಶವ್ಯಾಪಿ ಯುವ ಜನಾಂಗವನ್ನು ಜಾಗೃತಿಗೊಳಿಸಲು 'ಉದ್ಯೋಗ ಕೊಡಿ' ಅಭಿಯಾನ ಆರಂಭಿಸಲಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು 'ವಿಜಯ ಕರ್ನಾಟಕ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಯುವ ಘಟಕದ ಪಟ್ಟ ದೊರೆತಿರುವುದು ಹೇಗನಿಸುತ್ತಿದೆ?

ಘಟಾನುಘಟಿಗಳು ಅಲಂಕರಿಸಿ ಯುವ ಕಾಂಗ್ರೆಸ್ ಪಟ್ಟದ ಬಗ್ಗೆ ಮಾತನಾಡಿದ ಬಿವಿ ಶ್ರೀನಿವಾಸ್, ಇದು ಪಟ್ಟವಲ್ಲ, ದೊಡ್ಡ ಜವಾಬ್ದಾರಿ. ಹಿರಿಯರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ. ಈ ಅವಕಾಶ ಕಲ್ಪಿಸಿದ್ದಕ್ಕಾಗಿ ಹೈಕಮಾಂಡ್ ಹಾಗೂ ರಾಜ್ಯದ ನಾಯಕರಿಗೆ ಕೃತಜ್ಞತೆ ಸಲ್ಲಿಸುವೆ. ಲಾಕ್ಡೌನ್ ಸಂದರ್ಭದಲ್ಲಿ ಬೆಂಗಳೂರಿನಿಂದ ದಿಲ್ಲಿಗೆ ರಸ್ತೆ ಮೂಲಕ ತಲುಪಿ ದಿಲ್ಲಿ, ಬಿಹಾರ, ಉತ್ತರ ಪ್ರದೇಶ, ಪಂಜಾಬ್ ಮತ್ತಿತರ ರಾಜ್ಯಗಳ ಸಾವಿರಾರು ಕಾರ್ಮಿಕರು, ನಿರಾಶ್ರಿತರ ಶಿಬಿರಗಳಿಗೆ ನೆರವು ಕಲ್ಪಿಸುವ ಮೂಲಕ ಯುವ ಕಾಂಗ್ರೆಸ್ ಹೊಸ ರೀತಿಯಲ್ಲಿ ಕೆಲಸ ಮಾಡಿತು. ಹಗಲು ರಾತ್ರಿಯೆನ್ನದೆ ದುಡಿದಿದ್ದರಿಂದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕಲ್ಪಿಸಿದ್ದಾರೆ ಎಂದರು.
ಕೊರೊನಾ ಲಸಿಕೆ ದರ ಜನರಿಗೆ ಎಟುಕುವಂತಿರಲಿ - ದೇವೇಗೌಡ ಸಲಹೆ
ಪಕ್ಷ ಸಂಘಟನೆಗೆ ನಿಮ್ಮ ಆದ್ಯತೆಗಳೇನು?

ಎಲ್ಲಾ ರಾಜ್ಯಗಳಲ್ಲೂ ಯುವ ಕಾಂಗ್ರೆಸ್ ಘಟಕಗಳ ಪದಾಧಿಕಾರಿಗಳ ನೇಮಕ, ನೋಂದಣಿಗೆ ಆದ್ಯತೆ. ಸಾಮಾನ್ಯ ವರ್ಗವೂ ಸೇರಿದಂತೆ ದಲಿತರು, ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತ ಸಮುದಾಯದ ಸೇರಿದ ಯುವಕರು, ವಕೀಲರು, ವೈದ್ಯರು ಹೀಗೆ ವಿವಿಧ ವೃತ್ತಿಪರರ ಸೆಳೆಯಲು ಮುಂದಿನ 3 ತಿಂಗಳಲ್ಲಿ ಹೊಸ ಕಾರ್ಯಕ್ರಮ ಸಂಯೋಜಿಸಲಾಗುವುದು. ಈ ನಿಟ್ಟಿನಲ್ಲಿ 'ಟಾಲೆಂಟ್ ಸರ್ಚ್' ನಡೆದಿದೆ ಎಂದಿದ್ದಾರೆ.
ಬಿಬಿಎಂಪಿ ಚುನಾವಣೆ: ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ ಡಿ.ಕೆ. ಶಿವಕುಮಾರ್
ನಿಮ್ಮ ಮುಂದಿರುವ ದೊಡ್ಡ ಸವಾಲು ಏನು?

ಒಂದೆಡೆ ಪಕ್ಷ ಸಂಘಟನೆ ಮತ್ತೊಂದೆಡೆ ಬಿಜೆಪಿ ವಿರುದ್ಧ ಯುವ ಸಮುದಾಯವನ್ನು ಜಾಗೃತಿಗೊಳಿಸುವುದು. ಪ್ರಧಾನಿ ಮೋದಿ ಅವರು ನೀಡಿರುವ ಉದ್ಯೋಗ ಭರವಸೆ ಈಡೇರಿಲ್ಲ. ಯುವಕರಲ್ಲಿ ವ್ಯಾಪಕ ಅಸಮಾಧಾನವಿದ್ದು, ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಯುವ ಕಾಂಗ್ರೆಸ್ನಿಂದ ಆರಂಭಿಸಿರುವ 'ಉದ್ಯೋಗ ಕೊಡಿ' ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಬಿಜೆಪಿಯ ಬಂಡವಾಳ ಜನರಿಗೆ ಗೊತ್ತಾಗುತ್ತಿದೆ. ಇನ್ನುಂದೆ ಅವರು ಮೋಸ ಹೋಗುವುದಿಲ್ಲ. ದೇಶಕ್ಕೆ ವಿಶ್ವಾಸದ್ರೋಹ ಬಗೆದಿರುವ ಮೋದಿ ಅವರು ಯುವಕರ ಭಾವನೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ಯುವ ಸಮುದಾಯ ಸೆಳೆಯುವುದು ನಮ್ಮ ಆದ್ಯತೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ನಿರ್ಧಾರ
ಪ್ರತಿಭಟನೆ, ಧಿಕ್ಕಾರ ಘೋಷಣೆಗೆ ಯುವ ಕಾಂಗ್ರೆಸ್ ಸೀಮಿತವಾಗುತ್ತಿದೆಯಲ್ಲ?

ಈಗ ಕಾಲ ಬದಲಾಗಿದೆ. ಸಂಘಟನೆಯ ಸ್ವರೂಪವೂ ಬದಲಾಗಲಿದೆ. ಯುವ ಜನಾಂಗಕ್ಕೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ಏರ್ಪಡಿಸಲಿದ್ದೇವೆ. ಅವರಲ್ಲಿ ರಾಜಕೀಯ ನಾಯಕತ್ವ ಬೆಳೆಸಲು ತರಬೇತಿ ಕೂಡ ಹಮ್ಮಿಕೊಳ್ಳಲಿದ್ದೇವೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಯುವಕರಲ್ಲಿ ಮೂಡಿದಾಗ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ.
ರಾಜ್ಯದಲ್ಲಿ ಮತ್ತೆ 25 ಸಾವಿರ ದಾಟಿದ ಸಕ್ರಿಯ ಕೇಸ್..! ಹೊಸ ಪ್ರಕರಣದಲ್ಲಿ ಇಳಿಕೆ, ಗುಣಮುಖದಲ್ಲೂ ಕುಸಿತ
ತೇಜಸ್ವಿ ಸೂರ್ಯ ಅವರನ್ನು ಹೇಗೆ ಎದುರಿಸುವಿರಿ?

ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳ ಯುವ ಘಟಕಗಳ ಅಧ್ಯಕ್ಷರು ಕರ್ನಾಟಕದವರೇ. ಹೀಗಾಗಿ ಅವರನ್ನು ಹೇಗೆ ನೀವು ಎದುರಿಸುವಿರಿ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಬಿವಿ ಶ್ರೀನಿವಾಸ್, ತೇಜಸ್ವಿ ಸೂರ್ಯ ಅವರು ಸಂಸದರಾಗಿರಬಹುದು, ಯಾವುದೇ ಹೋರಾಟದಿಂದ ಬಂದವರಲ್ಲ. ಕೋಮುವಾದ ಹುಟ್ಟುಹಾಕುವುದೇ ಅವರ ಕೆಲಸ. ನಮ್ಮದು ಮಹಾತ್ಮ ಗಾಂಧೀಜಿಯವರ ಸಿದ್ಧಾಂತದ ಮೇಲೆ ರೂಪಿತಗೊಂಡಿರುವ 'ವಿಷನರಿ ಪಾರ್ಟಿ'. ಅವರದು 'ಟೆಲಿವಿಷನ್ ಪಾರ್ಟಿ'. ಕೇವಲ ಪ್ರಚಾರ ಅಷ್ಟೆ. ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಭೂಮಿಕೆ ಹಾಕಿದ್ದೇ ನಾವು. ಪಂಜಾಬ್ನಲ್ಲಿ ನಡೆದ ಟ್ರ್ಯಾಕ್ಟರ್ ಹೋರಾಟದ ರೂವಾರಿಯೇ ನಾನು. ಈ ರೀತಿಯ ಹೋರಾಟ ಅವರು ಮಾಡಲಿ, ಕೇವಲ ಮಾತುಗಾರಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ.
from India & World News in Kannada | VK Polls https://ift.tt/3gjkdxx