ಹೊಸದಿಲ್ಲಿ: ಮಾರಕ ವಿರುದ್ಧದ ಹೋರಾಟದಲ್ಲಿ ಭಾರತದ ಜಯ ನಿಶ್ಚಿತವಾಗಿದ್ದು, ಈ ಬಾರಿಯ ವಿಜಯದಶಮಿ ಈ ಜಯದ ಮುನ್ಸೂಚನೆ ಹೊತ್ತು ಬಂದಿದೆ ಎಂದು ಹೇಳಿದರು. ತಮ್ಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಕಾಲದಲ್ಲಿ ದೇಶ ಅತ್ಯಂತ ಹೆಚ್ಚು ಜವಾಬ್ದಾರಿಯುತವಾಗಿ ಹಬ್ಬ ಆಚರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:
- ವಿಜಯದಶಮಿ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ.
- ಕೊರೊನಾ ಕಾಲದಲ್ಲಿ ದೇಶ ಅತ್ಯಂತ ಹೆಚ್ಚು ಜವಾಬ್ದಾರಿಯುತವಾಗಿ ಹಬ್ಬಗಳನ್ನು ಆಚರಿಸುತ್ತಿದೆ.
- ಈ ಸರಣಿ ಹಬ್ಬಗಳಲ್ಲಿ ನಿಮ್ಮ ಮನೆಗೆಲಸದವರು, ನಿಮ್ಮ ಪ್ರದೇಶಗಳಲ್ಲಿ ಹಣ್ಣು ಹಾಗೂ ತರಕಾರಿ ಮಾರುವವರನ್ನೂ ಶಾಮೀಲು ಮಾಡಿಕೊಳ್ಳಿ.
- ದೇಶದ ಗಡಿಗಳನ್ನು ಕಾಯುತ್ತಿರುವ ನಮ್ಮ ವೀರ ಸೈನಿಕರ ಗೌರವಾರ್ಥ ಒಂದು ದೀಪ ಬೆಳಗಿ ಹಬ್ಬ ಆಚರಿಸಲು ಪ್ರಧಾನಿ ಮೋದಿ ಮನವಿ.
- ಹಬ್ಬಗಳ ಕಾಲದಲ್ಲಿ ವೋಕಲ್ ಫಾರ್ ಲೋಕಲ್ ನೀತಿಯನ್ನು ಬೆಎಂಬಲಿಸುವಂತೆ ಪ್ರಧಾನಿ ಮೋದಿ ಮನವಿ.
- ಖಾದಿ ಮಾಸ್ಕ್ ಕೊಳ್ಳುವುದರ ಮೂಲಕ ದೇಶೀಯ ವಸ್ತುಗಳನ್ನು ಕೊಳ್ಳುಲು ಜನ ಮುಂದಾಗಬೇಕು.
- ದೇಶೀಯ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.
- ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮ ಜಯಂತಿ ಸನೀಹದಲ್ಲಿದ್ದು, ದೇಶದ ಏಕತೆಯನ್ನು ನಾವು ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪ ಮಾಡುವ ಅವಕಾಶ ಬಂದಿದೆ.
from India & World News in Kannada | VK Polls https://ift.tt/3dZ8SS3