ವಿದ್ಯುತ್‌ ಉಳಿತಾಯ ಮಾಡುವ ಗ್ರಾಪಂ: ಸಮೇತನಹಳ್ಳಿಯಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆ!

ಟಿ.ಎನ್‌. ತೇಜಸ್‌ ಜಡಿಗೇನಹಳ್ಳಿ ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಗ್ರಾಮ ಪಂಚಾಯಿತಿ ಅನ್ಯ ಗ್ರಾಪಂಗಳಿಗಿಂತ ಭಿನ್ನವಾಗಿ ವಿದ್ಯುತ್‌ ಸದ್ಬಳಕೆಗೆ ಮುಂದಾಗಿದ್ದು, ಪ್ರತೀ ವರ್ಷ ಬೀದಿ ದೀಪಗಳು ಮತ್ತು ವಿದ್ಯುತ್‌ ದೀಪಗಳು ಸೇರಿ ಹೆಚ್ಚು ಖರ್ಚು ಭರಿಸುತ್ತಿದ್ದ ಈಗ ಸೋಲಾರ ವ್ಯವಸ್ಥೆಗೆ ಮೊರೆ ಹೋಗಿದ್ದು, ಅದರಲ್ಲಿ ಯಶಸ್ಸನ್ನು ಕಾಣುವ ತವಕದಲ್ಲಿದ್ದು, ಗ್ರಾಮ ಪಂಚಾಯಿತಿಯ ಆದಾಯ ಸೋರಿಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಳೂರು ಗ್ರಾಮದಲ್ಲಿ ಸೋಲಾರ್‌ ಸಹಿತ ಪವನ ವಿದ್ಯುತ್‌ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದ್ದು, ಇದರಿಂದ ಗ್ರಾಮದ ಸುಮಾರು 20 ಬೀದಿ ದೀಪಗಳಿಗೆ ವಿದ್ಯುತ್‌ ಸರಬರಾಜು ಮಾಡುವುದರ ಜತೆಗೆ ಗ್ರಾಮದ ಮದ್ಯಬಾಗದ ಬೃಹತ್‌ ವೃತ್ತದಲ್ಲಿ ಹೈಮಾಸ್‌ ದೀಪಗಳನ್ನು ಅಳವಡಿಸಿ ಸಂಪೂರ್ಣ ಗ್ರಾಮವನ್ನು ಕತ್ತಲೆಯಿಂದ ಮುಕ್ತಿಗೊಳಿಸುವ ಮೂಲಕ ಸೋಲರ್‌ ವಿದ್ಯುತ್‌ ಬಳಸಿ ಸ್ವಾವಲಂಬನೆಯತ್ತ ಗ್ರಾಮ ಪಂಚಾಯಿತಿಯು ಮುನ್ನಡೆಯುತ್ತಿದೆ. ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಚಾವಣಿ ಮೇಲೆಯೇ ಸೋಲಾರ್‌ ಅಳವಡಿಕೆ ಮಾಡಲಾಗಿದೆ. ಪಂಚಾಯಿತಿ ಒಳಗೆ ದೊಡ್ಡ ಫ್ಯಾನಲ್‌ ಹಆಗೂ ಬ್ಯಾಟರಿಗಳನ್ನು ಅಳವಡಿಕೆ ಮಾಡಿ ಇಡೀ ಗ್ರಾಮದ ಎಲ್ಲಾ ಬೀದಿ ದೀಪಗಳಿಗೆ ಸೋಲಾರ್‌ ಸಂಪರ್ಕ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಈ ಯೋಜನೆಯನ್ನು ಜಾರಿ ಮಾಡುವ ಉದ್ದೇಶವನ್ನು ಹೊಂದಿದ್ದು ಇದರಿಂದ ಪಂಚಾಯಿತಿ ಮಟ್ಟದ ಸಂಪೂರ್ಣ ವಿದ್ಯುತ್‌ ಬಿಲ್‌ ಪಾವತಿಯಿಂದ ಹೊರಬರುವ ಚಿಂತನೆ ನಡೆಸುತ್ತಿದ್ದಾರೆ. ಈಗಾಗಲೇ ಈ ಹಿಂದೆಯೇ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮ ಯಾವುದಾದರೂ ಒಂದು ಅನುದಾನದಲ್ಲಿ ಸೋಲಾರ್‌ ಪದ್ಧತಿ ಅಳವಡಿಸಿಕೊಂಡು ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು. ವಿದ್ಯುತ್‌ ಬಿಲ್‌ ಪಾವತಿಸಿವುದರಿಂದ ಹೊರ ಬಂದು ಅದರ ಉಳಿತಾಯ ಹಣವನ್ನು ಇಲ್ಲೇ ಬಳಕೆ ಮಾಡುವಂತೆ ಸರಕಾರದಿಂದ ಚಿಂತನೆ ಮಾಡಿತ್ತು. ಆದರೆ ಇದರ ಪ್ರಯೋಜನ ಕೆಲವೊಂದು ಪಂಚಾಯಿತಿಗಳು ಮಾತ್ರ ನಡೆಸುತ್ತಿದ್ದು. ಉಳಿದ ಪಂಚಾಯಿತಿಗಳು ನಮ್ಮ ಬಳಿ ಯಾವುದೇ ಅನುದಾನವಿಲ್ಲವೆಂದು ಈ ಯೋಜನೆಗೆ ಎಳ್ಳು ನೀರು ಬಿಟ್ಟು ವಿದ್ಯುತ್‌ ಬಿಲ್‌ ಪಾವತಿಸುತ್ತಿದ್ದಾರೆ. ಸುಮಾರು 4.9 ಲಕ್ಷ ವೆಚ್ಚದಲ್ಲಿ ರಾಜ್ಯದಲ್ಲೆ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು, ಗ್ರಾಮದಲ್ಲಿ ಸ್ವಯಂ ವಿದ್ಯುತ್‌ ಉತ್ಪಾದನೆ ಮಾಡಿ ಸಂಪೂರ್ಣ ಬೀದಿ ದೀಪಗಳಿಗೆ ಸಂಪರ್ಕ ನೀಡಲಾಗಿದೆ. ಇದರಿಂದ ವಿದ್ಯುತ್‌ ಬಿಲ್‌ ಪಾವತಿಸುವ ಹೊರೆಯಿಂದ ಹೊರಬರಲಾಗಿದೆ. ಈ ಹಿಂದೆ ನಡವತ್ತಿ ಗ್ರಾಮದಲ್ಲಿನ ಬೀದಿ ದೀಪಗಳನ್ನು ಸಂಪೂರ್ಣ ಸೋಲಾರ್‌ ನಿಂದ ಉರಿಸಲಾಗುತ್ತಿದ್ದು ಆ ಗ್ರಾಮದಲ್ಲಿ ಸಹ ವಿದ್ಯುತ್‌ನಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ದಿಲೀಪ್‌ ಕುಮಾರ್‌ ಪಿಡಿಒ, ಸಮೇತನಹಳ್ಳಿ ಗ್ರಾಪಂ ರಾಜ್ಯದಲ್ಲೇ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗಿದ್ದು, ಸಮೇತನಹಳ್ಳಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಿಗೂ ಈ ರೀತಿಯ ವ್ಯವಸ್ತೆ ಮಾಡಲು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು. ಪ್ರತಿ ಗ್ರಾಮಗಳಿಗೆ ಸರಕಾರ ಸೋಲಾರ್‌ ಜತೆಗೆ ಪವನ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ನೀಡಿದಲ್ಲಿ ರಾಜ್ಯದಲ್ಲಿ ವಿದ್ಯುತ್‌ ಕೊರತೆ ನೀಗುವುದರ ಜೊತೆಗೆ ಪ್ರತಿ ಗ್ರಾಮಗಳು ಸ್ವಾವಲಂಬನೆಯಾಗಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಸಾಧ್ಯ. ಶ್ರೀನಿವಾಸ್‌, ಗ್ರಾಪಂ ಅಧ್ಯಕ್ಷ, ಸಮೇತನಹಳ್ಳಿ ಗ್ರಾಪಂ ಗ್ರಾಮ ಪಂಚಾಯಿತಿ ವತಿಯಿಂದ ಜಾರಿ ಮಾಡಿರುವ ಈ ಯೋಜನೆಯಿಂದ ವಿದ್ಯುತ್‌ ಹೊರೆಯಿಂದ ಪಾರಾಗಬಹುದು. ಇದರ ಜೊತೆಗೆ ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಮತ್ತೊಂದು ವ್ಯವಸ್ಥೆಯನ್ನು ಸಹ ಕೈಗೊಂಡಿರಬೇಕು. ಈಗಾಗಲೇ ಯಾವ ಯಾವ ಗ್ರಾಮದಲ್ಲಿ ವಿದ್ಯುತ್‌ ಬಿಲ್‌ ಹೊರೆ ಕಡಿಮೆಯಾಗಿದೆಯೋ ಆ ಗ್ರಾಮದಲ್ಲಿ ನಕಲಿ ವಿದ್ಯುತ್‌ ಬಿಲ್‌ ಪಡೆಯದೆ ಸರಕಾರದ ಆದಾಯವನ್ನು ಉಳಿಸಬೇಕು. ಭರತ್‌, ಸ್ಥಳೀಯ ವಾಸಿ


from India & World News in Kannada | VK Polls https://ift.tt/2HsZpa2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...