ಕೇರಳ ಗರ್ಭಿಣಿ ಆನೆ ಹತ್ಯೆ : ಉದ್ಯಮಿ, ಪ್ರಾಣಿ ಪ್ರೇಮಿ ರತನ್‌ ಟಾಟಾ ಹೇಳಿದ್ದಿದು..!

ಹೊಸದಿಲ್ಲಿ: ಕಳೆದ ಮೇ 27 ರಂದು ಕೇರಳದ ಮಣಪ್ಪುರಂನಲ್ಲಿ ನಡೆದಿದ್ದ ಅಮಾಯಕ ಪ್ರಕರಣ ಸಂಬಂಧ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಂತೂ ನೆಟ್ಟಿಗರು ಆನೆ ಬಲಿ ತೆಗೆದುಕೊಂಡವರ ವಿರುದ್ಧ ಕಿಡಿಕಾರಿದ್ದರಲ್ಲದೇ, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು. ದೇಶಾದ್ಯಂತ ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಗರ್ಭಿಣಿ ಆನೆ ಕೊಲೆ ಪ್ರಕರಣವನ್ನು ವಿರೋಧಿಸಿದ್ದರು. ಇದೀಗ ಕೈಗಾರಿಕೋದ್ಯಮಿ ಅವರು ಕೂಡ ಆನೆ ದುರಂತವನ್ನು ವಿರೋಧಿಸಿದ್ದಾರೆ. ಅಲ್ಲದೇ, ಪ್ರಾಣಿಗಳಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದ್ದಾರೆ. ಕೇರಳದಲ್ಲಿನ ಗರ್ಭಿಣಿ ಆನೆ ಪ್ರಕರಣವು "ಉದ್ದೇಶ ಪೂರ್ವಕ ಕೊಲೆ" ಎಂದು ಬುಧವಾರ ಹೇಳಿರುವ ರತನ್‌ ಟಾಟಾ, ಪ್ರಾಣಿಗಳಿಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಮಣಪ್ಪುರಂನಲ್ಲಿ ಗರ್ಭಿಣಿ ಆನೆಯು ಸಿಡಿಮದ್ದು ತುಂಬಿದ್ದ ಅನಾನಸ್‌ ಹಣ್ಣನ್ನು ತಿಂದಿತ್ತು. ಬಾಯಿಯ ಒಳಗಡೆ ಸಿಡಿಮದ್ದು ಸ್ಫೋಟಿಸಿ ಕೆಳದವಡೆ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಇದರಿಂದ ಆನೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಮೇ.27ರಂದು ಆನೆಯು ಸೈಲೆಂಟ್‌ ವ್ಯಾಲಿ ಅರಣ್ಯದಲ್ಲಿ ಕೊನೆಯುಸಿರೆಳೆದಿತ್ತು. "ಪಟಾಕಿ ತುಂಬಿದ ಅನಾನಸ್‌ನಿಂದ ಆನೆಗೆ ಆಹಾರವನ್ನು ನೀಡುವ ಮೂಲಕ ಜನರ ಗುಂಪೊಂದು ಮುಗ್ಧ, ನಿಷ್ಕ್ರಿಯ, ಗರ್ಭಿಣಿ ಆನೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ತಿಳಿದು ನಾನು ದುಃಖಿತನಾಗಿದ್ದೇನೆ ಮತ್ತು ಆಘಾತಗೊಂಡಿದ್ದೇನೆ," ಎಂದು ರತನ್ ಟಾಟಾ ಟ್ವೀಟ್ ಮಾಡಿದ್ದಾರೆ. "ಮುಗ್ಧ ಪ್ರಾಣಿಗಳ ವಿರುದ್ಧದ ಇಂತಹ ಕ್ರಿಮಿನಲ್ ಕೃತ್ಯಗಳು, ಇತರ ಮಾನವರ ವಿರುದ್ಧದ ಪೂರ್ವನಿಯೋಜಿತ ಕೊಲೆಗಿಂತ ಭಿನ್ನವಾಗಿರುವುದಿಲ್ಲ. ಪ್ರಾಣಿಗಳಿಗೂ ನ್ಯಾಯ ಸಿಗಬೇಕು," ಎಂದು ಹಿರಿಯ ಉದ್ಯಮಿ ಹಾಗೂ ಪ್ರಾಣಿ ಪ್ರೇಮಿ ಆಗ್ರಹಿಸಿದ್ದಾರೆ. ಈ ಕ್ರೂರ ಹತ್ಯೆಯ ಬಗ್ಗೆ ವನ್ಯಜೀವಿ ಅಪರಾಧ ತನಿಖಾ ತಂಡ ತನಿಖೆ ನಡೆಸಲಿದೆ ಎಂದು ಕೇರಳ ಸರ್ಕಾರ ಬುಧವಾರ ಹೇಳಿದ್ದು, ಕೇಂದ್ರವು ಘಟನೆಯ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದು ರಾಜ್ಯದಿಂದ ವರದಿ ಕೋರಿದೆ.


from India & World News in Kannada | VK Polls https://ift.tt/2MrauqR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...