ಪಾಲಕ್ಕಾಡ್( ): ಕೇರಳದ ಗರ್ಭಿಣಿ ಆನೆ ಸಾವು ದುರಂತಕ್ಕೆ ದೇಶವೇ ಮಿಡಿಯುತ್ತಿದೆ. ಪೈನಾಪಲ್ ಬಾಂಬ್ ಆನೆಯ ಬಾಯಲ್ಲಿ ಸ್ಫೋಟಗೊಂಡ ಪರಿಣಾಮ 14 ದಿನಗಳ ಕಾಲ ಆಹಾರವನ್ನೇ ಸೇವಿಸಿಲ್ಲ ಎಂಬ ಅಂಶ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಗೆ ಬಂದಿದ್ದ ಗರ್ಭಿಣಿ ಆನೆ ಹಸಿವು ತಾಳಲಾರದೆ ಅನನಾಸು ಹಣ್ಣು ತಿಂದಿತ್ತು. ಆದರೆ ಅದರಲ್ಲಿ ಅಡಗಿಸಿಟ್ಟಿದ್ದ ನಾಡ ಬಾಂಬ್ ಆನೆಯ ಬಾಯಲ್ಲಿ ಸ್ಪೋಟಗೊಂಡಿತ್ತು. ಇದರಿಂದ ಗಂಭೀರ ಗಾಯಗೊಂಡ ಆನೆಗೆ ಆಹಾರ ಸೇವಿಸಲು ಸಾಧ್ಯವಾಗಿರಲಿಲ್ಲ. ಕನಿಷ್ಠ ನೀರನ್ನು ಕುಡಿಯಲೂ ಸಾಧ್ಯವಾಗದೆ ಸಾಯುವ ಮುನ್ನ ಸಾಕಷ್ಟು ನೋವನ್ನು ಅನುಭವಿಸಿದೆ. ಆನೆಯ ಮರಣೋತ್ತರ ಪರೀಕ್ಷೆಯನ್ನು ಮನ್ನಾರ್ ಕಾಡ್ ವಿಭಾಗೀಯ ಆಸ್ಪತ್ರೆಯ ವೈದ್ಯರು ನಡೆಸಿದ್ದು ಸ್ಪೋಟದ ಪರಿಣಾಮ ಶ್ವಾಸಕೋಶದ ಅಘಾತದಿಂದಾಗಿ ಆನೆ ಸಾವನ್ನಪ್ಪಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಸ್ಪೋಟದಿಂದ ಆಹಾರ ಸೇವಿಸಲಾಗದೆ ಆನೆ ನೋವು ನಿವಾರಿಸಿಕೊಳ್ಳಲು ನೀರಲ್ಲೇ ಕುಳಿತಿದ್ದು. 14 ದಿನಗಳ ಕಾಲ ನೋವು ಹಾಗೂ ಹಸಿವು ಸಹಿಸಿಕೊಂಡು ಕೊನೆಗೆ ಮೃತಪಟ್ಟಿತ್ತು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
from India & World News in Kannada | VK Polls https://ift.tt/3dBV4fg