ಭಾರತ ನಿರಾಳ; ಪಾಕಿಸ್ತಾನದಿಂದ ಡೇವಿಸ್ ಕಪ್ ತಾಣ ಸ್ಥಳಾಂತರ

ಮುಂಬಯಿ: ಪಾಕಿಸ್ತಾನದಿಂದ ತಾಣವನ್ನು ಸ್ಥಳಾಂತರ ಮಾಡಲಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಫೇಡರೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಭಾರತೀಯ ತಂಡವು ನಿಟ್ಟುಸಿರು ಬಿಡುವಂತಾಗಿದೆ. ಭದ್ರತಾ ಕಾರಣಗಳಿಂದಾಗಿ ಡೇವಿಸ್ ಕಪ್ ತಾಣವನ್ನು ತಟಸ್ಥ ಸ್ಥಾನಕ್ಕೆ ಬದಲಾಯಿಸುವಂತೆ ಅಂತಾರಾಷ್ಟ್ರೀಯ ಟೆನಿಸ್ ಫೇಡರೇಷನ್ ಸೂಚನೆ ನೀಡಿದೆ. ಟೆನಿಸ್ ಕಾರ್ಯ ನಿರ್ವಾಹಕ ಮಂಡಳಿಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ಮೊದಲು ಭಾರತ ಹಾಗೂ ನಡುವಣ ಡೇವಿಸ್ ಕಪ್ ಏಷ್ಯಾ/ಒಷಿಯಾನಿಯಾ ಗುಂಪಿನ 1 ಹಣಾಹಣಿಯು ಸೆಪ್ಟೆಂಬರ್ 14 ಹಾಗೂ 15ರಂದು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿತ್ತು. ಇದೀಗ ಭದ್ರತಾ ಕಳವಳದ ಹಿನ್ನಲೆಯಲ್ಲಿ ನವೆಂಬರ್ 29-30ಕ್ಕೆ ಮುಂದೂಡಲಾಗಿದೆ. ಅಲ್ಲದೆ ತಟಸ್ಥ ತಾಣವನ್ನು ಐದು ದಿನಗಳೊಳಗೆ ನಿರ್ಧರಿಸುವಂತೆ ಪಾಕ್‌ಗೆ ಸೂಚನೆ ನೀಡಲಾಗಿದೆ. ಈ ಮೊದಲು ಅಖಿಲ ಭಾರತ ಟೆನಿಸ್ ಸಂಸ್ಥೆಯು, ಪಾಕಿಸ್ತಾನ ವಿರುದ್ಧದ ಡೇವಿಸ್ ಕಪ್ ತಾಣವನ್ನು ಬದಲಾಯಿಸುವಂತೆ ಬೇಡಿಕೆ ಮುಂದಿಟ್ಟಿತ್ತು. ಆಟಗಾರರ ಭದ್ರತೆಗೆ ಮೊದಲ ಆದ್ಯತೆಯಾಗಿದೆ. ಭದ್ರತೆಯ ಬಗ್ಗೆ ವಿಮರ್ಶೆಯ ಬಳಿಕ ಐಟಿಎಫ್ ಸ್ವತಂತ್ರ ಸಲಹಾ ಸಮಿತಿಯು ನಿರ್ಧಾರವನ್ನು ಪ್ರಕಟಿಸಿದೆ. ಕಳೆದೊಂದು ದಶಕದಿಂದ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಆತಿಥ್ಯದ ಡೇವಿಸ್ ಕಪ್ ತಾಣವನ್ನು ತಟಸ್ಥ ತಾಣಗಳಿಗೆ ಸ್ಥಳಾಂತರ ಮಾಡಲಾಗುವ ಪ್ರವೃತ್ತಿ ಕಂಡುಬಂದಿದೆ. ಈ ಮಧ್ಯೆ 2017ರಲ್ಲಿ ಇರಾನ್ ವಿರುದ್ಧ ಪಂದ್ಯಾವಳಿಯನ್ನು ಪಾಕ್‌ನಲ್ಲೇ ಆಯೋಜಿಸಲಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JQChjt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...