ಮಂಗಳೂರು: ಮೈದಾನದಲ್ಲಿ ನಿಂತು ಚರ್ಚಿಸುತ್ತಿದ್ದ ಗುಂಪೊಂದರ ಬಳಿ ತೆರಳಿ ' ಹಾಕಿ' ಎಂದು ಸಲಹೆ ನೀಡಿದಕ್ಕೆ ಯುವಕರ ತಂಡವೊಂದು ಪಂಚಾಯಿತಿ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಮಲ್ಲೂರು ಬದ್ರಿಯಾ ನಗರದಲ್ಲಿ ಮಂಗಳವಾದ ನಡೆದಿದೆ. ಮಲ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ (45) ಅವರೇ ಹಲ್ಲೆಗೊಳಗಾದವರು. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪಿಡಿಓ ರಾಜೇಂದ್ರ ಶೆಟ್ಟಿ ಅವರು ಬದ್ರಿಯಾ ನಗರದಿಂದ ಉಳಾಯಿಬೆಟ್ಟು ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಬದ್ರಿಯಾನಗರ ಕ್ರಿಕೆಟ್ ಮೈದಾನದಲ್ಲಿ ಯುವಕರ ತಂಡವೊಂದು ಗುಂಪು ಸೇರಿ ಚರ್ಚಿಸುತ್ತಿದ್ದರು. ಈ ವೇಳೆ ಆ ಪ್ರದೇಶಕ್ಕೆ ತೆರಳಿದ ಪಿಡಿಓ ' ಮಾಸ್ಕ್ ಹಾಕಿ.. ಸಾಮಾಜಿಕ ಅಂತರವನ್ನು ಪಾಲಿಸಿ' ಎಂದು ಯುವಕರಿಗೆ ಸಲಹೆ ನೀಡಿದ್ದಾರೆ. ಇದನ್ನು ಯುವಕರ ತಂಡ ನಿರ್ಲಕ್ಷಿಸಿದ್ದು, ಇದರಿಂದ ಬೇಸತ್ತ ಪಿಡಿಓ ಅವರು ಮೊಬೈಲ್ನಿಂದ ಫೋಟೋ ಕ್ಲಿಕ್ಕಿಸಿ ಮರಳಿ ಪಂಚಾಯಿತಿಯತ್ತ ತೆರಳಿದ್ದಾರೆ. ಇದರಿಂದ ಕ್ಷುದ್ರಗೊಂಡ ಯುವಕರು ನೇರವಾಗಿ ಮಲ್ಲೂರು ಪಂಚಾಯಿತಿ ಬಳಿ ತೆರಳಿ, ಪಿಡಿಓ ಅವರ ಮೊಬೈಲ್ ಕಸಿದು ಫೋಟೋ ಡಿಲೀಟ್ ಮಾಡಿದ್ದಲ್ಲದೆ, ಗಂಭೀರ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಪಂಚಾಯಿತಿ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಸ್ಥಳೀಯರು ಕೂಡಲೇ ರಾಜೇಂದ್ರ ಶೆಟ್ಟಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಗಳಿಗೆ ಶೋಧ! ವಿಷಯ ತಿಳಿದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಯಲ್ಲಿ ಸುಮಾರು 5 ಮಂದಿಯ ತಂಡವಿದ್ದು, ಆರೋಪಿಗಳ ಬೈಕ್ ನಂಬರ್ ಮತ್ತು ಮಾಹಿತಿ ಲಭಿಸಿದೆ. ಈ ನಿಟ್ಟಿನಲ್ಲಿಆರೋಪಿಗಳಿಗೆ ಶೋಧ ನಡೆಯುತ್ತಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಜಾ ವ್ಯಸನಿಗಳ ಕೃತ್ಯ?!ಹಲ್ಲೆಗೈದ 6 ಮಂದಿ ಆರೋಪಿಗಳು ಕೂಡಾ ಸಂಘಟನೆಯೊಂದರ ಕಾರ್ಯಕರ್ತರಾಗಿದ್ದು, ಗಾಂಜಾ ಚಟುವಟಿಕೆಯಲ್ಲೂ ಭಾಗಿಯಾಗಿದ್ದಾರೆಂದು ಆರೋಪಗಳು ಕೇಳಿ ಬರುತ್ತಿದೆ. ಈ ವ್ಯಾಪ್ತಿಯಲ್ಲಿಗಾಂಜಾ ಚಟುವಟಿಕೆ ಅವ್ಯಾಹತವಾಗಿದ್ದು, ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
from India & World News in Kannada | VK Polls https://ift.tt/3oSksDT