ಹೊಸದಿಲ್ಲಿ: ಮೇ.2 ರಂದು ಹಾಗೂ ನಡುವೆ ಪಂದ್ಯ ನಡೆದಿದ್ದ ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದ ಇಬ್ಬರು ಬುಕ್ಕಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬುಧವಾರ ಈ ಬಗ್ಗೆ ಬೆಳವಣಿಗೆಗಳನ್ನು ಸ್ಪಷ್ಟಪಡಿಸಿರುವ ಎಎನ್ಐ ಸುದ್ದಿಸಂಸ್ಥೆ, ಅನುಮತಿ ಇಲ್ಲದೆ ಕ್ರೀಡಾಂಗಣಕ್ಕೆ ಪ್ರವೇಶ ಮಾಡಿದ್ದ ಇಬ್ಬರು ಬುಕ್ಕಿಗಳನ್ನು ವಿವಿಧ ಸೆಕ್ಷನ್ಗಳ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಕೋವಿಡ್-19 ತಲ್ಲಣದಿಂದಾಗಿ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಅನಿರ್ದಿಷ್ಟವಾಧಿಗೆ ಮುಂದೂಡುವುದಕ್ಕೂ ಮುನ್ನ ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಹೈದರಾಬಾದ್ ತಂಡ 55 ರನ್ಗಳಿಂದ ಸೋಲು ಅನುಭವಿಸಿತ್ತು. ಈ ಇಬ್ಬರೂ ಬುಕ್ಕಿಗಳಿಗೆ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಬಂಧಿತರು ನಕಲಿ ಮಾನ್ಯತಾ ಐಡಿ ಕಾರ್ಡ್ಗಳೊಂದಿಗೆ ಎಸ್ಆರ್ಎಚ್ ಹಾಗೂ ಆರ್ಆರ್ ಪಂದ್ಯ ವೀಕ್ಷಿಸಲು ಅಂಗಳಕ್ಕೆ ಆಗಮಿಸಿದ್ದರು. ಇದೀಗ ಅವರನ್ನು ಐದು ದಿನಗಳವರೆಗೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಫಿಕ್ಸಿಂಗ್ ಪ್ರಚೋದನೆ ಸಂಬಂಧ ದಿಲ್ಲಿ ಪೊಲೀಸ್ ಕ್ರೈಮ್ ಬ್ರಾಂಚ್ ತನಿಖೆ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದ ಒಂದು ಗಂಟೆ ಬೆನ್ನಲ್ಲೆ ಬುಕ್ಕಿಗಳನ್ನು ಬಂಧಿಸಿದ ಸುದ್ದಿ ಹೊರ ಬಂದಿದೆ. ಪಂಜಾಬ್ನ ಸ್ವರೂಪ್ ನಗರದ ಕೃಷ್ಣನ್ ಗಾರ್ಗ್ ಹಾಗೂ ಜಲಾಂಧರ್ನ ಮನೀಷ್ ಕನ್ಸಾಲ್ ಬಂಧಿತರು. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಸ್ಟೇಡಿಯಂನ ವಿಐಪಿ ದ್ವಾರದ ಮೂಲಕ ಈ ಇಬ್ಬರೂ ನಕಲಿ ಐಡಿ ಕಾರ್ಡ್ಗಳ ಮೂಲಕ ಆಗಮಿಸಿದ್ದರು. ಬಂಧನದ ನಂತರ ಪೊಲೀಸರಿಗೆ ಈ ಇಬ್ಬರೂ ತೃಪ್ತಿದಾಯಕ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಹೆಚ್ಚಿನ ತನಿಖೆಯು ಬುಕ್ಕಿಗಳ ಉದ್ದೇಶಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ ಹಾಗೂ ಇಬ್ಬರು ಬುಕ್ಕಿಗಳನ್ನು ದೊಡ್ಡ ಮಟ್ಟದ ಬೆಟ್ಟಿಂಗ್ ಭಾಗವೆಂದು ಪರಿಗಣಿಸಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3b4iElM