ವಿಶ್ವಕಪ್‌ ಫೈನಲ್‌ಗೆ ಟಿಕೆಟ್‌ ಕೊಡಿಸಿ ಎಂದ ಅಖ್ತರ್‌ಗೆ ಖಡಕ್‌ ರೀಪ್ಲೆ ಕೊಟ್ಟಿದ್ದ ಭಜ್ಜಿ!

ಹೊಸದಿಲ್ಲಿ: ಭಾರತ ತಂಡ 2011ರ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದು ಇಂದಿಗೆ 10 ವರ್ಷಗಳಾಗಿವೆ. ಎರಡನೇ ಬಾರಿ ವಿಶ್ವಕಪ್‌ ಗೆದ್ದ ಮಹತ್ವದ ಕ್ಷಣಗಳನ್ನು ಇದೀಗ ಹಾಲಿ ಹಾಗೂ ಮಾಜಿ ಆಟಗಾರರು ಸ್ಮರಿಸಿಕೊಂಡಿದ್ದಾರೆ. ಅದರಂತೆ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ಹರಭಜನ್‌ ಸಿಂಗ್‌ ಕೂಡ ವಿಶ್ವಕಪ್‌ ಟೂರ್ನಿಯ ಪಯಣದ ಕೆಲ ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೈದಾನದಲ್ಲಿ ಹಲವು ವಾಗ್ವಾದಗಳ ಹೊರತಾಗಿಯೂ ಹರಭಜನ್‌ ಸಿಂಗ್‌ ಹಾಗೂ ಪಾಕ್‌ ಮಾಜಿ ವೇಗಿ ಶೊಯೆಬ್ ಅಖ್ತರ್ ಅವರ ನಡುವೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದರು. ಅದರಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಅಖ್ತರ್‌ ಜತೆಗಿನ ಸಂಭಾಷಣಿಯೊಂದನ್ನು ಭಜ್ಜಿ ಇದೀಗ ಸ್ಮರಿಸಿಕೊಂಡಿದ್ದಾರೆ. ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ 2011 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯ ವೀಕ್ಷಿಸಲು ತಮ್ಮ ಕುಟುಂಬಕ್ಕೆ ಟಿಕೆಟ್‌ಗಳನ್ನು ಕೊಡಿಸುವಂತೆ ಹರಭಜನ್‌ ಸಿಂಗ್‌ಗೆ ಕೇಳಿದ್ದರು. ಅದರಂತೆ ಹಿರಿಯ ಆಫ್‌ ಸ್ಪಿನ್ನರ್‌ ಟಿಕೆಟ್‌ಗಳನ್ನು ವ್ಯವಸ್ಥೆ ಮಾಡಿಸಿದ್ದರು. ಅದೇ ರೀತಿ ಮುಂಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೂ ಟಿಕೆಟ್‌ಗಳನ್ನು ದಯಮಾಡಿ ವ್ಯವಸ್ಥೆ ಮಾಡಿ ಎಂದು ಅಖ್ತರ್‌ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಹರಭಜನ್‌ ಸಿಂಗ್‌, ಭಾರತ ಫೈನಲ್‌ ತಲುಪಲಿದೆ ಹಾಗೂ ಪಾಕಿಸ್ತಾನಕ್ಕೆ ಅವಕಾಶವೇ ಇಲ್ಲ. ಹಾಗಾಗಿ, ನೀವು ವೀಕ್ಷಕನಾಗಿ ಬಂದು ಪಂದ್ಯ ನೋಡಿ ಎಂದು ಅಖ್ತರ್‌ ಅವರನ್ನು ಭಜ್ಜಿ ಕಿಚಾಯಿಸಿದ್ದರು. ಸ್ಪೋರ್ಟ್ಸ್ ಟುಡೇ ಜತೆ ಇದನ್ನು ಹಂಚಿಕೊಂಡ ಹರಭಜನ್‌ ಸಿಂಗ್‌, "ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ರಾತ್ರಿ ಶೊಯೆಬ್‌ ಅಖ್ತರ್ ತಮ್ಮ ಕುಟುಂಬ ಸದಸ್ಯರಿಗೆ 4 ಟಿಕೆಟ್‌ಗಳನ್ನು ಕೊಡಿಸುವಂತೆ ನನ್ನ ಬಳಿ ಕೇಳಿದ್ದರು. ಅದರಂತೆ ನಾನು ಇದರಲ್ಲಿ ಸಮಸ್ಯೆ ಏನೂ ಇಲ್ಲ, ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ಗೆ ಕರೆ ಕೊಡಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾಲ್ಕು ಟಿಕೆಟ್‌ಗಳನ್ನು ಅವರಿಗೆ ನೀಡಿದೆ. ಈ ವೇಳೆ ಅಖ್ತರ್‌ ಫೈನಲ್‌ ಪಂದ್ಯಕ್ಕೂ ಇಷ್ಟೇ ಟಿಕೆಟ್‌ಗಳನ್ನು ಕೊಡಿಸಿದರೆ ಒಳ್ಳೆಯದು ಎಂದು ಹೇಳಿದ್ದರು.' " ಮಾತು ಮುಂದುವರಿಸಿದ ಹರಭಜನ್‌ ಸಿಂಗ್‌, "ನೀವು ಅಲ್ಲಿಗೆ ಬಂದು ಏನು ಮಾಡುತ್ತೀರಿ ಎಂದು ಕೇಳಿದೆ. ಅದಕ್ಕೆ ಅವರು(ಅಖ್ತರ್‌) ಮುಂಬೈನಲ್ಲಿ ಪಾಕಿಸ್ತಾನ ಫೈನಲ್‌ ಆಡಲಿದೆ ಎಂದು ಹೇಳಿದ್ದರು. ಅದಕ್ಕೆ ನಾನು, 'ಒಂದು ವೇಳೆ ನೀವು ಮುಂಬೈಗೆ ಹೋದರೆ, ನಾವು ಎಲ್ಲಿಗೆ ಹೋಗಬೇಕು? ಇಂಡಿಯಾ ಖಚಿತವಾಗಿ ಫೈನಲ್ ಆಡಲಿದೆ. ಹಾಗಾಗಿ ನೀವು ಬಂದು ಪಂದ್ಯ ವೀಕ್ಷಿಸಿ. ತೊಂದರೆ ಇಲ್ಲ ನಾನಿನ್ನೂ ನಾಲ್ಕು ಹೆಚ್ಚಿನ ಟಿಕೆಟ್‌ಗಳನ್ನು ಕೊಡಿಸುತ್ತೇನೆ. ನೀವು ವೀಕ್ಷಕನಾಗಿ ಸ್ಟೇಡಿಯಂಗೆ ಬಂದು ಪಂದ್ಯ ನೋಡಬಹುದೆಂದು ಹೇಳಿದ್ದೆ," ಎಂದು 10 ವರ್ಷಗಳ ಹಿಂದಿನ ಕಥೆಯನ್ನು ಸ್ಮರಿಸಿದರು. ಭಾರತ ವಿರುದ್ಧ ಸೆಮಿಫೈನಲ್‌ ಪಂದ್ಯಕ್ಕೆ ಪಾಕಿಸ್ತಾನ ತಂಡದ ಅಂತಿಮ 11ರಲ್ಲಿ ಶೊಯೆಬ್‌ ಅಖ್ತರ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಹರಭಜನ್‌ ಸಿಂಗ್ ಈ ಪಂದ್ಯದಲ್ಲಿ 43 ರನ್‌ ನೀಡಿ ಎರಡು ವಿಕೆಟ್‌ ಕಿತ್ತಿದ್ದರು. ಆ ಮೂಲಕ ಭಾರತ 29 ರನ್‌ಗಳಿಂದ ಗೆದ್ದು ಫೈನಲ್‌ ಪ್ರವೇಶ ಮಾಡಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wraAVo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...