ಮುಂಬೈ: ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡದ ಗೆಲುವಿಗೆ ಉತ್ತಮವಾದದನ್ನು ನೀಡುವುದು ನನ್ನ ಉದ್ದೇಶವಾಗಿತ್ತು ಎಂದು ತಂಡದ ಆರಂಭಿಕ ಬ್ಯಾಟ್ಸ್ಮನ್ ಹೇಳಿದರು. ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಯಕ ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್ ಅವರು ಕ್ರಮವಾಗಿ ಅಜೇಯ 42 ಹಾಗೂ 24 ರನ್ಗಳ ಸಹಾಯದಿಂದ ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ಗಳ ಗೆಲುವು ಪಡೆಯಿತು. ಶಿವಮ್ ದುಬೇ ಹಾಗೂ ಯಶಸ್ವಿ ಜೈಸ್ವಾಲ್ ಕೂಡ 22 ರನ್ಗಳನ್ನು ಗಳಿಸಿ ತಂಡದ ಗೆಲುವಿಗೆ ನೆರವಾದರು. "ನಾನು ಬ್ಯಾಟಿಂಗ್ ಹೋದಾಗ ಅದ್ಭುತವಾದ ಭಾವನೆಗಳು ನನ್ನಲ್ಲಿ ಉಂಟಾಗುತ್ತಿತ್ತು. ಏಕೆಂದರೆ ನಾನು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತೇನೆಂದು ಮೊದಲೇ ತಿಳಿದಿತ್ತು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು ತಂದುಕೊಡಲು ನನ್ನ ಕಡೆಯಿಂದ ಅತ್ಯುತ್ತಮವಾದ ಪ್ರದರ್ಶನ ತೋರಲೇಬೇಕೆಂದು ಅಂದುಕೊಂಡಿದ್ದೆ. ವಾಂಖೆಡೆ ಕ್ರೀಡಾಂಗಣ ನನ್ನ ತವರು ಅಂಗಳವಾಗಿದ್ದರಿಂದ ಇಲ್ಲಿ ಆಡುವುದು ಅತ್ಯುತ್ತಮವಾಗಿರುತ್ತದೆ," ಎಂದು ಜೈಸ್ವಾಲ್ ಸಹ ಆಟಗಾರ ಡೇವಿಡ್ ವಾರ್ನರ್ಗೆ ಹೇಳಿರುವ ವಿಡಿಯೋವನ್ನು ಐಪಿಎಲ್ ವೆಬ್ಸೈಟ್ ಪೋಸ್ಟ್ ಮಾಡಿದೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ ಇನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ ದೊಡ್ಡ ಹೊಡೆತಗಕ್ಕೆ ಮುಂದಾಗಿ ಸ್ವೀಪರ್ ಕವರ್ಸ್ನಲ್ಲಿ ಕ್ಯಾಚ್ ನೀಡಿದ್ದರು. ಆದರೆ, ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈಚೆಲ್ಲಿ ಗಿಲ್ಗೆ ಜಿವದಾನ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ ಜೈಸ್ವಾಲ್, ಪಂದ್ಯದಲ್ಲಿ ಕೆಲವೊಮ್ಮೆ ಇಂತಹ ತಪ್ಪುಗಳು ಆಗುತ್ತವೆ ಎಂದರು. "ನಾನು ಫೀಲ್ಡಿಂಗ್ನಲ್ಲಿ ಕ್ಯಾಚ್ ಬಿಟ್ಟಿದ್ದೆ. ಈ ಬಗ್ಗೆ ನನಗೆ ನಾನೇ ಪರವಾಗಿಲ್ಲ ಎಂದು ಅಂದುಕೊಂಡಿದ್ದೆ. ಏಕೆಂದರೆ, ಫೀಲ್ಡಿಂಗ್ ಅಭ್ಯಾಸದಲ್ಲಿ ನಾನು ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಇದರ ಹೊರತಾಗಿಯೂ ಆಟಗಾರರು ಕ್ಯಾಚ್ಗಳನ್ನು ಬಿಡುವುದು ಸರ್ವೇ ಸಾಮಾನ್ಯ. ಪಂದ್ಯ ಎಂದ ಮೇಲೆ ಇದೆಲ್ಲವೂ ಇದ್ದೆ ಇರುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ನನಗೆ ಪ್ರೇರಣೆ ನೀಡುತ್ತಿದ್ದರು. ಇದು ನನ್ನ ಪಾಲಿಗೆ ಅತ್ಯುತ್ತಮ ಅಂಶವಾಯಿತು," ಎಂದು ತಿಳಿಸಿದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಿಗೆ 9 ವಿಕೆಟ್ ಪಡೆದು 133 ರನ್ಗಳಿಗೆ ನಿಯಂತ್ರಿಸಿತ್ತು. ಕ್ರಿಸ್ ಮಾರಿಸ್ ನಾಲ್ಕು ವಿಕೆಟ್ ಪಡೆದುಕೊಂಡು ಯಶಸ್ವಿ ಬೌಲರ್ ಎನಿಸಿಕೊಂಡರು. ಕೆಕೆಆರ್ ಪರ ರಾಹುಲ್ ತ್ರಿಪಾಠಿ ಹಾಗೂ ದಿನೇಶ್ ಕಾರ್ತಿಕ್ ಕ್ರಮವಾಗಿ 36 ಮತ್ತು 25 ರನ್ಗಳನ್ನು ಗಳಿಸಿದ್ದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನಕ್ಕೇರಿತು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮುಂದಿನ ಗುರುವಾರ ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tTWb2i