ಹೈದರಾಬಾದ್‌: ಹಿಂದೂ ಸೋಂಕಿತನ ಶವಕ್ಕೆ ಸಂಪ್ರದಾಯದಂತೆ ಮುಸ್ಲಿಂ ಸಹೋದರರಿಂದ ಅಂತ್ಯಸಂಸ್ಕಾರ

ಹೈದರಾಬಾದ್‌: ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದು ಯಾರಿಗೂ ಬೇಡವಾಗಿದ್ದ ಹಿಂದೂ ವ್ಯಕ್ತಿಯೊಬ್ಬರ ಮೃತದೇಹವನ್ನು ಮುಸ್ಲಿಂ ಯುವಕರಿಬ್ಬರು ರುದ್ರಭೂಮಿಗೆ ಕೊಂಡೊಯ್ದು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪ್ರಕರಣ ತೆಲಂಗಾಣದ ಗ್ರಾಮದಲ್ಲಿನಡೆದಿದೆ. ಪೆದ್ದ ಕೊಡಪ್‌ಗಲ್‌ ಮಂಡಲದ ಕಾಟೇಪಲ್ಲಿಯ ಮೊಗುಲಯ್ಯ ಎಂಬವರು ಭಾಣಸುವಾಡ ಆಸ್ಪತ್ರೆಯಲ್ಲಿ ಅಸು ನೀಗಿದರು. ಆಸ್ಪತ್ರೆಯವರು ಶವ ತೆಗೆದುಕೊಂಡು ಹೋಗಲು ಮನೆಯವರಿಗೆ ಸೂಚನೆ ನೀಡಿದರು. ಸೋಂಕು ಭೀತಿಯಿಂದ ಆಸ್ಪತ್ರೆಯತ್ತ ತಲೆ ಹಾಕದ ಮನೆಯವರು, ಮೊಗುಲಯ್ಯ ಅವರ ಶವವನ್ನು ಅನಾಥಗೊಳಿಸಿದರು. ಕೊನೆಗೆ ಅದೇ ಗ್ರಾಮದ ಶಫಿ ಮತ್ತು ಅಲಿ ಎಂಬ ಮುಸ್ಲಿಂ ಸೋದರರು ಸೋಂಕು ಪೀಡಿತ ಶವವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎತ್ತಿ ರುದ್ರಭೂಮಿಗೆ ಸಾಗಿಸಿದರು. ಹಿಂದೂ ಸಂಪ್ರದಾಯದ ಪ್ರಕಾರ ಮೊಗುಲಯ್ಯನವರ ಅಂತ್ಯ ಸಂಸ್ಕಾರ ನೆರವೇರಿಸಿ ಊರಿಗೆ ಹಿಂದಿರುಗಿದರು. ಇಷ್ಟಾದರೂ ಮೃತನ ಕುಟುಂಬ ಸದಸ್ಯರು ರುದ್ರಭೂಮಿಗೂ ಭೇಟಿ ನೀಡಲಿಲ್ಲ.


from India & World News in Kannada | VK Polls https://ift.tt/2QKS8X3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...