ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರ್ಪಡೆಯಾದ ಮೊದಲ ದಿನದಿಂದಲೂ ಇಲ್ಲಿಯವರೆಗೂ ತವರು ತಂಡದ ಜೊತೆ ಇರುವ ಭಾವನೆ ಉಂಟಾಗುತ್ತಿದೆ ಎಂದು ಆರ್ಸಿಬಿ ತಂಡದ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ. ಕಳೆದ ಹಲವು ಆವೃತ್ತಿಗಳ ಐಪಿಎಲ್ ಟೂರ್ನಿಗಳಲ್ಲಿ ಸತತವಾಗಿ ವೈಫಲ್ಯ ಅನುಭವಿಸಿದ್ದ ಎಲ್ಲರ ನಿರೀಕ್ಷೆಯನ್ನು ಮಣ್ಣು ಪಾಲು ಮಾಡಿದ್ದರು. ಅದರಂತೆ ಕಳೆದ ವರ್ಷ ಪಂಜಾಬ್ ಕಿಂಗ್ಸ್ ಪರ ಅತ್ಯಂತ ಹೀನಾಯ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು 2021ರ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಪಂಜಾಬ್ ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಂತೆ ಗ್ಲೆನ್ ಮ್ಯಾಕ್ಸ್ವೆಲ್ ಅದ್ಭತ ಫಾರ್ಮ್ಗೆ ಬಂದಿದ್ದಾರೆ. ಅವರು ಆಡಿದ ಮೂರು ಪಂದ್ಯಗಳಲ್ಲಿ 176 ರನ್ ಗಳಿಸಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. "ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪರಿಸ್ಥಿತಿಗಳು ಸ್ವಲ್ಪ ವಿಭಿನ್ನವಾಗಿವೆ. ಇಲ್ಲಿನ ಪಿಚ್ನಲ್ಲಿ ಹಲವು ತಂಡಗಳು ರನ್ ಹೊಳೆಯನ್ನು ಹರಿಸಿವೆ. ಹಾಗಾಗಿ, ಅದೇ ರೀತಿ ಇಲ್ಲಿನ ವಿಕೆಟ್ ಮುಂದುವರಿಯುತ್ತದೆಯೇ? ಎಂಬ ಬಗ್ಗೆ ನನ್ನಲ್ಲಿ ಉತ್ಸಕತೆಯನ್ನು ಕೆರಳಿಸಿದೆ. ಬೆಂಗಳೂರು ಫ್ರಾಂಚೈಸಿ ಬಂದ ಮೊದಲನೇ ದಿನದಿಂದಲೂ ನಾನು ತವರು ತಂಡದಲ್ಲಿದ್ದೇನೆಂಬ ಭಾವನೆ ಉಂಟಾಗುತ್ತಿದೆ. ಆ ತರಹ ಆರ್ಸಿಬಿ ಕೋಚಿಂಗ್ ಸಿಬ್ಬಂದಿ ಆಟಗಾರರೊಂದಿಗೆ ನಡೆದುಕೊಳ್ಳುತ್ತಿದೆ. ಹಾಗಾಗಿ ತಂಡದಲ್ಲಿ ಮೋಜಿನಿಂದ ಕೂಡಿದೆ," ಎಂದು ಮ್ಯಾಕ್ಸ್ವೆಲ್ ಹೇಳಿರುವ ವಿಡಿಯೋವನ್ನು ಆರ್ಸಿಬಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ನಾಯಕತ್ವದ ಆರ್ಸಿಬಿ ಆಡಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದು ಆತ್ಮ ವಿಶ್ವಾಸದಲ್ಲಿ ಬೀಗುತ್ತಿದೆ. ಇಂದು(ಗುರುವಾರ) ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. "ನಾಯಕ ವಿರಾಟ್ ಕೊಹ್ಲಿ ಹೆಗಲ ಮೇಲಿರುವ ಜವಾಬ್ದಾರಿಯನ್ನು ಕಡಿಮೆಗೊಳಿಸುವುದು ನನ್ನ ಕೆಲಸ. ಅಂಗಣದಲ್ಲಿ ವಿರಾಟ್ ಕೊಹ್ಲಿಗೆ ಸಾಕಷ್ಟು ಜವಾಬ್ದಾರಿ ಇದೆ. ಫೀಲ್ಡಿಂಗ್ ನಿಲ್ಲಿಸುವುದು ಹಾಗೂ ಬದಲಾಯಿಸುವುದು, ಬೌಲಿಂಗ್ ಬದಲಾವಣೆ ಮಾಡುವುದು, ಸನ್ನಿವೇಶಕ್ಕೆ ತಕ್ಕಂತೆ ಮೈದಾನದಲ್ಲಿ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು ಸೇರಿದಂತೆ ದೊಡ್ಡ ಜವಾಬ್ದಾರಿ ಕೊಹ್ಲಿ ಮೇಲಿದೆ. ಹಾಗಾಗಿ, ಅವರಿಗೆ ಎಲ್ಲಾ ಸಂದರ್ಭದಲ್ಲಿ ನೆರವಾಗಲು ಪ್ರಯತ್ನಿಸುತ್ತೇನೆ," ಎಂದು ಕಳೆದ ಪಂದ್ಯದಲ್ಲಿ 78 ರನ್ ಸಿಡಿಸಿದ್ದ ಮ್ಯಾಕ್ಸ್ವೆಲ್ ತಿಳಿಸಿದರು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ನೀರಿನಲ್ಲಿ ಬಾತುಕೋಳಿಯನ್ನು ಬಿಟ್ಟಂತೆ, ಮ್ಯಾಕ್ಸ್ವೆಲ್ ಆರ್ಸಿಬಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದರು. "ಮ್ಯಾಕ್ಸ್ವೆಲ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ತೋರಿದರು ಹಾಗೂ ಅವರನ್ನು ಎಬಿ ಡಿ ವಿಲಿಯರ್ಸ್ ಹಿಂಬಾಲಿಸಿದರು. ಈ ರೀತಿಯ ಫಾರ್ಮ್ಗೆ ಬಂದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವೇ ಇಲ್ಲ. ಪಿಚ್ ನಿಧಾನಗತಿಯಿಂದ ಕೂಡಿತ್ತು. ಆದರೂ ನಾವು 40 ಹಚ್ಚುವರಿ ರನ್ಗಳನ್ನು ಕಲೆ ಹಾಕಿದ್ದೆವು. ಬಾತುಕೋಳಿಯನ್ನು ನೀರಿಗೆ ಬಿಟ್ಟಂತೆ ಆರ್ಸಿಬಿಯನ್ನು ಮ್ಯಾಕ್ಸ್ವೆಲ್ ಕೊಂಡೊಯ್ದರು," ಎಂದು ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32ywlVs