ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ವಿಕೆಟ್ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ , ತಂಡದ ಗೆಲುವಿಗಾಗಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ ಎಂದು ಹೇಳಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಒಂದು ಹಂತದಲ್ಲಿ 43 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಆದರೂ, ಶಿವಮ್ ದುಬೇ, ರಾಹುಲ್ ತೇವಾಟಿಯಾ ಹಾಗೂ ಕ್ರಿಸ್ ಮಾರಿಸ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿತ್ತು. ಅಂತಿಮವಾಗಿ ಆರ್ಸಿಬಿ ವಿಕೆಟ್ ನಷ್ಟವಿಲ್ಲದೆ ಪಂದ್ಯವನ್ನು ಗೆದ್ದುಕೊಂಡಿತು. 2021ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಹಣಾಹಣಿಗಳಲ್ಲಿ ಪರಾಭವಗೊಂಡಿತು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸಂಗಕ್ಕಾರ, ಸನ್ನಿವೇಶಕ್ಕೆ ತಕ್ಕಂತೆ ತಂಡ ಹೊಂದಿಕೊಳ್ಳುವುದು ತುಂಬಾ ಮುಖ್ಯ ಎಂಬುದನ್ನು ಹೇಳಿದರು. "ಆಟಗಾರರು ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು ತುಂಬಾ ಮುಖ್ಯವಾಗಿದೆ ಹಾಗೂ ಬ್ಯಾಟ್ಸ್ಮನ್ಗಳು ಫೀಲ್ಡ್ ಸೆಟ್ ನೋಡಿಕೊಂಡು ತಮ್ಮ ಸಾಮರ್ಥ್ಯ ಹಾಗೂ ಕೌಶಲದ ಆಧಾರದ ಮೇಲೆ ಆಡಬೇಕಾಗುತ್ತದೆ. ನೀವು ಮಧ್ಯಮ ಕ್ರಮಾಂಕದಲ್ಲಿ ಆಡಲು ಹೊರಟರೆ, ಪೀಲ್ಡರ್ಗಳು ಚದುರಿರುತ್ತಾರೆ ಹಾಗೂ ಅಪಾಯದ ಹೊಡೆತಗಳನ್ನು ಹೊಡೆಯುವುದರ ಬದಲು ಬಹಳ ಎಚ್ಚರಿಕೆಯಿಂದ ಶಾಟ್ ಮಾಡಬೇಕಾಗುತ್ತದೆ," ಎಂದು ಹೇಳಿದರು. "ಟಿ20 ಕ್ರಿಕೆಟ್ನಲ್ಲಿ ತ್ವರಿತವಾಗಿ ರನ್ ಗಳಿಸುವುದಾಗಿ, ಹಾಗಾಗಿ ಇದಕ್ಕೆ ತಕ್ಕಂತೆ ನಾವು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಕ್ರೀಸ್ಗೆ ಒಮ್ಮೆ ಬಂದಾಗ ಪಿಚ್ ಪ್ಲ್ಯಾಟ್ ಇದೆಯಾ, ಬೌನ್ಸ್ ಇದೆಯಾ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಳಿಕ ಅದಕ್ಕೆ ತಕ್ಕಂತೆ ಹೊಂದಿಕೊಂಡು ರನ್ಗಳಿಗೆ ಆಡಬೇಕಾಗುತ್ತದೆ. ಚೆಂಡು ನಿಮ್ಮ ಏರಿಯಾದಲ್ಲಿ ಇಲ್ಲವಾದರೆ ನೀವು ಸ್ಟ್ರೈಕ್ ರೊಟೇಟ್ ಮಾಡಿ," ಎಂದು ಸಂಗಕ್ಕಾರ ಆಟಗಾರರಿಗೆ ಸಲಹೆ ನೀಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತೋರಿದ ಪ್ರದರ್ಶನದ ಬಗ್ಗೆ ಮಾತನಾಡಿ, "ಇಂದಿನ(ಗುರುವಾರ) ಪಂದ್ಯ ಎರಡು ಭಾಗಗಳಾಗಿತ್ತು. ಆರಂಭಿಕ 6 ರಿಂದ 7 ಓವರ್ಗಳಲ್ಲಿ ನಾವು ಸಾಕಷ್ಟು ಹೆಣಗಾಡಿದ್ದೆವು. ನಂತರ 13 ಓವರ್ಗಳಲ್ಲಿ ಹಲವು ವಿಕೆಟ್ಗಳನ್ನು ಕಳೆದುಕೊಂಡರೂ ಅಂತಿಮವಾಗಿ 177 ರನ್ಗಳನ್ನು ಕಲೆ ಹಾಕಿದೆವು. ಬ್ಯಾಟಿಂಗ್ನಲ್ಲಿ ನೀವು ಜೊತೆಯಾಟವನ್ನು ನಿರ್ಮಿಸುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ತಂಡದ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ಗಳು ದೊಡ್ಡ ಮೊತ್ತವನ್ನು ಕಲೆ ಹಾಕಬೇಕು," ಎಂದು ಶ್ರೀಲಂಕಾ ಮಾಜಿ ನಾಯಕ ತಿಳಿಸಿದರು. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ನಾಯಕ ಶತಕದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 4 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ನಂತರ, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿತ್ತು. ಆದರೆ, ಕೊನೆಯ ಎರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ಸಿಬಿ ವಿರುದ್ಧ ಪರಾಭವಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಎಡವಿದ್ದೆಲ್ಲಿ ಎಂಬ ಬಗ್ಗೆ ಹೇಳಿದ ಸಂಗಕ್ಕಾರ, "ನಿಜ ಹೇಳಬೇಕೆಂದರೆ ಒಟ್ಟಾರೆ ಪ್ರದರ್ಶನದಲ್ಲಿ ನಮ್ಮ ತಂಡ ವಿಫಲವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನೀವು ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ. ಅಲ್ಲದೆ, ಫೀಲ್ಡಿಂಗ್ನಲ್ಲಿಯೂ ನೀವು ಉತ್ತಮವಾಗಿ ಕಾಣಬೇಕು. ಆದರೆ, ಆರ್ಸಿಬಿ ನಮಗಿಂತ ಅತ್ಯುತ್ತಮವಾಗಿ ಆಡಿದೆ. ಮುಂದಿನ ಪಂದ್ಯಗಳಲ್ಲಿ ನಾವು ಖಂಡಿತಾ ಕಮ್ಬ್ಯಾಕ್ ಮಾಡುತ್ತೇವೆ," ಎಂದು ಭರವಸೆ ನೀಡಿದರು. "ನಾವಿನ್ನೂ ಪರಿಪೂರ್ಣ ಕ್ರಿಕೆಟ್ ಆಡಿಲ್ಲ. ಆದರೆ, ನಮ್ಮಲ್ಲಿ ನಾವು ನಂಬಿಕೆ ಇಟ್ಟು, ಆತ್ಮ ವಿಶ್ವಾಸದೊಂದಿಗೆ ಮುಂದಿನ ಪಂದ್ಯಗಳಲ್ಲಿ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಡೆ ಗಮನ ಹರಿಸಬೇಕು. ನಿಜವಾಗಲೂ ಈ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳಿಗೆ ದೊಡ್ಡ ಮೊತ್ತ ಕಲೆ ಹಾಕಲು ಅತ್ಯುತ್ತಮ ಅವಕಾಶವಿದೆ. ಆದರೆ, ನಾವು ಗಳಿಸಿದ್ದ ರನ್ಗಳಿಗೆ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವುದು ಬೌಲರ್ಗಳಿಗೆ ತುಂಬಾ ಕಷ್ಟ," ಎಂದು ಕುಮಾರ ಸಂಗಕ್ಕಾರ ತಿಳಿಸಿದರು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಶನಿವಾರ ಐಯಾನ್ ಮಾರ್ಗನ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ವಾಂಖಡೆ ಕ್ರೀಡಾಂಗಣದಲ್ಲಿ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gySevZ