ಬೆಂಗಳೂರು: ನಿಯಂತ್ರಣಕ್ಕೆ ಸಿಗದೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತಡೆಗಟ್ಟಲು ಶುಕ್ರವಾರ ರಾತ್ರಿ 9ರಿಂದಲೇ ಕಟ್ಟು ನಿಟ್ಟಿನ ವೀಕೆಂಡ್ ಕಫ್ರ್ಯೂ ರಾಜ್ಯಾದ್ಯಂತ ಜಾರಿಯಾಗಿದ್ದು, ಸೋಮವಾರ (ಏ.26) ಮುಂಜಾನೆ 6 ರವರೆಗೆ ಜಾರಿಯಲ್ಲಿರುತ್ತದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 6ರಿಂದ 10ರವರೆಗೆ ನಾಲ್ಕು ತಾಸು ಮಾತ್ರ ಸುರಕ್ಷತೆ ನಿಯಮಗಳ ಪಾಲಿಸಿ ಅಗತ್ಯ ಸೇವೆಗಳ ಅಂಗಡಿಗಳು ತೆರೆಯಲು ಅವಕಾಶವಿದೆ. ಅಷ್ಟರಲ್ಲೇ ಮನೆಗೆ ಬೇಕಾದ ವಸ್ತುಗಳನ್ನು ತಂದಿಟ್ಟುಕೊಳ್ಳಬೇಕು. ಹೋಟೆಲ್ಗಳನ್ನು ಬೆಳಗ್ಗೆ 6ರಿಂದ ರಾತ್ರಿ 9ರವರೆಗೂ ತೆರೆದಿಡಲು ಅವಕಾಶವಿದೆ. ಆದರೆ, ಪಾರ್ಸೆಲ್ ಮಾತ್ರ ನೀಡಬಹುದು. ಜನರು ಯಾವ ಕಾರಣಕ್ಕೂ ಅನಗತ್ಯವಾಗಿ ಓಡಾಡದಂತೆ ಸೂಚಿಸಲಾಗಿದ್ದು, ಎಲ್ಲ ಕಡೆ ಬಿಗಿ ಪೊಲೀಸ್ ಕಣ್ಗಾವಲನ್ನು ಇರಿಸಲಾಗಿದೆ. ಅವಕಾಶ ನೀಡಲಾಗಿರುವ ಅಗತ್ಯ ಸೇವೆಗಳಲ್ಲಿಇರುವವರು ಮಾತ್ರ ಗುರುತಿನ ಚೀಟಿಯೊಂದಿಗೆ ಓಡಾಡಬಹುದು. 4 ಗಂಟೆ ಯಾವುದು ಓಪನ್? ಕಿರಾಣಿ ಅಂಗಡಿ, ಹಾಲು, ಹಣ್ಣು, ತರಕಾರಿ, ಮಾಂಸದಂಗಡಿ ತೆರೆದಿರುತ್ತವೆ. ಮನೆ ಸಮೀಪದ ಅಂಗಡಿಗಳಿಗೆ ಹೋಗಬೇಕು. ಖರೀದಿ ಮಾಡಿಕೊಂಡು ಜನ ಕೂಡಲೇ ಮನೆ ಸೇರಬೇಕು. ಗಮನಿಸಿ ಇವು ಇರಲ್ಲ - ಬೆಂಗಳೂರಿನಲ್ಲಿ ಮೆಟ್ರೊ ಸಂಚಾರವಿಲ್ಲ - ಲಿಕ್ಕರ್ ಶಾಪ್ಗಳನ್ನು ತೆರೆಯುವಂತಿಲ್ಲ -ಕಾರಣವಿಲ್ಲದೆ ಓಡಾಡದಿರಿ ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ವಾಹನ ವಶಪಡಿಸಿಕೊಂಡು ಕೇಸು ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಹಾಗೂ ನಗರ ಪ್ರದೇಶಗಳಲ್ಲಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಕೆಲವು ಕಡೆ ಚೆಕ್ ಪೋಸ್ಟ್ ತೆರೆದು ವಾಹನಗಳ ತಪಾಸಣೆ ಮಾಡಲಾಗುವುದು. ಹೀಗಾಗಿ ಕಾರಣವಿಲ್ಲದೆ ಓಡಾಡುವವರು ಎಚ್ಚರ ವಹಿಸಬೇಕು. ಯಾರಿಗೆ, ಯಾವುದಕ್ಕೆ ಅವಕಾಶ? - ಮೆಡಿಕಲ್ ಶಾಪ್, ಆಸ್ಪತ್ರೆ, ವೈದ್ಯಕೀಯ ಸೇವಕರು - ಅಗತ್ಯ, ತುರ್ತು ಸೇವೆಗಳಲ್ಲಿರುವ ಸರಕಾರಿ ಸಿಬ್ಬಂದಿ - ಟೆಲಿಕಾಂ, ಇಂಟರ್ನೆಟ್ ಸೇವೆ ನೀಡುವವರು - ರೋಗಿಗಳು, ಸಹಾಯಕರು, ಆಸ್ಪತ್ರೆಗೆ ಹೋಗುವವರು - ಲಸಿಕೆ ಪಡೆಯುವವರು ಕೂಡ ಹೋಗಬಹುದು. - ಇರುವ ಸ್ಥಳದಲ್ಲೇ ಕಾರ್ಮಿಕರು ಕಟ್ಟಡದ ಕೆಲಸ ನಡೆಸಬಹುದು - ಇ ಕಾಮರ್ಸ್, ಹೋಂ ಡೆಲಿವರಿಗೆ ಅವಕಾಶವಿದೆ - ಮದುವೆ, ಅಂತ್ಯಸಂಸ್ಕಾರಕ್ಕೆ ಹೋಗಬಹುದು. ದಾಖಲೆ ಹೊಂದಿರಬೇಕು. ಯಾವ ವಾಹನ ಓಡಾಡಬಹುದು? ದೂರದ ಪ್ರಯಾಣದ ಬಸ್, ರೈಲು ಮತ್ತು ವಿಮಾನ ಪ್ರಯಾಣಿಕರು. ಇವರು ಸಾರ್ವಜನಿಕ ಸಾರಿಗೆ, ಕ್ಯಾಬ್, ಟ್ಯಾಕ್ಸಿಗಳಲ್ಲಿ ನಿಲ್ದಾಣಗಳಿಂದ ಮನೆ ನಡುವೆ ಓಡಾಡಬಹುದು. ತಪಾಸಣೆ ವೇಳೆ ಪ್ರಯಾಣದ ಟಿಕೆಟ್ ತೋರಿಸಬೇಕು. ಬೆರಳೆಣಿಕೆಯ ಸಂಖ್ಯೆಯ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು ಸಂಚರಿಸಲಿವೆ. ತುರ್ತು ಸೇವೆ, ಅನುಮತಿ ಇರುವ ಕೈಗಾರಿಕೆಗಳ ಕಾರ್ಮಿಕರ ಓಡಾಟಕ್ಕೆ ಬಸ್ನಲ್ಲಿ ಸಂಚರಿಸಲು ಅವಕಾಶವಿದೆ. ಶನಿವಾರ ಎಲ್ಲಾಅಂಚೆ ಕಚೇರಿಗಳು ಸ್ಥಗಿತಕೋವಿಡ್ ಎರಡನೇ ಅಲೆಯಿಂದ ವಾರಾಂತ್ಯದ ಲಾಕ್ ಡೌನ್ ಜಾರಿಯಲ್ಲಿರುವವರೆಗೆ ಎಲ್ಲಾಅಂಚೆ ಕಚೇರಿಗಳನ್ನು ಶನಿವಾರ ಮುಚ್ಚಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರ ಘೋಷಿಸಿದ ವಾರಾಂತ್ಯದ ಲಾಕ್ ಡೌನ್ ಮತ್ತು ಅಂಚೆ ಇಲಾಖೆಯ ನೌಕರರಲ್ಲಿಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ದೃಷ್ಟಿಯಿಂದ ವಾರಾಂತ್ಯದ ಲಾಕ್ ಡೌನ್ ಜಾರಿಯಲ್ಲಿರುವವರೆಗೆ ಎಲ್ಲಾಅಂಚೆ ಕಚೇರಿಗಳನ್ನು ಮುಚ್ಚಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಹೂವು, ತರಕಾರಿ ಸಾಗಾಟ ಅಬಾಧಿತ ರಾಜ್ಯದಲ್ಲಿಕಫ್ರ್ಯೂ ವಿಧಿಸಿದ್ದರೂ ಕೃಷಿ ಚಟುವಟಿಕೆಗೆ ನಿರ್ಬಂಧ ಹೇರಿಲ್ಲ. ಹಾಗಾಗಿ ಹೂವು, ಹಣ್ಣು, ತರಕಾರಿ, ಆಹಾರ ಧಾನ್ಯ ಮಾರುಕಟ್ಟೆಗೆ ಸಾಗಿಸುಧಿವಾಗ ತಡೆಯದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ವಿಕಾಸೌಧದ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿಈಗಾಗಲೇ ಮುಂಗಾರು ಪ್ರಾರಂಭವಾಗಿದೆ. ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಅಡ್ಡಿ ಪಡಿಸಧಿಬಾರದು. ಕೆಲವೆಡೆ ಕೃಷಿ ಪರಿಕರ ವಶಕ್ಕೆ ತೆಗೆದುಕೊಂಡಿಧಿರುವುದು ಗಮನಕ್ಕೆ ಬಂದಿದೆ. ಇನ್ನು ಹಾಗೆ ಮಾಡಬಾರದು ಎಂಬ ಸೂಚನೆ ಕೊಡಲಾಗಿದೆ,'' ಎಂದರು.
from India & World News in Kannada | VK Polls https://ift.tt/3nfN5KB