ಯಾವುದೇ ಬಾಹ್ಯ ದಾಳಿಗಳನ್ನು ಎದುರಿಸಲು ಭಾರತ, ನಮ್ಮ ರಕ್ಷಣಾ ಪಡೆ ಸಿದ್ಧವಿದೆ: ಸಚಿವ ರಾಜನಾಥ್‌ ಸಿಂಗ್‌

ಬೆಂಗಳೂರು: ಏಷ್ಯಾದ ಅತ್ಯಂತ ದೊಡ್ಡ ಏರೋ ಶೋ ಹಮ್ಮಿಕೊಳ್ಳುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಕೇಂದ್ರ ರಕ್ಷಣಾ ಹೇಳಿದರು. ಬೆಂಗಳೂರಿನ ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ 2021ರ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿ ಮಾತನಾಡಿದ ರಕ್ಷಣಾ ಸಚಿವ, ಏರೋ ಇಂಡಿಯಾ ನಡೆಸಲು ಕರ್ನಾಟಕ‌ ಸರಕಾರ ನೀಡಿದ ಸಹಕಾರಕ್ಕೆ ಧನ್ಯವಾದ ಸಮರ್ಪಿಸಿದರು. ಭಾಷಣದಲ್ಲಿ ಬಸವಣ್ಣ ಹಾಗೂ ಸರ್ ಎಂ ವಿಶ್ವೇಶ್ವರಯ್ಯಾ ಅವರನ್ನು ನೆನೆದು ಮಾತು ಆರಂಭಿಸಿದ ರಕ್ಷಣಾ ಸಚಿವ, ಆತ್ಮ ನಿರ್ಭರ ಭಾರತ ಅಭಿಯಾನ ಅಡಿಯಲ್ಲಿ ದೇಶದ ರಕ್ಷಣಾ ಕ್ಷೇತ್ರವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದಕ್ಕಾಗಿ 30 ಮಿಲಿಯನ್ ಅಮೆರಿಕನ್ ಡಾಲರ್ ಹಣ ಮೀಸಲಿರಿಸಲಾಗಿದೆ ಎಂದು ತಿಳಿಸಿದರು. ಜಾಗತಿಕ ರಕ್ಷಣಾ ಪಾಲುದಾರಿಕೆಯಲ್ಲಿ ಭಾರತದ ಇರುವಿಕೆಯನ್ನು ವಿಶ್ವ ಗಮನಿಸುತ್ತಿದ್ದು, ರಕ್ಷಣಾ ಸಹಭಾಗಿತ್ವಕ್ಕೆ ಉತ್ಸುಕವಾಗಿವೆ. ಭಾರತ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿದ್ದು, ಜಾಗತಿಕ ರಕ್ಷಣಾ ಸಹಭಾಗಿತ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದ ರಾಜನಾಥ್‌ ಸಿಂಗ್‌ ತಿಳಿಸಿದರು. ಭಾರತದ ರಕ್ಷಣಾ ಕ್ಷೇತ್ರವನ್ನು ಅತ್ಯಂತ ಸದೃಢ ಕ್ಷೇತ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ದೇಶೀಯ ರಕ್ಷಣಾ ಉದ್ದಿಮೆಗಳಿಗೆ ಬಲ ತುಂಬಿ ಈ ಗುರಿ ತಲುಪುವುದು ನಮ್ಮ ಉದ್ದೇಶ ಎಂದರು. ಇನ್ನು ಯಾವುದೇ ಬಾಹ್ಯ ದಾಳಿಗಳನ್ನು ಎದುರಿಸಲು ಭಾರತ ಸಿದ್ಧವಾಗಿದ್ದು, ನಮ್ಮ ರಕ್ಷಣಾ ಪಡೆಗಳ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ರಾಜನಾಥ್‌ ಸಿಂಗ್ ಈ ವೇಳೆ‌ ಭರವಸೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ರಾಜನಾಥ್‌ ಸಿಂಗ್‌, ವಾಯುಸೇನೆಗೆ ಹೆಚ್ ಎಎಲ್ ನಿರ್ಮಿತ ಲಘು ಯುದ್ಧ ವಿಮಾನ(ಎಲ್ ಸಿಎ) ಅಧಿಕೃತ ಸೇರ್ಪಡೆಗೊಳಿಸಿದರು.


from India & World News in Kannada | VK Polls https://ift.tt/3toXsya

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...