ಭಾರತ-ಇಂಗ್ಲೆಂಡ್ ನಡುವಿನ‌ ಮೊದಲ ಟೆಸ್ಟ್‌ನಿಂದ ಅಕ್ಷರ್‌ ಪಟೇಲ್‌ ಔಟ್‌!

ಚೆನ್ನೈ: ಮೊಣಗಾಲು ಗಾಯಕ್ಕೆ ತುತ್ತಾಗಿರುವ ಸ್ಪಿನ್‌ ಆಲ್‌ರೌಂಡರ್‌ ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆಂದು ಬಿಸಿಸಿಐ ಶುಕ್ರವಾರ ಟಾಸ್‌ ವೇಳೆ ತಿಳಿಸಿದೆ. ಆ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ತವಕದಲ್ಲಿದ್ದ ಪಟೇಲ್‌ಗೆ ಭಾರಿ ನಿರಾಸೆಯುಂಟಾಗಿದೆ. ಗುರುವಾರ ತರಬೇತಿ ವೇಳೆಯೇ ಎಡ ಮೊಣಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದ ಬಗ್ಗೆ ಅಕ್ಷರ್‌ ಪಟೇಲ್ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದರು. ಆದರೆ, ಶುಕ್ರವಾರವೂ ನೋವು ಕಡಿಮೆಯಾಗದ ಹಿನ್ನಲೆಯಲ್ಲಿ ಚೆನ್ನೈ ಮೊದಲನೇ ಟೆಸ್ಟ್ ಪಂದ್ಯದಿಂದ ಆಲ್‌ರೌಂಡರ್‌ ಹೊರಗುಳಿದಿದ್ದಾರೆ. "ಇಂಗ್ಲೆಂಡ್‌ ವಿರುದ್ಧದ ಮೊದಲನೇ ಪೇಟಿಯಮ್‌ ಟೆಸ್ಟ್‌ನಿಂದ ಅಕ್ಷರ್‌ ಪಟೇಲ್‌ ಹೊರಗುಳಿದಿದ್ದಾರೆ. ಗುರುವಾರ ತರಬೇತಿ ಅವಧಿಯಲ್ಲಿಯೇ ಎಡ ಮೊಣಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದ ಬಗ್ಗೆ ಆಲ್‌ರೌಂಡರ್‌ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ದೂರಿದ್ದರು. ಇದೀಗ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ನಿರ್ವಹಿಸುತ್ತಿದ್ದು, ಅವರ ನೋವಿನ ಸ್ಪಷ್ಟ ವರದಿಗಾಗಿ ಕಾಯಲಾಗುತ್ತಿದೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 27ರ ಪ್ರಾಯದ ಅಕ್ಷರ್‌ ಪಟೇಲ್‌ ಸ್ಥಾನಕ್ಕೆ ಮೊದಲನೇ ಟೆಸ್ಟ್‌ಗೆ ಶಹ್ಭಾಝ್‌ ನದೀಮ್‌ ಹಾಗೂ ರಾಹುಲ್‌ ಚಹರ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಂತಿಮ 11ಕ್ಕೆ ಶಹ್ಭಾಝ್‌ ನದೀಮ್‌ಗೆ ಅವಕಾಶ ನೀಡಲಾಗಿದೆ. "ಅಕ್ಷರ್‌ ಪಟೇಲ್‌ ನೋವಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಭಾರತ ಟೆಸ್ಟ್ ತಂಡಕ್ಕೆ ಹಾಗೂ ರಾಹುಲ್‌ ಚಹರ್‌ಗೆ ಅವಕಾಶ ನೀಡಲಾಗಿದೆ. ನದೀಮ್‌ ಹಾಗೂ ಚಹರ್‌ ಇಬ್ಬರೂ ಸ್ಟಾಂಡ್‌ ಬೈ ಗ್ರೂಪ್‌ ಆಟಗಾರರಾಗಿ ಭಾರತ ಟೆಸ್ಟ್ ತಂಡದೊಂದಿಗೆ ತರಬೇತಿಯ ಒಂದು ಭಾಗವಾಗಿದ್ದರು," ಎಂದು ಬಿಸಿಸಿಐ ತಿಳಿಸಿದೆ. ಭಾರತ ಟೆಸ್ಟ್ ತಂಡ (ಆರಂಭಿಕ ಎರಡು ಪಂದ್ಯಗಳಿಗೆ): ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವೃದ್ದಿಮಾನ್‌ ಸಹಾ, ಹಾರ್ದಿಕ್‌ ಪಾಂಡ್ಯ, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಜಸ್‌ಪ್ರಿತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಸಿರಾಜ್‌, ಶಾರ್ದುಲ್‌ ಠಾಕೂರ್‌, ಆರ್‌ ಅಶ್ವಿನ್‌, ಕುಲ್ದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌. ಶಹ್ಬಾಜ್ ನದೀಮ್‌, ರಾಹುಲ್‌ ಚಹರ್‌. ಇಂಗ್ಲೆಂಡ್‌ ಟೆಸ್ಟ್ ತಂಡ(ಆರಂಭಿಕ ಎರಡು ಪಂದ್ಯಗಳಿಗೆ) : ಜೋ ರೂಟ್‌ (ನಾಯಕ), ಜೋಫ್ರ ಆರ್ಚರ್‌, ಮೊಯಿನ್‌ ಅಲಿ, ಜೇಮ್ಸ್‌ ಅಂಡರ್ಸನ್‌, ಡಾಮ್ ಸೀಬ್ಲಿ, ಸ್ಟುವರ್ಟ್ ಬ್ರಾಡ್‌, ರೋರಿ ಬರ್ನ್ಸ್‌, ಜೋಸ್‌ ಬಟ್ಲರ್ (ವಿ.ಕೀ), ಝ್ಯಾಕ್‌ ಕ್ರಾವ್ಲಿ, ಬೆನ್‌ ಸ್ಟೋಕ್ಸ್‌, ಬೆನ್‌ ಫೋಕ್ಸ್‌, ಡಾನ್ ಲಾರೆನ್ಸ್, ಜ್ಯಾಕ್‌ ಲೀಚ್‌, ಡಾಮ್‌ ಬೆಸ್, ಒಲ್ಲಿ ಸ್ಟೋನ್‌, ಕ್ರಿಸ್‌ ವೋಕ್ಸ್, ಒಲ್ಲಿ ಪೋಪ್


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rqTrYC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...