ತಾನು ಕಲಿತ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಇತಿಹಾಸ ಬೋಧಿಸಿದ ಚಾಮರಾಜನಗರ ಜಿಲ್ಲಾಧಿಕಾರಿ

ಚಾಮರಾಜನಗರ : ಡಾ.ಎಂ.ಆರ್‌. ರವಿ ಮಂಗಳ ವಾರ ಇತಿಹಾಸದ ಪ್ರಾಧ್ಯಾಪಕ ರಾಗಿ ಬೋಧನೆ ಮಾಡಿ ದರು!. ಮೈಸೂರು ಒಡೆಯರ್‌ ಕುರಿತು ಬೋಧಿಸಿದ ಅವರು ವಿದ್ಯಾರ್ಥಿಗಳ ಚಿತ್ತವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಕಾಲೇಜಿನ ಪ್ರಾಂಶುಪಾಲರ ಕೋರಿಕೆ ಮೇರೆಗೆ ಮಂಗಳವಾರ ಬೆಳಗ್ಗೆ ನಗರದ ಸರಕಾರಿ ಕಾಲೇಜಿಗೆ ಆಗಮಿಸಿದ ಜಿಲ್ಲಾಧಿಕಾರಿ, ಥೇಟ್‌ ಅಧ್ಯಾಪಕರಂತೆಯೇ ಬೋಧನೆ ಮಾಡಿದರು. ಅಂದ ಹಾಗೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಅವರಿಗೆ ಬೋಧನೆ ಹೊಸದಲ್ಲ. 1992ರಿಂದ 2001ರ ವರೆಗೂ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದೂ ಇದೇ ಚಾ.ನಗರದ ಪ್ರಥಮ ದರ್ಜೆ ಕಾಲೇಜಿನಲ್ಲೇ ಎಂಬುದು ಗಮನಾರ್ಹ. ಇದೀಗ ಎರಡು ದಶಕದ ಬಳಿಕ ಅವರು ಜಿಲ್ಲಾಧಿಕಾರಿಯಾಗಿ ಇಲ್ಲಿಗೆ ಬಂದಿದ್ದರೂ ಅದೇ ಕಾಲೇಜಿನಲ್ಲಿ ಬೋಧಕ ರಾಗಿ ಒಂದು ತಾಸು ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ಹಿಂದಿನ ನೆನಪನ್ನು ಮೆಲಕು ಹಾಕಿದರು. ''ತಾನು ಜಿಲ್ಲಾಧಿಕಾರಿ ಎಂಬು ದನ್ನು ಸದ್ಯ ನೀವು ಮರೆತು ಬಿಡಿ ಎಂದೇ ಪಾಠ ಆರಂಭಿಸಿದ ಅವರು, ತಾವು ಹಿಂದೆ ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದೆ'' ಎಂದು ತಿಳಿಸಿದರು. ಡಾ.ಎಂ.ಆರ್‌. ರವಿ ಅವರು ಬೋಧಕರಾಗಿ ಅಷ್ಟೇ ಅಲ್ಲ. ಪತ್ರಕರ್ತರಾಗಿ, ಅಂಕಣಕಾರರಾಗಿಯೂ ಗಮನ ಸೆಳೆದವರು. ಕವಿ, ಸಾಹಿತಿ ಆಗಿಯೂ ಅವರು, ತಮ್ಮ ಬರವಣಿಗೆಯನ್ನು ವಿಸ್ತರಿಸಿ ಕೊಂಡವರು.


from India & World News in Kannada | VK Polls https://ift.tt/36BGumt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...