ಮುನಿರತ್ನ v/s ಮುನಿರಾಜು: ಬಿಜೆಪಿ ವರಷ್ಠರ ಒಲವು ಯಾರ ಕಡೆಗೆ

ಬೆಂಗಳೂರು: ಆರ್‌.ಆರ್‌ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಗೊಂದಲದ ಗೂಡಾಗಿ ಪರಿಣಮಿಸಿದೆ. ಹಾಗೂ ಮುನಿರಾಜು ಗೌಡ ಪೈಕಿ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಎಂಬುವುದು ವರಿಷ್ಠರ ತೀರ್ಮಾನಕ್ಕೆ ರಾಜ್ಯ ಮುಖಂಡರು ಬಿಟ್ಟಿದ್ದಾರೆ. ಮೂಲ ವರ್ಸಸ್ ವಲಸಿಗ ಪೈಕಿ ದೆಹಲಿಯಲ್ಲಿ ಕುಳಿತುಕೊಂಡಿರುವ ವರಿಷ್ಠರ ಆಯ್ಕೆ ಯಾರು ಎಂಬುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಗುರುವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರಿಗೆ ಈ ಕುರಿತಾಗಿ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಿಎಸ್‌ ಯಡಿಯೂರಪ್ಪ ಮುನಿರತ್ನ ಪರವಾಗಿ ನಿಂತರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತುಳಸಿ ಮುನಿರಾಜು ಗೌಡ ಪರವಾಗಿ ನಿಂತಿದ್ದಾರೆ. ಮುನಿರತ್ನ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ವಲಸೆ ಬಂದವರು. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬುವುದು ಕೂಡಾ ಕುತೂಹಲವೇ! ಮತ್ತೊಂದು ಕಡೆಯಲ್ಲಿ ಮುನಿರಾಜು ಗೌಡ ಆರ್‌.ಎಸ್‌.ಎಸ್‌ ಮೂಲದಿಂದ ಬಂದವರು. ಹೈಕಮಾಂಡ್‌ ಮಟ್ಟದಲ್ಲಿರುವ ಬಿ.ಎಲ್‌ ಸಂತೋಷ್‌ ಹಾಗೂ ಸಂಘದ ಮುಖಂಡರ ಒಲವು ಇವರ ಮೇಲಿದೆ ಎನ್ನಲಾಗುತ್ತಿದೆ. ಆದರೆ ಮುನಿರತ್ನ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗಲೂ ಪಕ್ಷಕ್ಕಿಂತ ವೈಯಕ್ತಿಕ ಸಂಪರ್ಕವೇ ಇವರಿಗೆ ಮತವಾಗಿ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಮುನಿರತ್ನಗೆ ಟಿಕೆಟ್‌ ಕೊಡಬೇಕಾದ ಅನಿವಾರ್ಯತೆ ಬಿಜೆಪಿ ಮೇಲಿದೆ. ಬಹುತೇಕ ಮುನಿರತ್ನಗೆ ಟಿಕೆಟ್ ಗ್ಯಾರಂಟಿ ಎನ್ನಲಾಗುತ್ತಿದ್ದರೂ ಅಂತಿಮ ಹಂತದಲ್ಲಿ ಬದಲಾವಣೆ ನಡೆದರೂ ಅಚ್ಚರಿಯಿಲ್ಲ ಎಂಬ ಮಾತೂ ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.


from India & World News in Kannada | VK Polls https://ift.tt/34hp64D

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...