ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಗೆಲುವಿನಿಂದ ಮೂಕನಾಗಿದ್ದೇನೆಂದ ಕೆ.ಎಲ್‌ ರಾಹುಲ್‌!

ದುಬೈ: ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೆ ಮಾತನಾಡಿದ ತಂಡದ ನಾಯಕ , ಟಿ20 ಕ್ರಿಕೆಟ್‌ನಲ್ಲಿ 126 ರನ್‌ಗಳಂತಹ ಕಡಿಮೆ ಮೊತ್ತಕ್ಕೆ ಎದುರಾಳಿಯನ್ನು ನಿಯಂತ್ರಿಸಿದ ಬಳಿಕ ಮೂಕನಾಗಿದ್ದೇನೆ ಎಂದು ಹೇಳಿದರು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ನೀಡಿದ್ದ 127 ರನ್‌ಗಳ ಗುರಿ ಮುಟ್ಟುವಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿಫಲವಾಯಿತು. ಕ್ರಿಸ್‌ ಜೋರ್ಡನ್‌ ಹಾಗೂ ಅರ್ಷ್‌ದೀಪ್‌ ಸಿಂಗ್ ಮಾರಕ ಬೌಲಿಂಗ್‌ ನೆರವಿನಿಂದ ಪಂಜಾಬ್‌, ಹೈದರಾಬಾದ್‌ ವಿರುದ್ಧ 12 ರನ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೇರಿತು. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಎಂಟು ಅಂಕಗಳೊಂದಿಗೆ ಆರನೇ ಸ್ಥಾನ ಪಡೆಯಿತು. ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಕೆ.ಎಲ್‌ ರಾಹುಲ್‌, " ನಾವು ಅದನ್ನು ಅಭ್ಯಾಸವನ್ನಾಗಿ ಮಾಡುತ್ತಿದ್ದೇವೆ. ಗೆಲ್ಲುವುದು ಒಂದು ಅಭ್ಯಾಸ, ಅದು ಮೊದಲಾರ್ಧದಲ್ಲಿ ನಮಗೆ ಸಿಗಲಿಲ್ಲ. ಪ್ರಾಮಾಣಿಕವಾಗಿ, ನಾನು ಮೂಕನಾಗಿದ್ದೇನೆ. ಡೈವಿಂಗ್‌ ಫೀಲ್ಡಿಂಗ್‌ ಮತ್ತು ಬಿಗಿಯಾದ ಓವರ್‌ಗಳಿಂದ ಬ್ಯಾಟ್ಸ್‌ಮನ್‌ಗಳು ಗಳಿಸಿದ 10-15 ರನ್‌ಗಳು ತುಂಬಾ ಮುಖ್ಯ ಎಂಬುದು ಸಾಬೀತಾಗಿದೆ. ಈ ಕೆಲಸ ಆಟಗಾರರು ಮಾತ್ರವೇ ಮಾಡಿಲ್ಲ, ತೆರೆಮರೆಯಲ್ಲಿ ಸಹಾಯಕ ಸಿಬ್ಬಂದಿ ಪಾತ್ರವೂ ಇದೆ," ಎಂದು ಹೇಳಿದರು. "ಎರಡು ತಿಂಗಳಲ್ಲಿ ನೀವು ಏನನ್ನೂ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಇವರು ತಂಡದ ಹುಡುಗರನ್ನು ಉತ್ತಮ ಕಡೆಗೆ ತಳ್ಳುತ್ತಿದ್ದರು. ನಾವು ಪಾಯಿಂಟ್ಸ್‌ ಟೇಬಲ್‌ನ ಕೆಳಭಾಗದಲ್ಲಿ ಕುಳಿತಾಗಲೂ ನಾವು ಭಯಭೀತರಾಗಲಿಲ್ಲ. ನಾವು ಸ್ಕ್ರ್ಯಾಪ್ ಮಾಡುತ್ತಿದ್ದೇವೆ ಮತ್ತು ಗೆಲುವುಗಳು ಬರುತ್ತಿವೆ ಎಂದು ನಿಜವಾಗಿಯೂ ಸಂತೋಷಪಡುತ್ತೇವೆ, "ಎಂದು ಅವರು ಹೇಳಿದರು. ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡವನ್ನು ನಿಗದಿತ 20 ಓವರ್‌ಗಳಿಗೆ 126 ರನ್‌ಗಳಿಗೆ ಸನ್‌ರೈಸರ್ಸ್ ಹೈದರಾಬಾದ್‌ ಬೌಲರ್‌ಗಳು ನಿಯಂತ್ರಿಸಿದರು. ನಿಕೋಲಸ್‌ ಪೂರನ್‌ 32 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ರಶೀದ್‌ ಖಾನ್‌ ನಾಲ್ಕು ಓವರ್‌ಗಳಿಗೆ 14 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಪಡೆದರು. "ನಾನು ಮತ್ತು ಮಂದೀಪ್‌ ಸಿಂಗ್‌ ಮೊದಲನೇ ಓವರ್ ಆಡಿದ ಬಳಿಕ, ದೊಡ್ಡ ಮೊತ್ತ ಕಲೆ ಹಾಕುವ ಪಿಚ್‌ ಎಂದು ಭಾವಿಸಿದ್ದೆವು. 160 ರಿಂದ 170 ರನ್‌ಗಳನ್ನು ಗಳಿಸುವ ಬಗ್ಗೆ ಲೆಕ್ಕಾಚಾರ ಹಾಕಲಾಗಿತ್ತು. ಆರಂಭಿಕರು ರನ್‌ಗಳನ್ನು ಗಳಿಸಲು ಸ್ವತಂತ್ರರಾಗಿರುತ್ತಾರೆ, ಇದನ್ನೆ ಸನ್‌ರೈಸರ್ಸ್ ಹೈದರಾಬಾದ್‌ ಆರಂಭಿಕರು ಮಾಡಿದರು. ಮೊದಲ ಆರು ಓವರ್‌ಗಳಲ್ಲಿ 40ಕ್ಕಿಂತ ಹೆಚ್ಚು ರನ್‌ಗಳನ್ನು ನೀಡಬಾರದೆಂದು ನಿರೀಕ್ಷೆ ಮಾಡಿದ್ದೆ. ಹಾಗಾಗಿ, ನಾನು ಪಾಸಿಟಿವ್‌ ಆಗಿದ್ದೆ ಮತ್ತು ತಂಡ ಕೂಡ ಪಾಸಿಟಿವ್‌ ಆಗಿತ್ತು," ಎಂದು ರಾಹುಲ್‌ ತಿಳಿಸಿದರು. ಕಿಂಗ್ಸ್ ಇಲೆವೆನ್ ಪಂಜಾಬ್‌ ನಾಳೆ(ಸೋಮವಾರ) ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TndGXZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...