ಇತಿಹಾಸದ ಪುಟ ಸೇರಲಿದೆ ಈ ಬಾರಿಯ ನಾಡಹಬ್ಬ ಮೈಸೂರು ದಸರಾ..!

ಮೈಸೂರು: ಮೈಸೂರು ದಸರೆಯ ಪ್ರಮುಖ ಭಾಗವಾದ ಜಂಬೂಸವಾರಿ ಮೂರನೇ ಬಾರಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿ ಈ ಬಾರಿ ನಡೆಯುತ್ತವೆ. ಅಚ್ಚರಿ ಅಂದರೆ ಇದು ಕೇವಲ 300 ಮೀಟರ್ ಅಂತರದಲ್ಲಿ ಮಾತ್ರ. ಈ ಬಾರಿ ನಡೆಯುವ ದಸರಾ ಇತಿಹಾಸದಲ್ಲಿನ ವಿಶೇಷ ಘಟನೆಯಾಗಿ ದಾಖಲೆಯಾಗಲಿದೆ. ಶತಮಾನಗಳ ಇತಿಹಾಸವಿರುವ ದಸರಾ ಜಂಬೂಸವಾರಿ ಮೂರನೇ ಬಾರಿಗೆ ಅರಮನೆಯೊಳಗೆ ನಡೆಯುತ್ತಿದೆ. ಈ ಹಿಂದೆ 1994 ಸೂರತ್‌ ನಲ್ಲಿ ಪ್ಲೇಗ್ ಭೀಕರತೆ ಹಿನ್ನೆಲೆ ಬನ್ನಿಮಂಟಪದವರೆಗೂ ಜಂಬೂಸವಾರಿಯನ್ನು ಕಡಿತಗೊಳಿಸಿ ಅರಮನೆ ಆವರಣಕ್ಕೆ ಸೀಮಿತವಾಗಿರಿಸಲಾಗಿತ್ತು. ಬಳಿಕ 2002ರಲ್ಲಿ ನಾಗಪ್ಪ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ ಹಿನ್ನೆಲೆ ಹಾಗೂ ಕರ್ನಾಟಕ ತಮಿಳುನಾಡು ನಡುವೆ ಕಾವೇರಿ ವಿವಾದ ತೀವ್ರವಾಗಿದ್ದ ಕಾರಣ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಅರಮನೆಯೊಳಗೆ ಜಂಬೂಸವಾರಿ ನಡೆಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ 2020ರಲ್ಲಿ ಕೊರೋನಾ ಕಾರಣದಿಂದ ಮೂರನೇ ಬಾರಿಗೆ ಅರಮನೆ ಆವರಣಕ್ಕೆ ಮಾತ್ರ ದಸರೆಯನ್ನು ಸೀಮಿತವಾಗಿರಿಸಲಾಗಿದೆ. ಇನ್ನೂ ತಾನು ಯಾವುದೇ ತೊಂದರೇ ಇರಲಿ ಜಂಬೂಸವಾರಿಯ ಕ್ಯಾಪ್ಟನ್‌ ಅಭಿಮನ್ಯು ತಾನು ಮುಂದು ಎನ್ನುವುದನ್ನು ತೋರಿಸಿಕೊಟ್ಟದ್ದು ಎಲ್ಲರ ಮನಗೆದ್ದಿದ್ದಾನೆ. ಈ ಬಾರಿ ದಸರೆಗೆ ಸಾಕ್ಷಿಯಾಗುವುದು ಕೇವಲ 300 ಜನರು ಮಾತ್ರ. ಇದರಲ್ಲಿ ಕಲಾವಿದರು ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 131ಮಂದಿ, ನಂದಿಧ್ವಜದ ಮಹದೇವಪ್ಪ ಮತ್ತು ತಂಡ ಹಾಗೂ ಮಲ್ಲೇಶಯ್ಯ ತಂಡದ 10 ಕಲಾವಿದರು, ನಾದಸ್ವರದ ಕೃಷ್ಣಮೂರ್ತಿ ತಂಡ ಹಾಗೂ ಪುಟ್ಟಸ್ವಾಮಿ ತಂಡದ ತಲಾ 10 ಮಂದಿ, ವೀರಗಾಸೆಯ ರಾಜಪ್ಪ ತಂಡದ 10, ಚಂಡೆ ಮೇಳದ ಶ್ರೀನಿವಾಸರಾವ್ ತಂಡದ 10, ಮರಗಾಲು ಸಿದ್ಧರಾಜು ತಂಡದ 8, ಚಿಲಿಪಿಲಿ ಗೊಂಬೆ ಪ್ರದರ್ಶನದ ಟಿ.ಕೆ ರಾಜೇಶ್ವರ್ ತಂಡದ 10 ಜನ ಭಾಗವಹಿಸಲಿದ್ದಾರೆ. ಇನ್ನು ದಸರಾ ಸಂಭ್ರಮವನ್ನು ಹೆಚ್ಚಿಸುವ ಆನೆಬಂಡಿ ಸಂಗೀತದಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್ ತಂಡ ಭಾಗವಹಿಸಲಿದ್ದು 15 ಕಲಾವಿದರೂ ಇಲಿದ್ದಾರೆ. ಅಲ್ಲದೇ ಕೆಎಆರ್ ಪಿ ಮೌಂಟೆಡ್ ಕಂಪನಿ ಅಶ್ವದಳದ 36 ಯೋಧರು, ಪಟ್ಟದ ನಾದಸ್ವರ ವಾದದಲ್ಲಿ ನಟರಾಜು ತಂಡದ 10 ಮಂದಿ ಭಾಗವಹಿಸಲಿದ್ದಾರೆ. ಇದಲ್ಲದೆ ಮಾಧ್ಯಮದವರು 50 ಮಂದಿ, ಅಧಿಕಾರಿಗಳು 50 ಮಂದಿ ಇರಲಿದ್ದಾರೆ. ಉಳಿದಂತೆ ಜನಪ್ರತಿನಿಧಿಗಳು ಹಾಗೂ ಪೊಲೀಸರು ಸೇರಿ 300 ಒಳಗೆ ಸಂಖ್ಯೆಯನ್ನು ಸೀಮಿತಗೊಳಿಸಲು ಪ್ರಯತ್ನ ನಡೆಯುತ್ತಿದೆ.


from India & World News in Kannada | VK Polls https://ift.tt/2IYNHUJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...