ವಿಜಯದಶಮಿ ಅಂಗವಾಗಿ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಹಲವು ಜ್ವಲಂತ ವಿದ್ಯಮಾನಗಳ ಕುರಿತು ಮಾತನಾಡಿದರು. ಪ್ರಮುಖವಾಗಿ ಕೊರೊನಾ ವೈರಸ್ ಹಾವಳಿ, ಲಡಾಖ್ ಗಡಿಯಲ್ಲಿ ಚೀನಾದ ಆಕ್ರಮಣ ಹಾಗೂ ಸಿಎಎ ವಿರೋಧಿ ಆಂದೋಲನದ ಕುರಿತು ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಇಷ್ಟೇ ಅಲ್ಲದೇ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರದ ಶಿಲಾನ್ಯಾಸ ಮತ್ತು ಆ ಸಂದರ್ಭದಲ್ಲಿ ದೇಶ ತೋರಿದ ಸಂಯಮವನ್ನು ಕೊಂಡಾಡಿದ ಮೋಹನ್ ಭಾಗವತ್, ದೇಶ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿರುವುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟರು. ಇನ್ನು ಕೊರೊನಾ ವೈರಸ್ ಹಾವಳಿಯ ಕಾರಣಕ್ಕೆ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯದಶಮಿಗೆ ಕೇವಲ 50 ಜನ ಸ್ವಯಂಸೇವಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಹಾಗಾದರೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇಂದಿನ(ಅ.25) ಭಾಷಣವನ್ನು ಗಮನಿಸುವುದಾದರೆ...ಕೊರೊನಾ ವೈರಸ್ ಹಾವಳಿ, ಚೀನಾ ಆಕ್ರಮಣ, ಸಿಎಎ ಸೇರಿದಂತೆ ರಾಷ್ಟ್ರದ ಹಲವು ಜ್ವಲಂತ ವಿದ್ಯಮಾನಗಳ ಮೇಲೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ವಿಜಯದಶಮಿ ಪ್ರಯುಕ್ತ ನಾಗ್ಪುರ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಿದರು.

ವಿಜಯದಶಮಿ ಅಂಗವಾಗಿ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಹಲವು ಜ್ವಲಂತ ವಿದ್ಯಮಾನಗಳ ಕುರಿತು ಮಾತನಾಡಿದರು. ಪ್ರಮುಖವಾಗಿ ಕೊರೊನಾ ವೈರಸ್ ಹಾವಳಿ, ಲಡಾಖ್ ಗಡಿಯಲ್ಲಿ ಚೀನಾದ ಆಕ್ರಮಣ ಹಾಗೂ ಸಿಎಎ ವಿರೋಧಿ ಆಂದೋಲನದ ಕುರಿತು ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಇಷ್ಟೇ ಅಲ್ಲದೇ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರದ ಶಿಲಾನ್ಯಾಸ ಮತ್ತು ಆ ಸಂದರ್ಭದಲ್ಲಿ ದೇಶ ತೋರಿದ ಸಂಯಮವನ್ನು ಕೊಂಡಾಡಿದ ಮೋಹನ್ ಭಾಗವತ್, ದೇಶ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿರುವುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟರು. ಇನ್ನು ಕೊರೊನಾ ವೈರಸ್ ಹಾವಳಿಯ ಕಾರಣಕ್ಕೆ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯದಶಮಿಗೆ ಕೇವಲ 50 ಜನ ಸ್ವಯಂಸೇವಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಹಾಗಾದರೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇಂದಿನ(ಅ.25) ಭಾಷಣವನ್ನು ಗಮನಿಸುವುದಾದರೆ...
'ದೇಶ ಒಂದುಗೂಡಿಸಿದ ಕೊರೊನಾ'!

ತಮ್ಮ ಭಾಷಣದಲ್ಲಿ ಮಾರಕ ಕೊರೊನಾ ವೈರಸ್ ಹಾವಳಿ ಕುರಿತು ಉಲ್ಲೇಖಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕೊರೊನಾ ವೈರಾಣು ದೇಶದಾದ್ಯಂತ ಸಂಕಷ್ಟಗಳ ಸರಮಾಲೆಯನ್ನು ಹೊತ್ತು ತಂದಿದೆ ಎಂದು ಹೇಳಿದರು. ಆದರೆ ನಮ್ಮ ಸಂಘಟಿತ ಪ್ರಯತ್ನ ಈ ಮಾರಕ ವೈರಾಣುವಿಗೆ ಸೋಲುಣಿಸುವುದು ನಿಶ್ಚಿತ ಎಂದೂ ಮೋಹನ್ ಭಾಗವತ್ ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಹಾಗೂ ಜನತೆಯ ಒಗ್ಗಟ್ಟಿನ ಫಲವಾಗಿ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಸೂಕ್ತ ಸಮಯದಲ್ಲಿ ಜಾರಿ ಮಾಡಲಾದ ಲಾಕ್ಡೌನ್ ಲಕ್ಷಾಂತರ ಜನರ ಜೀವ ಉಳಿಸಿದೆ ಎಂದು ಭಾಗವತ್ ಅಭಿಪ್ರಾಯಪಟ್ಟರು. ಅಲ್ಲದೇ ಕೊರೊನಾ ಕಾಲದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳು ಹಾಗೂ ಆರ್ಥಿಕ ವ್ಯವಸ್ಥೆ ಸುಭದ್ರಗೊಳಿಸಲು ಕೈಗೊಂಡಿರುವ ನಿರ್ಣಯಗಳನ್ನು ಆರ್ಎಸ್ಎಸ್ ಮುಖ್ಯಸ್ಥರು ಶ್ಲಾಘಿಸಿದರು.
ಕೊರೊನಾದಿಂದಾಗಿ ಕೆಲವರಿಗೆ ಕೋಮು ದ್ವೇಷ ಸಾಧಿಸಲಾಗಲಿಲ್ಲ: ಮೋಹನ್ ಭಾಗವತ್!
ಸಂಘಟಿತ ಹೋರಾಟದ ಬಲದಿಂದ ಮಾರಕ ಕೊರೊನಾ ವೈರಸ್ನ್ನು ದೇಶದಿಂದ ಒದ್ದೊಡಿಸುವುದು ಖಚಿತ ಎಂದು ಮೋಹನ್ ಭಾಗವತ್ ಈ ವೇಳೆ ಭರವಸೆ ವ್ಯಕ್ತಪಡಿಸಿದರು.
ಸಿಎಎ ವಿರೋಧಿ ಆಂದೋಲನವನ್ನು ಟೀಕಿಸಿದ ಭಾಗವತ್!

ಇನ್ನು ತಮ್ಮ ಭಾಷಣದಲ್ಲಿ ಸಿಎಎ ವಿರೋಧಿ ಆಂದೋಲನವನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್, ಸಿಎಎ ಕಾನೂನು ಕುರಿತು ಮುಸ್ಲಿಂ ಸಹೋದರರಲ್ಲಿ ಭಯ ಹುಟ್ಟಿಸುವ ಹುನ್ನಾರ ನಡೆದಿದೆ ಎಂದು ಕಿಡಿಕಾರಿದರು.
ಸಿಎಎ ವಿರೋಧಿ ಆಂದೋಲನದ ನೆರಳಲ್ಲಿ ದೇಶದಾದ್ಯಂತ ಕೋಮು ದಳ್ಳುರಿ ಹಬ್ಬಿಸಲು ಹುನ್ನಾರ ನಡೆಸಿದವರಿಗೆ ಕೊರೊನಾ ಆಘಾತ ನೀಡಿದೆ ಎಂದು ಹೇಳಿದರು. ಸಿಎಎ ಯಾವುದೇ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿಯಲ್ಲ. ಬದಲಿಗೆ ನೆರೆಯ ದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ ನಮ್ಮ ಸಹೋದರರಿಗೆ ನೆರವು ನೀಡಲು ಜಾರಿಗೆ ತಂದ ಕಾನೂನು ಎಂದು ಮೋಹನ್ ಬಾಗವತ್ ಹೇಳಿದರು.
ಮುಸ್ಲಿಮರನ್ನು ಪರಿಗಣಿಸದಿದ್ದರೆ ಅದು ಹಿಂದುತ್ವವೇ ಆಗುವುದಿಲ್ಲ: ಮೋಹನ್ ಭಾಗವತ್
ಸಿಎಎ ಹೆಸರಿನಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಈ ಕೀಳು ರಾಜಕೀಯವನ್ನು ದೇಶದ ಜನತೆ ಸ್ಪಷ್ಟವಾಗಿ ತಿರಸ್ಕರಿಸಿರುವುದು ಸಂತಸದ ಸಂಗತಿ ಎಂದು ಭಾಗವತ್ ನುಡಿದರು. ಅಲ್ಲದೇ ನಮ್ಮ ಮುಸ್ಲಿಂ ಸಹೋದರರು ಸುಳ್ಳು ರಾಜಕೀಯ ದಾಳಕ್ಕೆ ಬಲಿಯಾಗಬಾರದು ಎಂದು ಭಾಗವತ್ ಮನವಿ ಮಾಡಿದರು.
'ಚೀನಾ ಆಕ್ರಮಣಕ್ಕೆ ಒಗ್ಗಟ್ಟಿನ ಮೂಲಕ ತಕ್ಕ ಉತ್ತರ ನೀಡಲಾಗಿದೆ'!

ಅದರಂತೆ ಲಡಾಖ್ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಕಟು ಶಬ್ಧಗಳಲ್ಲಿ ಟೀಕಿಸಿದ ಮೋಹನ್ ಭಾಗವತ್, ನೆಲದಾಹಿ ಚೀನಾದ ಹುನ್ನಾರವನ್ನು ಇಡೀ ಜಗತ್ತು ಅರಿತಿದೆ ಎಂದು ಹರಿಹಾಯ್ದರು.
ಲಡಾಖ್ ಗಡಿಯಲ್ಲಿ ಭಾರತವನ್ನು ಕೆಣಕಿದ ಚೀನಾಗೆ ನಮ್ಮ ರಕ್ಷಣಾ ಪಡೆಗಳು ದಿಟ್ಟ ಉತ್ತರ ನೀಡಿದ್ದು, ಜನತೆಯ ಒಗ್ಗಟ್ಟಿನಿಂದ ಚೀನಾವನ್ನು ಮಣಿಸಲು ಸಾಧ್ಯವಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥರು ಅಭಿಪ್ರಾಯಪಟ್ಟರು.
ಚೀನಾದ ಆಕ್ರಮಣದ ವಿರುದ್ಧ ಭಾರತದ ಒಗ್ಗಟ್ಟಿನ ಹೋರಾಟ: ಮೋಹನ್ ಭಾಗವತ್!
ಲಡಾಖ್ ಗಡಿಯಲ್ಲಿ ನಮ್ಮ ಸೇನೆಯ ದಿಟ್ಟ ಹೋರಾಟ ಅತ್ಯಂತ ಶ್ಲಾಘನೀಯ ಎಂದ ಭಾಗವತ್, ಜೂನ್ 15ರಂದು ನಡೆದ ಹೋರಾಟದಲ್ಲಿ ಹುತಾತ್ಮರಾದ ಸೇನೆಯ 20 ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ನುಡಿದರು.
ಭಾರತ ಮಾತ್ರವಲ್ಲದೇ ತೈವಾನ್, ವಿಯೆಟ್ನಾಂ, ಜಪಾನ್ ಹಾಗೂ ಅಮೆರಿಕದೊಂದಿಗೂ ದ್ವೇಷ ಸಾಧಿಸುತ್ತಿರುವ ಚೀನಾ ವಿರುದ್ಧ ಜಾಗತಿಕ ಕ್ರಮ ಕೈಗೊಳ್ಳುವ ಸಮಯವಿದು ಎಂದು ಭಾಗವತ್ ಅಭಿಪ್ರಾಯಪಟ್ಟರು.
ದೇಶ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿದೆ ಎಂದ ಭಾಗವತ್!

ಇನ್ನು ಆರ್ಟಿಕಲ್ 370, ರದ್ದತಿ, ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ಜನತೆ ತೋರಿದ ಸಂಯಮ ಹಾಗೂ ಸಂವೇದನೆ ನಿಜಕ್ಕೂ ಅದ್ಭುತವಾದದು ಎಂದು ಮೋಹನ್ ಭಾಗವತ್ ನುಡಿದರು.
'ಮಂದಿರಕ್ಕಾಗಿ ಬಹಳಷ್ಟು ಜನ ತ್ಯಾಗ ಮಾಡಿದ್ದಾರೆ, ಈ ದಿನ ನವ ಭಾರತಕ್ಕೆ ಹೊಸ ಆರಂಭ': ಮೋಹನ್ ಭಾಗವತ್
ರಾಮ ಮಂದಿರ ನಿರ್ಮಾಣದ ಭಾರತೀಯರ ಕನಸು ಇದೀಗ ನಿಜವಾಗಿದ್ದು, ರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮ ಮಂದಿರ ಶೀಘ್ರದಲ್ಲೇ ತಲೆ ಎತ್ತಲಿದೆ. ಸಮಸ್ತ ಭಾರತೀಯರು ಈ ಶುಭ ಘಳಿಗೆಗೆ ಕಾತರದಿಂದ ಕಾಯುತ್ತಿದ್ದು, ರಾಮ ಮಂದಿರ ದೇಶದ ಏಕತೆಯ ಪ್ರತೀಕವಾಗಿ ಭಾರತವನ್ನು ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದು ಮೋಹನ್ ಭಾಗವತ್ ಭರವಸೆ ವ್ಯಕ್ತಪಡಿಸಿದರು.
from India & World News in Kannada | VK Polls https://vijaykarnataka.com/news/india/know-about-mohan-bhagwat-speech-at-rss-headquarter/articleshow/78855537.cms