ಗುವಾಹಟಿ: ನಡೆಸಿ ಯುವತಿಯನ್ನು ಸಾಯಿಸಿದ್ದಾರೆ ಎಂದು ಆಕ್ರೋಶಗೊಂಡ ಸ್ಥಳೀಯರು ಇಬ್ಬರು ಆರೋಪಿಗಳನ್ನು ಸಾಮೂಹಿಕವಾಗಿ ಥಳಿಸಿ, ಅವರ ತಲೆ ಕಡಿದು ಹತ್ಯೆಗೈದು, ಬಳಿಕ ಸುಟ್ಟು ಹಾಕಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ರೋಹಿಮಾಪುರ ಗ್ರಾಮದ ರಶ್ಮಿ ಗೌರ್ ಎಂಬ ಯುವತಿ ಏಕಾಏಕಿ ಹಾಸಿಗೆ ಹಿಡಿದಿದ್ದಳು. ತನ್ನ ಮೇಲೆ ರಾಮಾವತಿ ಹಲುವಾ ಮತ್ತು ಬಿಜೊಯ್ ಗೌರ್ ಎಂಬ ಇಬ್ಬರು ವಾಮಾಚಾರ ಮಾಡಿದ್ದಾರೆ ಎಂದು ಆಕೆ ಗ್ರಾಮಸ್ಥರ ಬಳಿ ದುಃಖ ತೋಡಿಕೊಂಡಿದ್ದಳು. ದುರಾದೃಷ್ಟವಶಾತ್ ಮಾರನೇ ದಿನವೇ ಆಕೆ ಮೃತಪಟ್ಟಿದ್ದಳು. ಇದಾಗಿ ಕೆಲವೇ ದಿನದಲ್ಲಿ ಗ್ರಾಮದ ಮತ್ತೊಬ್ಬ ಯುವತಿ ಕೂಡ ಹಾಸಿಗೆ ಹಿಡಿದಿದ್ದಳು. ಆಕೆಯೂ ವಾಮಾಚಾರದ ಆರೋಪ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಇಬ್ಬರು ಆರೋಪಿಗಳನ್ನು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ಬಳಿಕ ಇಬ್ಬರನ್ನು ಹೊತ್ತುಕೊಂಡು ಯುವತಿ ರಶ್ಮಿಯ ಅಂತ್ಯಸಂಸ್ಕಾರ ನಡೆಸಲಾಗಿದ್ದ ಗುಡ್ಡದ ತುದಿಗೆ ಒಯ್ದು ಅವರುಗಳ ತಲೆ ಕಡಿದು ಶವಗಳನ್ನು ಸುಟ್ಟುಹಾಕಿದ್ದಾರೆ. ಬುಧವಾರದಂದೇ ಹತ್ಯೆ ನಡೆದಿದ್ದರೂ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಲೇ ಗ್ರಾಮಕ್ಕೆ ತೆರಳಿದ ಪೊಲೀಸರು, 9 ಜನರನ್ನು ಬಂಧಿಸಿದ್ದಾರೆ. ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/33oB2Cf