ಹೊಸದಿಲ್ಲಿ: ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ನಿವಾಸಿಗಳಿಗೆ ಸಂದೇಶ ನೀಡಿರುವ ನೀಡಿರುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ, 'ಭೂಮಿಯ ಸಮೃದ್ಧ ಜೀವವೈವಿಧ್ಯತೆ ಕಾಪಾಡಲು' ಕರೆ ನೀಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಭೂಮಿಯ ಸಮೃದ್ಧ ಜೀವವೈಧ್ಯತೆಯನ್ನು ಕಾಪಾಡಲು ನಾವು ಪ್ರತಿಜ್ಞಾಬದ್ದರಾಗಿದ್ದೇವೆ. ಭೂಮಿಯನ್ನು ಹಂಚಿಕೊಳ್ಳುವ ಸಸ್ಯ ಸಂಪತ್ತು ಹಾಗೂ ಪ್ರಾಣಿಗಳು ಸಮೃದ್ಧವಾಗಿರುವುದನ್ನು ಖಚಿಪಡಿಸಲು ಸಾಧ್ಯವಾದಷ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮುಂಬರುವ ಪೀಳಿಗೆಗೆ ಇನ್ನಷ್ಟು ಉತ್ತಮವಾದ ಗ್ರಹವನ್ನು ಬಿಟ್ಟುಕೊಡಬೇಕು' ಎಂದು ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಮನ್ ಕೀ ಬಾತ್ ವಿಡಿಯೋ ತುಣುಕನ್ನು ಹಂಚಿರುವ ಪ್ರಧಾನಿ ಮೋದಿ, ಮಳೆನೀರಿನ ಸಂರಕ್ಷಣೆ ಹಾಗೂ ಪ್ರಕೃತಿಯ ಸಮೃದ್ಧ ವೈವಿಧ್ಯತೆಯನ್ನು ರಕ್ಷಿಸುವ ಬಗ್ಗೆ ಮೆಲುಕು ಹಾಕಿದ್ದಾರೆ.
ಅಮೆರಿಕ ಪರ ನಿಲ್ಲದಂತೆ ಚೀನಾ ಮನವಿಯ ಮರುದಿನವೇ ಮೋದಿ-ಟ್ರಂಪ್ ಮಾತುಕತೆ
''ಜೂನ್ 5ರಂದು ಇಡೀ ಜಗತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದೆ. ಈ ಬಾರಿ ಜೈವಿಕ ವೈವಿಧ್ಯತೆ ಪ್ರಮುಖ ವಿಷಯವಾಗಿದೆ. ಸಮಕಾಲೀನ ಪರಿಸ್ಥಿತಿಯಲ್ಲಿ ಈ ವಿಷಯ ಹೆಚ್ಚಿನ ಮಹತ್ವ ಗಿಟ್ಟಿಸಿದೆ. ಕೊರೊನಾ ವೈರಸ್ ಲಾಕ್ಡೌನ್ನಿಂದ ಕಳೆದ ಕೆಲವು ಸಮಯಗಳಿಂದ ಜೀವನದ ಆವೇಗವು ಕುಂಠಿತವಾಗಿದೆ. ಅದೇ ಸಂದರ್ಭದಲ್ಲಿ ನಮ್ಮ ಸುತ್ತುಮುತ್ತಲಿನ ಪರಿಸರ ಜೀವವೈವಿಧ್ಯತೆಯನ್ನು ಹತ್ತಿರದಿಂದ ನೋಡುವ ಅವಕಾಶ ದೊರಕಿದೆ'' ಎಂದವರು ಹೇಳಿದರು.
''ಪರಿಸರ ಮಾಲಿನ್ಯದಿಂದಾಗಿ ಕಣ್ಮರೆಯಾದ ಅನೇಕ ಪಕ್ಷಿಗಳ ಚಿಲಿಪಿಲಿಯನ್ನು ಜನರೀಗ ಆಲಿಸುತ್ತಿದ್ದಾರೆ. ಅನೇಕ ಪ್ರದೇಶಗಳಲ್ಲಿ ಪ್ರಾಣಿಗಳ ಮುಕ್ತ ಸಂಚಾರದ ಸುದ್ದಿಗಳು ಕೇಳಿ ಬರುತ್ತಿದೆ. ನನ್ನ ಹಾಗೆ ನೀವು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದ್ದಿಗಳನ್ನು ಓದಿರುವಿರಿ''.
''ಅನೇಕ ಮಂದಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮನೆಯಿಂದಲೇ ದೂರದ ಕಣಿವೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುತ್ತಿದೆ. ದೂರ ದೂರದಿಂದ ಬೆಳಕಿನ ರಶ್ಮಿಯನ್ನು ನೋಡುತ್ತಿದ್ದಾರೆ. ಈ ಚಿತ್ರಗಳನ್ನು ನೋಡಿದ ಅನೇಕರ ಮನದಲ್ಲಿ ಈ ದೃಶ್ಯಗಳನ್ನು ಶಾಶ್ವತವಾಗಿಡಲು ಸಾಧ್ಯವೇ ಎಂಬ ಚಿಂತನೆ ಮೂಡಿರಬಹುದು. ಈ ಎಲ್ಲ ಚಿತ್ರಗಳು ಪ್ರಕೃತಿಗಾಗಿ ಏನಾದರೂ ಹಿಂತಿರುಗಿಸಬೇಕೆಂಬ ಸ್ಫೂರ್ತಿಯನ್ನು ನೀಡುತ್ತಿದೆ'' ಎಂದರು.
''ನದಿಗಳು ಸದಾ ಸ್ವಚ್ಛವಾಗಿರಬೇಕು. ಪಶು, ಪಕ್ಷಿಗಳು ಸ್ವಚ್ಛಂದವಾಗಿ ಜೀವಿಸುವ ಹಕ್ಕು ದೊರಕಿದೆ. ಆಕಾಶವು ಶುಭ್ರವಾಗಿದೆ. ಹಾಗಾಗಿ ಪ್ರಕೃತಿಯ ಜೊತೆಗೆ ಬೆರೆತುಕೊಂಡು ಜೀವಿಸಲು ಸ್ಫೂರ್ತಿ ಪಡೆಯಬಹುದಾಗಿದೆ'' ಎಂದರು.
"ನನ್ನ ಪ್ರಿಯ ದೇಶ ಬಾಂಧವರೇ, 'ಜಲವಿದ್ದರೆ ಜೀವ', 'ಜಲವಿದ್ದರೆ ನಾಳೆ' ಇರುತ್ತದೆ ಎಂಬ ವಾಕ್ಯವನ್ನು ಪದೇ ಪದೇ ಕೇಳುತ್ತಿದ್ದೇವೆ. ಆದರೆ ಜಲದೊಂದಿಗೆ ನಮಗೆ ಜವಾಬ್ದಾರಿಯು ಇದೆ. ಮಳೆ ನೀರನ್ನು ನಾವು ರಕ್ಷಿಸಬೇಕು. ಮಳೆ ನೀರಿನ ಪ್ರತಿಯೊಂದು ಬಿಂದುವನ್ನು ಸಂರಕ್ಷಿಸಬೇಕು. ಗ್ರಾಮದಲ್ಲಿ ಮಳೆ ನೀರನ್ನು ಹೇಗೆ ಸಂರಕ್ಷಿಸಬಹುದು ಎಂಬುದಕ್ಕೆ ಪಾರಂಪರಿಕ ಸರಳವಾದ ಮಾರ್ಗಗಳಿವೆ. ಅಂತಹ ಸರಳ ಮಾರ್ಗಗಳಿಂದ ನಾವು ನೀರನ್ನು ರಕ್ಷಿಸಬಹುದಾಗಿದೆ. ಐದು, ಏಳು ದಿನ ನೀರು ನಿಂತರೆ ಭೂ ತಾಯಿಯಲ್ಲಿ ಸೇರುತ್ತದೆ. ಅದೇ ನೀರು ಜೀವನದ ಶಕ್ತಿಯಾಗಿ ಪರಿವರ್ತನೆಯಾಗಲಿದೆ'' ಎಂದರು.
ಪ್ರಾಬಲ್ಯ ಕುಗ್ಗುವ ಭಯ: ಶೀತಲ ಸಮರದಲ್ಲಿ ಅಮೆರಿಕ ಪರ ನಿಲ್ಲದಂತೆ ಭಾರತಕ್ಕೆ ಚೀನಾ ಮನವಿ
''ಹಾಗಾಗಿ ಈ ಮಳೆಗಾಲದಲ್ಲಿ ನಾವು ನೀರನ್ನು ರಕ್ಷಿಸಲಿದ್ದೇವೆ ಎಂಬ ಪಣತೊಡಬೇಕಾಗಿದೆ. ನೀರನ್ನು ಸಂರಕ್ಷಿಸಬೇಕಿದೆ. ನನ್ನ ಪ್ರಿಯ ದೇಶ ಬಾಂಧವರೇ, ಸ್ವಚ್ಛ ಪರಿಸರವು ನೇರವಾಗಿ ನಮ್ಮ ಜೀವನ ಹಾಗೂ ನಮ್ಮ ಮಕ್ಕಳ ಭವಿಷ್ಯದ ವಿಷಯವಾಗಿದೆ. ಹಾಗಾಗಿ ಪ್ರತಿಯೊಬ್ಬರು ಇದರ ಬಗ್ಗೆ ಆಲೋಚಿಸಬೇಕಿದೆ'' ಎಂದು ನುಡಿದರು.
''ಈ ಪರಿಸರ ದಿನಾಚರಣೆಯಂದು ಸಾಧ್ಯವಾದಷ್ಟು ಮರಗಳನ್ನು ನೆಡಿರಿ. ಹಾಗೆಯೇ ಪ್ರಕೃತಿಯ ಸೇವೆಗಾಗಿ ಸಂಕಲ್ಪ ಮಾಡಿ. ಈ ಮೂಲಕ ಪ್ರಕೃತಿ ಜೊತೆ ಬಾಂಧವ್ಯ ಮಾಡಿ. ಹೌದು, ಉಷ್ಣಾಂಶ ಹೆಚ್ಚಾಗುತ್ತಿದೆ. ಹಾಗಾಗಿ ಪಕ್ಷಿಗಳಿಗಾಗಿ ನೀರನ್ನಿಡಲು ಮರೆಯದಿರಿ'' ಎಂದು ಮಾತನ್ನುಕೊನೆಗೊಳಿಸಿದರು.
On #WorldEnvironmentDay, we reiterate our pledge to preserve our planet’s rich biodiversity. Let us collectively do… https://t.co/Q7qyddQYnW
— Narendra Modi (@narendramodi) 1591326601000
from India & World News in Kannada | VK Polls https://ift.tt/371Mggk