ಉದ್ಯೋಗ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಕೊರೊನಾ ಸಂಕಷ್ಟದಲ್ಲಿ ಗಲ್ಫ್ ಕನ್ನಡಿಗರು

ಕೊರೊನಾ ಅಟ್ಟಹಾಸದಲ್ಲಿ ಗಲ್ಫ್‌ ರಾಷ್ಟ್ರದಲ್ಲಿರುವ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ದುಬೈ ಸೇರಿಸಂತೆ ಕೆಲವು ರಾಷ್ಟ್ರಗಳಿಂದ ಕನ್ನಡಿಗರನ್ನು ವಿಮಾನದಲ್ಲಿ ತಾಯ್ನಾಡಿಗೆ ವಾಪಸ್‌ ಕರೆಸಿಕೊಳ್ಳಲಾಗಿದೆ. ಆದರೆ ದೊಡ್ಡ ಸಂಖ್ಯೆಯ ಕನ್ನಡಿಗರು ಉದ್ಯೋಗವೂ ಇಲ್ಲದೆ ಕೈಯಲ್ಲಿ ಖರ್ಚಿಗೆ ಹಣವೂ ಇಲ್ಲದೆ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ನಿರ್ಮಾಣ ಕಾರ್ಯಗಳು ಹಾಗೂ ಕೆಲವೊಂದು ಕಂಪನಿಗಳು ಮುಚ್ಚಿವೆ. ಪರಿಣಾಮ ಸಣ್ಣ ಪುಟ್ಟ ನೌಕರಿಯಲ್ಲಿ ದುಡಿಯುತ್ತಿದ್ದ ದೊಡ್ಡ ಸಂಖ್ಯೆಯ ಕನ್ನಡಿಗರು ಅತಂತ್ರಕ್ಕೆ ಒಳಗಾಗಿದ್ದಾರೆ. ಗಲ್ಫ್ ತೊರೆದು ತಾಯ್ನಾಡಿಗೆ ಆಗಮಿಸಲು ಅವರೆಲ್ಲಾ ತಯಾರಾಗಿದ್ದರೂ ವಿಮಾನದ ಕೊರತೆ ಹಾಗೂ ರಾಯಭಾರಿ ಕಚೇರಿಯಲ್ಲಿರುವ ಗೊಂದಲದಿಂದ ಅಲ್ಲೇ ಉಳಿಯುವಂತಹ ಪರಿಸ್ಥಿತಿ ಇದೆ. ಕಡ್ಡಾಯ ರಜೆಯಿಂದ ವೇತನ ಇಲ್ಲದೆ ಸಂಷ್ಟದಲ್ಲಿರುವ ಗಲ್ಫ್‌ ಕನ್ನಡಿಗರ ಕುರಿತಾದ ವಿವರ ಇಲ್ಲಿದೆ.

ಉದ್ಯೋಗ ಇಲ್ಲ, ದಿನ ಕಳೆಯಲು ಹಣವೂ ಇಲ್ಲ! ಮುಂದೇನು ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಆದರೆ ತಾಯ್ನಾಡಿಗೆ ಮರಳಲು ಮುಂದಾದರೆ ಲಾಕ್ ಡೌನ್ ಕಾರಣದಿಂದ ಸಮರ್ಪಕ ವಿಮಾನಯಾನ ಸೌಕರ್ಯವಿಲ್ಲದೆ ಪರದಾಡುವ ಸ್ಥಿತಿ ಇದೆ ಎನ್ನುತ್ತಾರೆ ಗಲ್ಫ್‌ ಕನ್ನಡಿಗ ಎಸ್‌ಕೆಎಸ್‌ಎಸ್‌ಎಫ್ ಜಿಸಿಸಿ ಅನಿವಾಸಿ ಸಂಘಟನೆಯ ಅಧ್ಯಕ್ಷ ಹುಸೈನ್ ಫೈಜಿ. ಕೊರೊನಾ ಸಂಕಷ್ಟದ ಕಾರಣದಿಂದಾಗಿ ತಾಯ್ನಾಡಿಗೆ ಮರಳಲು ಸುಮಾರು 2000 ರಿಂದ 3000 ರಷ್ಟು ಜನರು ಯುಎಇನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಿಜಿಸ್ಟರ್‌ ಮಾಡಿಕೊಂಡಿದ್ದಾರೆ. ಹೆಸರು ದಾಖಲಿಸಿ ಎರಡು ತಿಂಗಳು ಕಳೆದರು ಫೋನ್ ಕರೆ ಇನ್ನೂ ಬಂದಿಲ್ಲ ಎಂದು ನೋವು ತೋಡಿಕೊಂಡರು. ಇದುವರೆಗೂ ಕೇವಲ 500 ಜನರು ಮಾತ್ರ ತಮ್ಮೂರಿಗೆ ಬರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹವನ್ನು ಅವರು ವ್ಯಕ್ತಪಡಿಸುತ್ತಾರೆ.

ಗಲ್ಫ್‌ ರಾಷ್ಟ್ರದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿಡಿಯೋ ಸಂವಾದದಲ್ಲಿ ಭರವಸೆಯನ್ನು ನೀಡಿದ್ದರು. ಈ ನಿಟ್ಟಿನಲ್ಲಿ ಒಂದಿಷ್ಟು ಜನರನ್ನು ಆದ್ಯತೆಯ ಮೇಲೆ ತಾಯ್ನಾಡಿಗೆ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ವಿಮಾನದ ಕೊರತೆಯಿಂದ ಹೆಚ್ಚಿನ ಸಂಖ್ಯೆಯ ಜನರು ತಾಯ್ನಾಡಿಗೆ ಬರಲು ಸಾಧ್ಯವಾಗಿಲ್ಲ. ದುಬೈನಿಂದ ಮಂಗಳೂರಿಗೆ ಬಂದವರಲ್ಲಿ ಕೆಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವು ಜನರಲ್ಲಿ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರದ ಅಸ್ಪಷ್ಟ ನಡೆಗಳಿಂದ ಅನಿವಾಸಿ ಕನ್ನಡಿಗರು ಆತಂಕದಲ್ಲಿದ್ದಾರೆ. ಜನಪ್ರತಿನಿಧಿಗಳು, ಸಚಿವರು ಭರವಸೆಯ ಮಾತನ್ನು ಆಡುತ್ತಾರೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವಾಗಿದೆ.

ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಅರಬ್ ರಾಷ್ಟ್ರಗಳಲ್ಲಿ ದೊಡ್ಡ ಪ್ರಮಾಣದ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನೂರಾರು ಕನಸುಗಳ ಜೊತೆಗೆ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಾ ಒಂದಿಷ್ಟು ಸಂಪಾದನೆ ಮಾಡಿ ಜೀವನ ಸಾಗಿಸುತ್ತಿದ್ದ ಜನರ ಮೇಲೆ ಕೊರೊನಾ ಎಂಬ ಬಿರುಗಾಳಿ ಅಪ್ಪಳಿಸಿದೆ. ಪರಿಣಾಮ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಿತ್ಯ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಒಂದಿಷ್ಟು ಜನರು ತಮ್ಮ ಕುಟುಂಬಗಳ ಜೊತೆಗೆ ಗಲ್ಫ್ ರಾಷ್ಟ್ರಗಳಲ್ಲಿ ವಾಸವಾಗಿದ್ದಾರೆ. ಇವರೆಲ್ಲಾ ಅಲ್ಲೇ ಉಳಿದುಕೊಳ್ಳಲು ಸಾಧ್ಯವಾಗದೆ ಊರಿಗೆ ಮರಳಲೂ ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಇವರ ಸಂಕಷ್ಟಕ್ಕೆ ಕೆಲವೊಂದು ಅನಿವಾಸಿ ಕನ್ನಡಿಗರ ಸಂಘಟನೆಗಳು ಸ್ಪಂದಿಸುತ್ತಿವೆ. ಊಟ ಉಪಚಾರ ಹಾಗೂ ದಿನಸಿಗಳನ್ನು ನೀಡಿ ಸಹಕಾರ ನೀಡುತ್ತಿದೆ.

ಗಲ್ಫ್‌ ರಾಷ್ಟ್ರಗಳಲ್ಲಿರುವರನ್ನು ತಾಯ್ನಾಡಿಗೆ ಕರೆತರುವ "ವಂದೇ ಭಾರತ್ ಮಿಷನ್" ಕಾರ್ಯ ಚಟುವಟಿಕೆಗಳ ಮೇಲುಸ್ತುವಾರಿಯನ್ನು ಆಯಾ ದೇಶಗಳ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಿದೆ. ಸರಕಾರವು ಕೆಲವು ಮಾನದಂಡ ವಿಧಿಸಿ ಭಾರತಕ್ಕೆ ಬರಲು ಇಚ್ಛಿಸುವವರು ಸರಕಾರದ ವೆಬ್ಸೈಟ್ ಗಳಲ್ಲಿ ತಮ್ಮ ತಮ್ಮ ದಾಖಲೆ ಗಳನ್ನು ಒದಗಿಸಲು ಸೂಚಿಸಿದೆ. ಅದರಂತೆ 4 ಲಕ್ಷಕ್ಕೂ ಅಧಿಕ ಮಂದಿ ಮೊದಲ ತಿಂಗಳುಗಳಲ್ಲಿ ತಮ್ಮ ಮಾಹಿತಿ ದಾಖಲಿಸಿ, ರಾಯಭಾರಿ ಕಚೇರಿಯ ಕರೆಗಾಗಿ ಕಾದು ಕುಳಿತಿದ್ದಾರೆ. ಸುಮಾರು 6500 ಹೆಚ್ಚು ಗರ್ಭಿಣಿಯರು ತಮ್ಮ ದೇಶಕ್ಕೆ ವಾಪಸ್ ತೆರಳಲು ನೋಂದಣಿ ಮಾಡಿದ್ದಾರೆ. ಗರ್ಭಿಣಿಯರು, ಹಿರಿಯ ನಾಗರಿಕರು, ವೈದ್ಯಕೀಯ ಚಿಕಿತ್ಸೆಯ ರೋಗಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಬಳಿಕ ವೀಸಾ ಕಾಲಾವಧಿ ಮುಗಿದವರು,ಕೆಳ ಹಂತದ ಕಾರ್ಮಿಕ ವರ್ಗ ದವರು, ಕೆಲಸ ಕಳೆದು ಕೊಂಡವರು, ರಜಾ ಅವಧಿಯಲ್ಲಿ ಊರಿಗೆ ಬರುವವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಉದ್ಯಮಿಗಳಿಗೆ ಹಾಗೂ ಪ್ರಭಾವಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದರಿಂದಾಗಿ ಸಾಕಷ್ಟು ಜನರು ತಾಯ್ನಾಡಿಗೆ ಬರಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಸದ್ಯ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕಾಗಿದೆ. ಉದ್ಯೋಗ, ವೇತನ ಇಲ್ಲದೆ ಪರದಾಡುತ್ತಿರುವವರನ್ನು ತಾಯ್ನಾಡಿಗೆ ಕರೆತರುವ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಹಾಗೂ ಅವರಿಗೂ ತಾಯ್ನಾಡಿನಲ್ಲಿ ಸೂಕ್ತ ಕ್ವಾರಂಟೈನ್‌ಗೂ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಕ್ವಾರಂಟೈನ್‌ಗೂ ದರ ನಿಗದಿ ಮಾಡಿರುವುದರಿಂದ ಹಲವಾರು ಬಡ ಕಾರ್ಮಿಕರಿಗೆ ತೊಂದರೆ ಆಗಲಿದೆ. ಈ ಕಾರಣಕ್ಕಾಗಿ ಅವರು ತಾಯ್ನಾಡಿಗೆ ಬರಲು ಹಿಂಜರಿಯುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಗಮನಿಸಬೇಕಾಗಿದೆ ಎಂಬ ಮನವಿಯನ್ನು ಅನಿವಾಸಿ ಕನ್ನಡಿಗರು ಮಾಡುತ್ತಿದ್ದಾರೆ.



from India & World News in Kannada | VK Polls https://ift.tt/2XT5S29

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...