ಕೊಚ್ಚಿ: ಪ್ರಸಕ್ತ ಸಾಲಿನ ಜನವರಿಯಲ್ಲಿ ಕೇರಳದ ಕೊಚ್ಚಿಯ ಮುನಾಮಾಬಾಮ ಬಂದರಿನಲ್ಲಿ ಒಂದು ಮಗುವಿನ ಶೂ ಹಾಗೂ ಮಹಿಳೆಯೊಬ್ಬರ ನೀಲಿ ಚಪ್ಪಲಿ ಪತ್ತೆಯಾಗಿದ್ದವು. ಇದಾದ ಕೆಲವೇ ದಿನಗಳಲ್ಲಿ ಬಟ್ಟೆ, ಬ್ಯಾಗ್ ಮತ್ತು ಆಹಾರ ಪೊಟ್ಟಣಗಳು ಸಮುದ್ರದಲ್ಲಿ ತೇಲುತ್ತಿದ್ದವು. ಈ ಸರಕು ಸಾಮಾನುಗಳನ್ನು ಎರ್ನಾಕುಲಂನ ಉತ್ತರ ಕರಾವಳಿಯಲ್ಲಿ ಆಶ್ಚರ್ಯಕರವಾಗಿ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಅಷ್ಟೆ ಅಲ್ಲದೆ, ಪುರುಷರು, ಮಹಿಳೆಯರು ಸೇರಿದಂತೆ ಮಕ್ಕಳನ್ನು ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ದಂಧೆಯಲ್ಲಿ 243 ಜನ ಸಿಲುಕಿದ್ದಾರೆ. ಸುಮಾರು 243 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಜನವರಿಯಿಂದ ನಾಪತ್ತೆಯಾಗಿದ್ದು, ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಉತ್ತಮ ಜೀವನ ಅರಿಸುತ್ತಾ ಅಪರಿಚಿತ ನೆಲಕ್ಕೆ ಬಂದಿದ್ದ ಶ್ರೀಲಂಕಾದ ತಮಿಳರು ಸಹ ಎಂಬ ಹೆಸರಿನ ಈ ಹಡಗಿನಲ್ಲಿದ್ದರು. ಇವರನ್ನು ಹಡಗಿನಲ್ಲಿ ಮೀನಿನಂತೆ ತುಂಬಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಈ ಸಮುದ್ರದಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಸೇರಿದಂತೆ ಕೇರಳ ಪೊಲೀಸ್ ಮತ್ತು ನೌಕಾಪಡೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತಂಕದಲ್ಲಿ ಕುಟುಂಬಸ್ಥರು ಹಡಗಿನಲ್ಲಿ ನಾಪತ್ತೆಯಾದವರ ಕುಟುಂಬಸ್ಥರು ಆತಂಕದಲ್ಲಿದ್ದು, ಇವರೆಲ್ಲ ಅಸಹಾಯಕರಾಗಿದ್ದಾರೆ. ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರು ವಾಪಸ್ ಬರುವ ಸಾಧ್ಯತೆ ತೀರ ವಿರಳ ಎಂದು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ ಪ್ರಯಾಣಿಸಲು ಸಂತ್ರಸ್ತರು ತಲಾ ಮೂರು ಲಕ್ಷ ರೂಪಾಯಿ ಹಣ ನೀಡಿದ್ದರು. ಆದರೆ, ಪ್ರಸಕ್ತ ಸಾಲಿನ ಜನವರಿ 12ರಂದು ಪ್ರಯಾಣ ಬೆಳೆಸಿದ ಅವರೆಲ್ಲ ಎಲ್ಲಿ ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ಸಂಬಂಧ 10 ಜನರನ್ನು ಬಂಧಿಸಿದ್ದೇವೆ. ಮಾನವ ಕಳ್ಳಸಾಗಣೆ ಗ್ಯಾಂಗ್ನ ಪ್ರಮುಖ ಆರೋಪಿಗಳಾದ ಶ್ರೀಕಾಂತನ್ ಮತ್ತು ಸೆಲ್ವನ್ ಎಂಬವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸುತ್ತೇವೆ ಎಂದು ಮುಖ್ಯ ತನಿಖಾಧಿಕಾರಿ ಎಎಸ್ಪಿ ಎಂ ಜೆ ಸೋಜನ್ ತಿಳಿಸಿದ್ದಾರೆ.
from India & World News in Kannada | VK Polls http://bit.ly/2ZJ8XRK