
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ಅಫಘಾನಿಸ್ತಾನ ವಿರುದ್ಧ ನಿಧಾನಗತಿಯ ಆಟವಾಡುವ ಮೂಲಕ ಭಾರತದ ಹಿರಿಯ ಅನುಭವಿ ಬ್ಯಾಟ್ಸ್ಮನ್ ತೀವ್ರ ಟೀಕೆಗೊಳಗಾಗಿದ್ದಾರೆ. ಇದೀಗ ವೆಸ್ಟ್ಇಂಡೀಸ್ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮಹಿ ತಮ್ಮ ರಣತಂತ್ರವನ್ನು ಬದಲಾಯಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಫ್ಘಾನ್ ಬೌಲರ್ಗಳಿಗೆ ಅತಿಯಾದ ಗೌರವ ನೀಡಿದ್ದ ಧೋನಿ ತೀರಾ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದರು. ಪರಿಣಾಮ ಕೊನೆಯ ಹಂತದಲ್ಲಿ ರನ್ ಗತಿ ಏರಿಸುವಲ್ಲಿ ವಿಫಲವಾಗಿದ್ದರು. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಸಹ ಧೋನಿ ಬಗ್ಗೆ ಬೇಸರ ತೋಡಿಕೊಂಡಿದ್ದರು. ದೊಡ್ಡ ಹೊಡೆತವನ್ನು ಹೊಡೆಯುವ ಸಾಮರ್ಥ್ಯ ಇದ್ದರೂ ಕನಿಷ್ಠ ಸಿಂಗಲ್ಸ್, ಡಬಲ್ಸ್ಗಳನ್ನು ಕದಿಯದೆ ಅತಿ ಹೆಚ್ಚು ಡಾಟ್ ಬಾಲ್ಗಳನ್ನು ಆಡಿರುವುದು ಧೋನಿ ಹಿನ್ನಡೆಗೆ ಕಾರಣವಾಗಿತ್ತು. ಇದರಿಂದಾಗಿ ಸಹ ಆಟಗಾರ ಕೇದಾರ್ ಜಾಧವ್ ಮೇಲೂ ಒತ್ತಡವುಂಟಾಗಿತ್ತು. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿರುವ ಧೋನಿ 28 ರನ್ಗಳನ್ನಷ್ಟೇ ಗಳಿಸಿದ್ದರು. ಒಟ್ಟಿನಲ್ಲಿ ವಿಂಡೀಸ್ ವಿರುದ್ಧ ಧೋನಿ ರಣತಂತ್ರವು ಹೆಚ್ಚಿನ ಕುತೂಹಲ ಮೂಡಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YmKqlf