ಒಂಟಿ ಮನೆಗಳಿಗಿರಲಿ ಅಟೆನ್ಷನ್‌: ಕೊರೊನಾ ಆರ್ಥಿಕ ಹೊಡೆತ, ಹೆಚ್ಚಾದ ಕಳ್ಳತನ ಪ್ರಕರಣ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಒಂಟಿ ಮನೆಗಳಿಗೆ ಅಟೆನ್ಷನ್‌ ಅನಿವಾರ್ಯ ಎನ್ನುವಂತಾಗಿದೆ. ಕೊರೊನಾ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಅನೇಕರು ಕಳ್ಳತನದ ಮಾರ್ಗ ಹಿಡಿಯುತ್ತಿದ್ದು, ಒಂಟಿ ಮನೆಗಳು, ನಿರ್ಜನ ಪ್ರದೇಶಗಳಲ್ಲಿರುವ ಪೆಟ್ರೋಲ್‌ ಬಂಕ್‌ಗಳನ್ನು ಟಾರ್ಗೆಟ್‌ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ನಲ್ಲೂ ಕಳ್ಳರ ಕೈಚಳಕ ದೇಶಾದ್ಯಂತ ಲಾಕ್‌ಡೌನ್‌ನಿಂದ ಮನೆಗಳಲ್ಲಿ ಸೀಮಿತವಾಗಿದ್ದರು, ಹಲೆವಡೆ ಊರಿಗೆ ಹೋದವರು ಬರಲಾಗದೆ ಕೆಲ ಮನೆಗಳು ಬೀಗ ಹಾಕಿದ್ದವು. ಮನೆ ಬಾಗಿಲಿನಲ್ಲಿ ತುಂಬಾ ದಿನಗಳಿಂದ ನ್ಯೂಸ್‌ಪೇಪರ್‌, ಹಾಲಿನ ಪ್ಯಾಕೆಟ್‌ ಬಿದ್ದಿದ್ದರೆ ಆ ಮನೆಗಳನ್ನು ಟಾರ್ಗೆಟ್‌ ಮಾಡಿಕೊಂಡ ಕಳ್ಳರು ಕೈಚಳಕ ತೋರಿದ್ದಾರೆ. 2020ರಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 2018ರಲ್ಲಿ 1190 ಕಳ್ಳತನಗಳು ನಡೆದಿದ್ದು, ಇಲಾಖೆಯ ತನಿಖೆಯಿಂದ 7.57ಕೋಟಿ ರಿಕವರಿಯಾಗಿದೆ. 2019ರಲ್ಲಿ 1271 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ತನಿಖೆಯಿಂದ 9.04ಕೋಟಿ ರಿಕವರಿಯಾಗಿದೆ. 2020ರಲ್ಲಿ1090 ಪ್ರಕರಣಗಳು ದಾಖಲಾಗಿದ್ದು, 8.26ಕೋಟಿ ರಿಕವರಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ಇಲಾಖೆ ತಿಳಿಸಿದೆ. ವರ್ಷ- ಕಳ್ಳತನ -ಕೊಲೆ
  • 2018- 1190 -73
  • 2019 -1271- 69
  • 2020- 1090- 71
ಕಳ್ಳರ ಟಾರ್ಗೆಟ್‌
  • ಒಂಟಿ ಮನೆ, ನಿರ್ಜನ ಪ್ರದೇಶದ ಪೆಟ್ರೋಲ್‌ ಬಂಕ್‌
  • ಬಾರ್‌, ರೆಸ್ಟೋರೆಂಟ್‌ಗಳು
  • ತುಂಬಾ ದಿನಗಳಿಂದ ದಿನಪತ್ರಿಕೆ, ಹಾಲಿನ ಪ್ಯಾಕೆಟ್‌ ಬಾಗಿಲ ಬಳಿ ಉಳಿದ ಮನೆಗಳು
ಕಳ್ಳತನಕ್ಕೆಂದು ಕೊಲೆ ಕೊರೊನಾ ಆರ್ಥಿಕ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ಕೆಲ ಯುವಕರು ದರೋಡೆಗೆಂದು ಮುಂದಾಗುತ್ತಿದ್ದು, ಹಣಕ್ಕಾಗಿ ಕೊಲೆ ಮಾಡುವ ಹಂತಕ್ಕು ಇಳಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 3ವರ್ಷದಲ್ಲಿ ಒಟ್ಟು 200ಕ್ಕೂ ಹೆಚ್ಚು ಕೊಲೆಗಳು ನಡೆದಿದ್ದು, ಇವುಗಳಲ್ಲಿ ಕಳ್ಳತನ ಪ್ರಕರಣಗಳ ವೇಳೆ ನಡೆದ ಘಟನೆಗಳು ಸೇರಿಕೊಂಡಿವೆ. ಕಣ್ಗಾವಲು ಯಾವಾಗ? ಜಿಲ್ಲೆಯ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ, ನೆಲಮಂಗಲದ ಸೋಂಪುರ ಮತ್ತು ಹೊಸಕೋಟೆಯ ಕೈಗಾರಿಕಾ ಪ್ರದೇಶಗಳಲ್ಲಿ ನಿರ್ಜನ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆಯಿಲ್ಲದಂತಾಗಿದೆ. ಸಂಜೆಯಾಗುತ್ತಲೆ ಚಿಲ್ಲರೆ ಹಣಕ್ಕಾಗಿ ಚಾಕು ಹಿಡಿದು ನಿಲ್ಲುವ ದರೋಡೆಕೋರರು ಅಮಾಯಕ ಕಾರ್ಮಿಕರಿಂದ ಹಣಕ್ಕಾಗಿ ಪೀಡಿಸುವ ಪ್ರಕರಣಗಳು ಆಗಾಗ ನಡೆಯುತ್ತವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಕೈಗಾರಿಕೆಗಳ ಸಿಎಸ್‌ಆರ್‌ ನಿಧಿಯಡಿ ಸಿಸಿ ಟಿವಿ ಅಳವಡಿಕೆ ಬಗ್ಗೆ ಚರ್ಚೆಗಳು ಮಾತ್ರ ನಡೆದಿದ್ದು, ಇಂದಿಗೂ ಕಾರ್ಯಗತವಾಗಿಲ್ಲ. ಒಂಟಿ ಮನೆಗಳಲ್ಲಿ ವಾಸಿಸುವವರು ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಜತೆಗೆ, ದೂರದ ಊರುಗಳಿಗೆ ಹೋಗುವವರು ತಮ್ಮ ಮನೆಗಳತ್ತ ನಿಗಾ ಇಡುವುದು ಮಾತ್ರವಲ್ಲದೆ, ಅಗತ್ಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಲಕ್ಷ್ಮಿ ಗಣೇಶ್‌, ಎಎಸ್ಪಿ, ಬೆಂಗಳೂರು ಗ್ರಾ.


from India & World News in Kannada | VK Polls https://ift.tt/2YD9MNa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...