ಬೆಂಗಳೂರು: ಕೋಟಿ ಖರ್ಚು ಮಾಡಿ ವಿವಾಹ, ಫಸ್ಟ್‌ ನೈಟ್‌ಗೆ ಕಂಠಪೂರ್ತಿ ಕುಡಿದು ಬಂದ ಪತಿರಾಯ; ಮುಂದೇನಾಯ್ತು?

ಬೆಂಗಳೂರು: ಐಷಾರಾಮಿ ಬೆಂಜ್‌ ಕಾರು ಉಡುಗೊರೆ, 5 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಕೊಟ್ಟು ಭರ್ಜರಿಯಾಗಿ ನೆರವೇರಿಸಿಕೊಟ್ಟಿದ್ದ ವಿವಾಹವೊಂದು ಮೊದಲ ರಾತ್ರಿಯೇ ಮುರಿದು ಬಿದ್ದಿದೆ. ಫಸ್ಟ್‌ ನೈಟ್‌ನಲ್ಲಿ ಕೊಠಡಿಗೆ ಅತಿಯಾಗಿ ಮದ್ಯಪಾನ ಸೇವಿಸಿ ಗಂಡು ಪ್ರವೇಶಿಸಿದ್ದು, ಪತ್ನಿ ಆಕ್ಷೇಪಿಸಿದ್ದಾಳೆ. ಇದೇ ಘಟನೆ ಅತಿರೇಕಕ್ಕೆ ಹೋಗಿ ಬೇಸತ್ತ ಮಹಿಳೆ ಬೆಂಗಳೂರಿನ ಎಚ್‌ಎಎಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಭರತ್‌ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಕೋರ್ಟ್‌ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭರತ್‌ರೆಡ್ಡಿ ಮತ್ತು ಸಂತ್ರಸ್ತ ಮಹಿಳೆಯ ಕುಟುಂಬಗಳು ಬ್ರೋಕರ್‌ ಮೂಲಕ ಸಂಬಂಧ ಗೊತ್ತುಮಾಡಿಕೊಂಡು ಅ. 29ರಂದು ವಿವಾಹ ನೆರವೇರಿಸಿದ್ದವು. ಅ.30ರಂದು ಶಾಸ್ತ್ರ ಆಯೋಜಿಸಲಾಗಿತ್ತು. ಅಂದು ಮದ್ಯಪಾನ ಮಾಡಿ ಬಂದಿದ್ದರಿಂದ ಮಹಿಳೆ ಆಕ್ಷೇಪಿಸಿ ದೂರ ಇಟ್ಟಿದ್ದಾಳೆ. ಮರುದಿನವೂ ಇದೇ ಪರಿಸ್ಥಿತಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ 'ಸೊಸೆಗೆ ದೆವ್ವ ಬಂದಿದೆ' ಎಂದು ಆರೋಪಿಸಿದ ಭರತ್‌ರೆಡ್ಡಿ ಪಾಲಕರು, ಮಾಟ ಮಂತ್ರ ಮಾಡಿಸಿ ಕಿರುಕುಳ ನೀಡಿದ್ದಾರೆ. ಗಂಡನ ವರ್ತನೆಯನ್ನು ವಿರೋಧಿಸಿದ್ದರಿಂದ ಅತ್ತೆ ಕೋಮಲಮ್ಮ, ಮಾವ ಲೋಕೇಶರೆಡ್ಡಿ ಹಲ್ಲೆ ಮಾಡಿದ್ದಾರೆಂದು ಮಹಿಳೆ ದೂರಿನಲ್ಲಿಆರೋಪಿಸಿದ್ದಾರೆ. ಬೂದಿ ಕಲೆಸಿ ಅನ್ನ ತಿನ್ನಿಸಿದರು! ನನಗೆ ಇಷ್ಟ ಇರಲಿಲ್ಲ. ಆದರೆ, ತಾಯಿ ತೀರಿಕೊಂಡಿದ್ದ ಕಾರಣ ಈ ವರ್ಷವೇ ಮದುವೆ ಮಾಡಿಕೊಳ್ಳಬೇಕೆಂದು ದೊಡ್ಡವರು ನಿರ್ಧರಿಸಿದ್ದರು. ಬೆಂಜ್‌ ಕಾರು, 5 ಕೆ.ಜಿ. ಚಿನ್ನ ಕೊಟ್ಟು ಐಷಾರಾಮಿಯಾಗಿ ಮದುವೆ ಮಾಡಿಕೊಟ್ಟರು. ಮೊದಲ ದಿನದಿಂದಲೇ ಡ್ರಿಂಕ್ಸ್‌ ಮಾಡುತ್ತಿದ್ದ. ವಿಚಿತ್ರವಾಗಿ ವರ್ತನೆ ತೋರುತ್ತಿದ್ದ. ಹಲ್ಲೆ ಮಾಡಿ, ಎಳೆದಾಡುತ್ತಿದ್ದ. ಯಾವಾಗ ಮನೆಗೆ ಬರುತ್ತಾನೆಂದು ಎಂದು ಹೇಳುತ್ತಿರಲಿಲ್ಲ. ಕೇಳಿದರೆ, ನನಗೆ ಈಗಾಗಲೇ ಮದುವೆಯಾಗಿ ಮಗು ಇದೆ. ನೀನು ಮನೆಯಲ್ಲಿ ಬಿದ್ದಿರು ಎಂದು ಕಿರುಕುಳ ನೀಡುತ್ತಿದ್ದ. ಪತಿ ಮತ್ತು ಅತ್ತೆ-ಮಾವನಿಗೆ ಪ್ರತಿರೋಧ ತೋರಿದಾಗ ಮಾಟ ಮಂತ್ರ ಮಾಡಿಸಿ ಅದೇ ನೆಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ; ನನ್ನನ್ನು ಸಾಯಿಸಲು ಯತ್ನಿಸಿದ್ದಾರೆ. ನನಗೆ ದೆವ್ವ ಬಂದಿದೆ ಎಂದು ಬೂದಿ ಹಚ್ಚಿ, ಬೂದಿ ಕಲೆಸಿ ಅನ್ನ ನೀಡುತ್ತಿದ್ದರು. ಈ ವಿಚಾರ ತಿಳಿದು ಮನೆಗೆ ಸಹೋದರಿ ಬಂದು ನನ್ನನ್ನು ತವರಿಗೆ ಕರೆದೊಯ್ದರು, ಎಂದು ಕಿರುಕುಳವನ್ನು ದೂರಿನಲ್ಲಿ ನೊಂದ ಮಹಿಳೆ ಬಿಚ್ಚಿಟ್ಟಿದ್ದಾರೆ. ವಿವಾಹಕ್ಕೆ ಮೊದಲು ಭರತ್‌ರೆಡ್ಡಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದ್ದಾನೆ ಎಂದರು. ಆದರೆ, ಆತ ಎಸ್‌ಎಸ್‌ಎಲ್‌ಸಿ ಕೂಡ ಪಾಸಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಸೈಕೋ ಸಿನಿಮಾ ನೋಡುವಂತೆ ನನಗೆ ಕಿರುಕುಳ ನೀಡುತ್ತಿದ್ದ. ನನಗೆ ಬೇಕು ಎನ್ನುವುದನ್ನು ಬೇಡ ಎನ್ನುತ್ತಿದ್ದ. ವಿಚಿತ್ರವಾಗಿ ವರ್ತಿಸುತ್ತಿದ್ದ. ನಮ್ಮ ಆಸ್ತಿಗಾಗಿಯೇ ಮದುವೆ ಮಾಡಿಕೊಂಡಿದ್ದಾರೆ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3qC6h6G

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...