'ಮತ್ತೊಮ್ಮೆ ಅದೇ ತಪ್ಪುಗಳನ್ನು ಎಸಗಿದ್ದೇವೆ' : ಸೋಲಿನ ಬಳಿಕ ಎಂಎಸ್‌ ಧೋನಿಯ ಬೇಸರದ ಮಾತುಗಳಿವು!

ಹೊಸದಿಲ್ಲಿ: ಎಂಎಸ್‌ ಧೋನಿಯ ಕಠಿಣ ಹೋರಾಟದ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್, 7 ರನ್‌ಗಳಿಂದ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ಶುಕ್ರವಾರ ರಾತ್ರಿ ಸೋಲು ಅನುಭವಿಸಿತು. ಸತತ ಮೂರು ಪಂದ್ಯಗಳಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಂಟ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 13ನೇ ಆವೃತ್ತಿಯ ಐಪಿಎಲ್‌ 14ನೇ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಸಿಎಸ್‌ಕೆ ನಾಯಕ , ಈ ಹಿಂದೆ ಮಾಡಿದ್ದ ತಪ್ಪುಗಳು ಮರುಕಳಿಸುತ್ತಿವೆ, ಹಾಗಾಗಿ ಇವುಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಎಂದು ಹೇಳಿದ್ದಾರೆ. ಮತ್ತೊಂದೆಡೆ ಸತತ ಎರಡನೇ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. "ನಾವು ಸಾಕಷ್ಟು ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಅಗತ್ಯವಿದೆ. ಇದು ವೃತ್ತಿಪರ ಕ್ರಿಕೆಟ್‌, ಆದರೆ ಕ್ಯಾಚ್‌ಗಳನ್ನು ಬಿಡುವುದು ಹಾಗೂ ನೋ ಬಾಲ್‌ಗಳನ್ನು ಹಾಕುವುದು ಸೇರಿದಂತೆ ಅದೇ ತಪ್ಪುಗಳನ್ನು ನಾವು ಮಾಡುತ್ತೀದ್ದೇವೆ. 16ನೇ ಓವರ್‌ ಆದ ಬಳಿಕ ಎರಡು ಕೆಟ್ಟ ಓವರ್‌ಗಳನ್ನು ನಾವು ಬೌಲಿಂಗ್‌ ಮಾಡಿದೆವು. ಒಟ್ಟಾರೆಯಾಗಿ ತಂಡ ಸ್ವಲ್ಪ ಉತ್ತಮವಾಗಿದೆ," ಎಂದು ಎಂಎಸ್‌ ಧೋನಿ ಹೇಳಿದರು. ದುಬೈ ಇಂಟರ್‌ನ್ಯಾಷನಲ್ ವಿಕೆಟ್‌ ಬಗ್ಗೆ ಟೀಕೆ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ನಾಯಕ , ಇದೇ ವೇಳೆ ತಮ್ಮ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದರು. "ಕಳೆದ ಪಂದ್ಯವಾಡಿದ ವಿಕೆಟ್‌ಗೆ ಹೋಲಿಕೆ ಮಾಡಿದರೆ, ಇಂದು(ಶುಕ್ರವಾರ) ಆಡಿದ ವಿಕೆಟ್‌ ಸ್ವಲ್ಪ ಕೆಟ್ಟದಾಗಿತ್ತು. ಬ್ಯಾಟಿಂಗ್‌ ಮಾಡುವಾಗ ಸರಿಯಾಗಿ ಫುಲ್‌ ಲೆನ್ತ್‌ ಸಿಗುತ್ತಿರಲಿಲ್ಲ. ಆದರೆ, ನಮ್ಮ ಹುಡುಗರು ಕಮ್‌ಬ್ಯಾಕ್‌ ಮಾಡಿದ್ದು ನಿಜಕ್ಕೂ ಶ್ಲಾಘನೀಯ," ಎಂದು ಡೇವಿಡ್‌ ವಾರ್ನರ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಸನ್‌ ರೈಸರ್ಸ್ ಹೈದರಾಬಾದ್‌ ನಿಗದಿತಿ 20 ಓವರ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು164 ರನ್‌ಗಳನ್ನು ಗಳಿಸಿತು. ಯುವ ಬ್ಯಾಟ್ಸ್‌ಮನ್‌ ಪ್ರಿಯಮ್‌ ಗರ್ಗ್‌ ಐಪಿಎಲ್‌ ಚೊಚ್ಚಲ ಅರ್ಧಶತಕ ಸಿಡಿಸಿದರು ಹಾಗೂ ಆಲ್‌ರೌಂಡರ್‌ ಅಭಿಷೇಕ್‌ ಶರ್ಮಾ ಕೂಡ 31 ರನ್‌ ಗಳಿಸಿ, ಗರ್ಗ್‌ಗೆ ಸಾಥ್‌ ನೀಡಿದ್ದರು. ಕೇನ್‌ ವಿಲಿಯಮ್ಸನ್‌ ಹಾಗೂ ಮನೀಶ್‌ ಪಾಂಡೆ ಕೆಟ್ಟದಾಗಿ ವಿಕೆಟ್ ಕೊಟ್ಟ ಬಳಿಕ ಕ್ರೀಸ್‌ನಲ್ಲಿ ಜತೆಯಾದ ಪ್ರಿಯಮ್‌ ಗರ್ಗ್‌ ಹಾಗೂ ಅಭಿಷೇಕ್‌ ಶರ್ಮಾ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಜೋಡಿ 77 ರನ್‌ಗಳ ಜತೆಯಾಟವಾಡಿತು. ಗುರಿ ಬೆನ್ನತ್ತಿದ್ದ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಶೇನ್‌ ವ್ಯಾಟ್ಸನ್‌ ವಿಕೆಟ್ ಉರುಳಿತು. ಬಳಿಕ ನಿಯಮಿತವಾಗಿ ಸಿಎಸ್‌ಕೆ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಆದರೆ, ಐದನೇ ವಿಕೆಟ್‌ಗೆ ಜತೆಯಾದ ರವೀಂದ್ರ ಜಡೇಜಾ (50) ಹಾಗೂ ಎಂಎಸ್‌ ಧೋನಿ(47*) ಜೋಡಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿತು. ಆದರೂ ಅಂತಿಮವಾಗಿ ಸಿಎಸ್‌ಕೆ ಕೂದಲೆಳೆಯ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jthhPD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...