ಲಂಡನ್: ಆಯೋಜಿಸಿರುವ ತಂಡ ಈ ಬಾರಿ ತುಂಬಾ ಸಂಕಷ್ಟಕ್ಕೀಡಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧ ಆಘಾತಕಾರಿಯಾಗಿ ಸೋತಿರುವ ಇಂಗ್ಲೆಂಡ್ ತಂಡ ಪ್ರಸ್ತುತ ಕಠಿಣ ಕಾಲಘಟ್ಟದಲ್ಲಿದೆ. ವಿಶ್ವಕಪ್ನ ಆರಂಭದಲ್ಲಿ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದ ತಂಡ, ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಮೂರು ಬಲಿಷ್ಠ ತಂಡಗಳನ್ನು ಮಣಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಜೇಸನ್ ರಾಯ್ ಇಲ್ಲದ ಇಂಗ್ಲೆಂಡ್ ಪಡೆಯ ರನ್ ಗತಿ ನಿಧಾನಗೊಂಡಿದೆ. ಇದು ಜೋಸ್ ಬಟ್ಲರ್ಗೆ ಹೊರೆಯಾಗುತ್ತಿದ್ದು, ಬಿಡುಬೀಸಿನ ಆಟಕ್ಕೆ ಅವಕಾಶ ಒದಗಿಸುತ್ತಿಲ್ಲ. ಇಂಗ್ಲೆಂಡ್ ತಂಡ ಎರಡೂ ಪಂದ್ಯಗಳನ್ನು ಸೋತಿರುವುದು ಗುರಿ ಬೆನ್ನಟ್ಟುವಾಗ ಎನ್ನುವುದು ತಂಡದ ಪಾಲಿಗೆ ಆತಂಕದ ಸಂಗತಿ. ಆಸ್ಪ್ರೇಲಿಯಾ ಪರ ಫಿಂಚ್, ವಾರ್ನರ್ ಪಾರಮ್ಯ ಮೆರೆಯುತ್ತಿದ್ದಾರೆ. ಬೌಲಿಂಗ್ನಲ್ಲಿ ಸ್ಟಾರ್ಕ್ ಮತ್ತು ಕಮಿನ್ಸ್ ಪ್ರಭಾವ ಬೀರುತ್ತಿದ್ದಾರೆ. ಉಳಿದವರೂ ವಿಕೆಟ್ ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಗವಾಸ್ಕರ್ ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2WY8byp