ಮ್ಯಾಂಚೆಸ್ಟರ್‌ನಲ್ಲಿ ನವದೀಪ್‌ ಸೈನಿ

ಮ್ಯಾಂಚೆಸ್ಟರ್‌: ಟೀಮ್‌ ಇಂಡಿಯಾದ ಮೀಸಲು ಬೌಲರ್‌ ನವದೀಪ್‌ ಸೈನಿ ಸೋಮವಾರ ಇಲ್ಲಿಗೆ ಆಗಮಿಸಿದ್ದು ಭಾರತೀಯ ಬಳಗ ಸೇರಿಕೊಂಡಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದ್ದ ವೇಗಿ ಸೈನಿ, ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಅಭ್ಯಾಸಕ್ಕಾಗಿ ನೆಟ್‌ನಲ್ಲಿ ಬೌಲಿಂಗ್‌ ಮಾಡಲಿದ್ದಾರೆ. ದೀಪಕ್‌ ಚಹರ್‌ ಮತ್ತು ಆವೇಶ್‌ ಖಾನ್‌ ಆರಂಭದಲ್ಲೇ ಇಂಗ್ಲೆಂಡ್‌ಗೆ ಬಂದಿದ್ದರು. ಆದರೆ, ಮೊದಲ ವಾರದಲ್ಲೇ ಭಾರತಕ್ಕೆ ವಾಪಸಾಗಿದ್ದರು. ಹೀಗಾಗಿ ಭಾರತೀಯ ಬಳಗದಲ್ಲಿ ನೆಟ್‌ ಬೌಲರ್‌ಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೈನಿಗೆ ಬುಲಾವ್‌ ನೀಡಲಾಗಿತ್ತು. ಪ್ರಸ್ತುತ ಮಂಡಿರಜ್ಜು ನೋವಿನಲ್ಲಿ ಬಳಲುತ್ತಿರುವ ಭುವನೇಶ್ವರ್‌ ಕುಮಾರ್‌ ಗುಣಮುಖರಾಗದಿದ್ದರೆ ಸೈನಿ 11ರ ಬಳಗದಲ್ಲಿ ಆಡುವ ಸಾಧ್ಯತೆಯೂ ಇದೆ. ಆದರೆ, ಅದನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2WZcOYX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...