ಮುಂಬೈ ವಿರುದ್ಧದ ಸೋಲಿಗೆ ಬೌಲರ್‌ಗಳನ್ನು ದೂರಿದ ಎಂಎಸ್‌ ಧೋನಿ!

ಹೊಸದಿಲ್ಲಿ: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ ನಾಯಕ ಮಹೇಂದ್ರ ಸಿಂಗ್‌ ಧೋನಿ, ತಮ್ಮ ತಂಡದ ಬೌಲರ್‌ಗಳು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ನೀಡಿದ್ದ 219 ರನ್ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಓವರ್‌ ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿತು. ಮುಂಬೈ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಕೇವಲ 34 ಎಸೆತಗಳಲ್ಲಿ 87 ರನ್ ಚೆಚ್ಚುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. ಇನ್ನು ಪಂದ್ಯ ಸೋತರೂ ಚೆನ್ನೈ ಸೂಪರ್‌ ಕಿಂಗ್ಸ್ 10 ಅಂಕಗಳೊಂದಿಗೆ ಹಾಗೂ ಅತ್ಯುತ್ತಮ ರನ್‌ರೇಟ್‌ನೊಂದಿಗೆ ಅಗ್ರ ಸ್ಥಾನದಲ್ಲಿಯೇ ಉಳಿದಿದೆ. ಪಂದ್ಯದ ಸೋಲಿನ ಬಳಿಕ ಸ್ಟಾರ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ , "ಇದು ಅದ್ಭುತವಾದ ವಿಕೆಟ್‌. ಪಂದ್ಯವನ್ನು ಮುಗಿಸಿದ್ದು ವಿಭಿನ್ನವಾಗಿತ್ತು. ಬೌಲರ್‌ಗಳಿಗೆ ಇಲ್ಲಿನ ಪಿಚ್‌ ಅಷ್ಟೊಂದು ಕಠಿಣವಾಗಿ ಇರಲಿಲ್ಲ, ಆದರೆ ನಿರ್ಣಾಯಕ ಸಮಯದಲ್ಲಿ ನಾವು ಕೆಲ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದೇವೆ. ಬೌಲರ್‌ಗಳು ಇನ್ನಷ್ಟು ಉತ್ತಮವಾಗಿ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಹಾಗೂ ಇದರಿಂದ ಕಲಿಯಬೇಕು," ಎಂದರು. "ಯಾವ ಹಂತದಲ್ಲಿ ಪಂದ್ಯ ಟರ್ನ್‌ ಆಯಿತು ಎಂಬುದನ್ನು ನೀವು ನೋಡಬೇಕು. ಇಷ್ಟು ದೊಡ್ಡ ಮೊತ್ತಕ್ಕೆ ಎದುರಾಳಿ ತಂಡವನ್ನು ನಿಯಂತ್ರಿಸಬೇಕಾದರೆ, ಬೌಲರ್‌ಗಳು ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಏಕೆಂದರೆ, ಈ ವಿಕೆಟ್‌ನಲ್ಲಿ ಸುಲಭವಾಗಿ ಬೌಂಡರಿ ಹಾಗೂ ಸಿಕ್ಸರ್‌ ಸಿಡಿಸಬಹುದು," ಎಂದು ಹೇಳಿದರು. "ಇಂತಹ ಟೂರ್ನಿಯಲ್ಲಿ, ನೀವು ಅಂತಿಮ ಹಂತಕ್ಕೆ ಬಂದು ಸೋಲಬಹುದು ಅಥವಾ ಗೆಲ್ಲಬಹುದು. ಆದರೆ, ನೀವು ಒತ್ತಡಕ್ಕೆ ಒಳಗಾಗಿದ್ದಾಗ ನೀವು ತುಂಬಾ ಕಲಿಯಬಹುದು. ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾವು ಎಲ್ಲಿದ್ದೆವೆ ಎಂಬುದು ಮುಖ್ಯವಲ್ಲ, ಆದರೆ ಇದೇ ಸಮಯದಲ್ಲಿ ನಾವು ಮತ್ತೊಂದು ಪಂದ್ಯವನ್ನು ತೆಗೆದುಕೊಳ್ಳುತ್ತೇವೆ. ಉತ್ತಮ ಅಂಕಗಳೊಂದಿಗೆ ನಾವು ಮುಂದೆ ನಡೆಯುತ್ತೇವೆ," ಎಂದು ಎಂಎಸ್‌ ಧೋನಿ ಹೇಳಿದರು. ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್ ಪರ ಮೊಯೀನ್‌ ಅಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಮಿಂಚಿನ ಬ್ಯಾಟಿಂಗ್‌ ಮಾಡಿ ಕ್ರಮವಾಗಿ 58 ಹಾಗೂ 50 ರನ್‌ ಗಳಿಸಿ ತಂಡಕ್ಕೆ ಅದ್ಭುತ ಆರಂಭವನ್ನು ದೊರಕಿಸಿಕೊಟ್ಟರು. ನಂತರ ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು 266.67 ಸ್ಟ್ರೈಕ್‌ ರೆಟ್‌ನೊಂದಿಗೆ ಬ್ಯಾಟಿಂಗ್‌ ಮಾಡಿ ಕೇವಲ 27 ಎಸೆತಗಳಲ್ಲಿ 72 ರನ್‌ ಚೆಚ್ಚಿದರು. ಆ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 218 ರನ್‌ ಕಲೆ ಹಾಕಿತು. ಬೌಲಿಂಗ್‌ನಲ್ಲಿಯೂ ಮಿಂಚಿದ ಕೈರೊನ್‌ ಪೊಲಾರ್ಡ್ ಎರಡು ವಿಕೆಟ್‌ಗಳನ್ನು ಪಡದುಕೊಂಡರು. ಚೆನ್ನೈ ಸೂಪರ್‌ ಕಿಂಗ್ಸ್ ಮೇ.5 ರಂದು ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೆಣಸಲಿದೆ. ಇನ್ನು ಮುಂಂಬೈ ಇಂಡಿಯನ್ಸ್ ಮೇ.4 ರಂದು ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಇದೇ ಅಂಗಳದಲ್ಲಿ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ea7z4B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...