from India & World News in Kannada | VK Polls https://ift.tt/35UUTsL
ಕೆವಾಡಿಯಾ: ದೇಶದ ಮೊಟ್ಟ ಮೊದಲ ಸೀಪ್ಲೇನ್ ಅಥವಾ ಸಮುದ್ರದ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ದೇಶದ ಈ ವಿನೂತನ ಯೋಜನೆ ಉದ್ಘಾಟಿಸಿ ಚಾಲನೆ ಕೊಟ್ಟರು. ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು. ಇನ್ನು ಗುಜರಾತ್ನ ಕೆವಾಡಿಯಾ ಕಾಲೋನಿಯಲ್ಲಿರುವ ಏಕತೆ ಪ್ರತಿಮೆ ಸ್ಥಳದಿಂದ ಅಹಮದಾಬಾದ್ನ ಸಬರಮತಿ ನಡುವೆ ಈ ಸೀಪ್ಲೇನ್ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಅರ್ಧ ಗಂಟೆಯಲ್ಲಿ ಪ್ರಯಾಣವನ್ನು ಪೂರ್ತಿಗೊಳಿಸಲಿದೆ. ಈ ಮೂಲಕ ಸೀಪ್ಲೇನ್ ಸೇವೆ ದೇಶದ ಪ್ರಾದೇಶಿಕ ಸಂಪರ್ಕದಲ್ಲಿ ಕ್ರಾಂತಿಯುಂಟುಮಾಡಲಿದೆ. ಜೊತೆಗೆ ಜನರ ಪ್ರಯಾಣ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೂ ಕಾರಣವಾಗಲಿದೆ. ಅಲ್ಲದೇ ಅಭಿವೃದ್ದಿ ಹಾಗೂ ದೇಶದ ಬದಲಾವಣೆಗೂ ಸಾಕ್ಷಿಯಾಗಲಿದೆ.
ಕೆವಾಡಿಯಾ:
ದೇಶದ ಮೊಟ್ಟ ಮೊದಲ ಸೀಪ್ಲೇನ್ ಅಥವಾ ಸಮುದ್ರದ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ದೇಶದ ಈ ವಿನೂತನ ಯೋಜನೆ ಉದ್ಘಾಟಿಸಿ ಚಾಲನೆ ಕೊಟ್ಟರು. ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು. ಇನ್ನು ಗುಜರಾತ್ನ ಕೆವಾಡಿಯಾ ಕಾಲೋನಿಯಲ್ಲಿರುವ ಏಕತೆ ಪ್ರತಿಮೆ ಸ್ಥಳದಿಂದ ಅಹಮದಾಬಾದ್ನ ಸಬರಮತಿ ನಡುವೆ ಈ ಸೀಪ್ಲೇನ್ ಸಂಚರಿಸಲಿದೆ. ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯ (205 ಕಿಮೀ) ತೆಗೆದುಕೊಳ್ಳುತ್ತದೆ. ಆದರೆ ಸೀಪ್ಲೇನ್ ಸುಮಾರು ಅರ್ಧ ಗಂಟೆಯಲ್ಲಿ ಪ್ರಯಾಣವನ್ನು ಪೂರ್ತಿಗೊಳಿಸಲಿದೆ. ಈ ಮೂಲಕ ಸೀಪ್ಲೇನ್ ಸೇವೆ ದೇಶದ ಪ್ರಾದೇಶಿಕ ಸಂಪರ್ಕದಲ್ಲಿ ಕ್ರಾಂತಿಯುಂಟುಮಾಡಲಿದೆ. ಜೊತೆಗೆ ಜನರ ಪ್ರಯಾಣ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೂ ಕಾರಣವಾಗಲಿದೆ. ಅಲ್ಲದೇ ಅಭಿವೃದ್ದಿ ಹಾಗೂ ದೇಶದ ಬದಲಾವಣೆಗೂ ಸಾಕ್ಷಿಯಾಗಲಿದೆ.

ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್ಗೆ ಸೀಪ್ಲೇನ್ ಎಂದು ಕರೆಯುತ್ತಾರೆ. ಹೌದು, ಸೀಪ್ಲೇನ್ಗಳಿಗೆ ಹಣ ಖರ್ಚು ಮಾಡಿ ಏರ್ಪೋರ್ಟ್ಗಳು, ರನ್ವೇಗಳನ್ನು ನಿರ್ಮಿಸುವ ಅಗತ್ಯವಿಲ್ಲ. ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಿನ್ನೀರು, ಡ್ಯಾಂ, ಸರೋವರದ ನೀರಿನಲ್ಲಿ ಸೀಪ್ಲೇನ್ ಸುಲಭವಾಗಿ ಲ್ಯಾಂಡಿಗ್ ಹಾಗೂ ಟೇಕಾಫ್ ಮಾಡುತ್ತದೆ. ಆದರೂ ಸಣ್ಣದೊಂಂದು ಲ್ಯಾಂಡಿಂಗ್ ವ್ಯವಸ್ಥೆಗಳನ್ನು ನೀರಿನಲ್ಲಿ ತಯಾರಿಸಲಾಗುತ್ತದೆ. ಇನ್ನು ಸೀಪ್ಲೇನ್ಗಳು ಲಘು ವಿಮಾನಗಳು ರೂಪದಲ್ಲಿ ಇರುತ್ತದೆ. ಇದರ ಆಕೃತಿ ಭೌಗೋಳಿಕತೆ / ಪ್ರದೇಶಗಳಿಗೆ ಹೊಂದುವ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಹೀಗಾಗಿ ನೀರಿನಲ್ಲಾಗುವ ಯಾವುದೇ ಕಠಿಣ ಪರಿಸ್ಥಿತಿಯನ್ನು ಇದು ಎದುರಿಸುವವ ಶಕ್ತಿಯನ್ನು ಹೊಂದಿರುತ್ತದೆ. 19 ಆಸನಗಳನ್ನು ಹೊಂದಿರುವ ಈ ವಿಮಾನದಲ್ಲಿ 12 ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣ ಮಾಡಬಹುದಾಗಿದೆ. ಸದ್ಯ ಗುಜರಾತ್ನಲ್ಲಿ ಕೆನಡಾದ ಟ್ವಿನ್ ಒಟರ್ 300 ಎಂಬ ವಿಮಾನವನ್ನು ಬಳಸಲಾಗುತ್ತಿದ್ದು, ಅತ್ಯಂತ ಸುರಕ್ಷಿತ ತಿಹಾಸವನ್ನು ಈ ಟ್ವಿನ್ ಒಟರ್ 300 ವಿಮಾನಗಳು ಹೊಂದಿವೆ.
ಉತ್ತಮ ಆಡಳಿತದ ರಾಜ್ಯಗಳ ಪೈಕಿ ಕೇರಳ, ಗೋವಾ ಫಸ್ಟ್; ಉತ್ತರ ಪ್ರದೇಶ, ಬಿಹಾರ ಲಾಸ್ಟ್..!

ಟ್ವಿನ್ ಒಟ್ಟರ್ -300 ಬಹು ಉಪಯೋಗಿ ಹಾಗೂ ಅತ್ಯಂತ ಸುರಕ್ಷಿತ ವಿಮಾನಗಳ ಪೈಕಿ ಒಂದಾಗಿದೆ. ಇದರ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳು, ಪೇಲೋಡ್ ಸಾಮರ್ಥ್ಯ ಮತ್ತು ಅತ್ಯುತ್ತಮ ಬಾಹ್ಯ ಗೋಚರತೆಗೆ ಹೆಸರುವಾಸಿಯಾಗಿ ಇದ್ದರು ಕೂಡ ಟಿಕೆಟ್ ದರ ಸಾಮಾನ್ಯ ಜನರಿಗೆ ಪ್ರಯಾಣ ಮಾಡುವಂತಹ ರೀತಿಯಲ್ಲಿ ನಿಗದಿ ಮಾಡಲಾಗಿದೆ. ಮೂಲಗಳ ಪ್ರಕಾರ ಒಂದು ಬಾರಿ ತೆರಳಲು ಕನಿಷ್ಠ 1,500 ರೂ. ನೀಡಬೇಕಿದೆ ಎಂದು ತಿಳಿದುಬಂದಿದೆ. ಉಡಾನ್ ಯೋಜನೆಯಡಿಯಲ್ಲಿ ಸೀಪ್ಲೇನ್ ಯೋಜನೆ ಜಾರಿಯಾಗಿದ್ದರಿಂದ ಕಡಿಮೆ ದರ ಫಿಕ್ಸ್ ಮಾಡಲಾಗಿದೆ. ಇನ್ನು ದಿನಕ್ಕೆ ಎರಡು ಸೀಪ್ಲೇನ್ ಕಾರ್ಯನಿರ್ವಹಿಸಲಿದೆ. ಪ್ರತಿದಿನ ವಿಮಾನ ಅಹಮದಾಬಾದ್ನಿಂದ ಕೆವಾಡಿಯಾಗೆ 4 ಬಾರಿ, ಮತ್ತು ಕೆವಾಡಿಯಾದಿಂದ ಅಹಮದಾಬಾದ್ಗೆ 4 ಬಾರಿ ಸಂಚಾರ ನಡೆಸಲಿದೆ. ಮುಂಜಾನೆ 10.15 ಈ ವಿಮಾನಗಳು ಹಾರಾಟ ಆರಂಭಿಸುತ್ತದೆ. ಇನ್ನು ಮುಂದೆ ಅಹಮದಾಬಾದ್ ಹಾಗೂ ಕೆವಾಡಿಯಾ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಡೌಟೇ ಇಲ್ಲ.
ಪುಲ್ವಾಮ ದಾಳಿ ಕೆಲವರಿಗೆ ನೋವು ತಂದಿರಲಿಲ್ಲ ಎನ್ನುವುದನ್ನು ದೇಶ ಮರೆಯುವುದಿಲ್ಲ: ವಿಪಕ್ಷಗಳ ವಿರುದ್ಧ ಮೋದಿ ಕಿಡಿ

ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಇದನ್ನು ಆರಂಭಿಸಲಾಗಿದ್ದು, ಗುಜರಾತ್ ಸರ್ಕಾರದೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾದ ಕನಸಿನ ಯೋಜನೆ ಕೂಡ ಹೌದು. ಇನ್ನು ಸಬರಮತಿ ಬಳಿಕ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ದ್ವೀಪಗಳಲ್ಲಿ ಇದರ ಅಗತ್ಯತೆ ಬಹಳಷ್ಟಿದೆ. ದೇಶದಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಗುಜರಾತ್ನ ಸೀಪ್ಲೇನ್ ನ ಸೇವೆಯನ್ನು ನೀಡಲಿದೆ. ಕನಸಿನ ಯೋಜನೆ ಆಗಿದ್ದರಿಂದ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಸೀಪ್ಲೇನ್ನಲ್ಲಿ ಒಂದು ರೌಂಡ್ ಹೊಡೆದು ಬಂದು ಮಾಧ್ಯಮಗಳತ್ತ ಕೈ ಬೀಸಿದರು.
ಕರ್ನಾಟಕ ಜನಸಾಮಾನ್ಯರ ಸಾರಿಗೆ ಅಂತಾನೇ ಫೇಮಸ್ ಆಗಿರೋ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟದ ಚಕ್ರವ್ಯೂಹದಲ್ಲಿ ಸಿಲುಕಿವೆ. ಕಳೆದ ಒಂಭತ್ತು ತಿಂಗಳಿಂದ ಪ್ರಯಾಣಿಕರ ಕೊರತೆಯಿಂದ ಲಾಭದ ಹಾದಿ ಹಿಡಿಯದ ಸಾರಿಗೆ ಸಂಸ್ಥೆ ಟಯರ್ ಪಂಚರ್ ಆಗೋ ಸ್ಥಿತಿಗೆ ತಿಲುಪಿದೆ. ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ಕೆಎಸ್ಆರ್ಟಿಸಿಗೆ 500 ಕೋಟಿ ರೂ. ನಷ್ಟವಾಗಿದೆ. ಈ ಹಿಂದೆ ಕೆಎಸ್ಆರ್ಟಿಸಿಯು ಪ್ರತಿದಿನ ಓಡಿಸುತ್ತಿದ್ದ 8250 ಬಸ್ಗಳಲ್ಲಿ30 ಲಕ್ಷ ಮಂದಿ ಪ್ರಯಾಣಿಸಿ 9 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿತ್ತು. ಸದ್ಯ 5200 ಬಸ್ಗಳನ್ನು ಓಡಿಸಲಾಗುತ್ತಿದ್ದು, 12-13 ಲಕ್ಷ ಜನರಷ್ಟೇ ಓಡಾಡುತ್ತಿದ್ದಾರೆ. ಹೀಗಾಗಿ, ಕೇವಲ 4.85 ಕೋಟಿ ರೂ. ಆದಾಯ ಬರುತ್ತಿದೆ. ಸಂಸ್ಥೆಯಲ್ಲಿ 37,655 ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡಿದೆ. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ನಷ್ಟದಿಂದ ಪಾರಾಗಲು ಹಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕೆಎಸ್ಆರ್ಟಿಸಿ ಸಂಸ್ಥೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಸರಾಸರಿ ವರ್ಷಕ್ಕೆ 134 ಕೋಟಿ ನಷ್ಟ: ಸಂಸ್ಥೆಗೆ ವಾರ್ಷಿಕ 3724.35 ಕೋಟಿ ರೂ. ಆದಾಯ ಬರುತ್ತಿದ್ದು, 3859.28 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ, 2018-19ರಲ್ಲಿ134.93 ಕೋಟಿ ರೂ. ನಷ್ಟ ಉಂಟಾಗಿದೆ. 2019-20ರಲ್ಲಿ 500 ಕೋಟಿ ರೂ. ಆದಾಯ ಖೋತಾ ಆಗಿದೆ. ಬಸ್ಗಳ ಖರೀದಿಗಾಗಿ ಸಂಸ್ಥೆಯು 2019-20ರಲ್ಲಿ220 ಕೋಟಿ ರೂ. ಸಾಲ ಮಾಡಿದೆ.
ಕರ್ನಾಟಕ ಜನಸಾಮಾನ್ಯರ ಸಾರಿಗೆ ಅಂತಾನೇ ಫೇಮಸ್ ಆಗಿರೋ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟದ ಚಕ್ರವ್ಯೂಹದಲ್ಲಿ ಸಿಲುಕಿವೆ. ಕಳೆದ ಒಂಭತ್ತು ತಿಂಗಳಿಂದ ಪ್ರಯಾಣಿಕರ ಕೊರತೆಯಿಂದ ಲಾಭದ ಹಾದಿ ಹಿಡಿಯದ ಸಾರಿಗೆ ಸಂಸ್ಥೆ ಟಯರ್ ಪಂಚರ್ ಆಗೋ ಸ್ಥಿತಿಗೆ ತಿಲುಪಿದೆ. ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ಕೆಎಸ್ಆರ್ಟಿಸಿಗೆ 500 ಕೋಟಿ ರೂ. ನಷ್ಟವಾಗಿದೆ. ಈ ಹಿಂದೆ ಕೆಎಸ್ಆರ್ಟಿಸಿಯು ಪ್ರತಿದಿನ ಓಡಿಸುತ್ತಿದ್ದ 8250 ಬಸ್ಗಳಲ್ಲಿ30 ಲಕ್ಷ ಮಂದಿ ಪ್ರಯಾಣಿಸಿ 9 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿತ್ತು. ಸದ್ಯ 5200 ಬಸ್ಗಳನ್ನು ಓಡಿಸಲಾಗುತ್ತಿದ್ದು, 12-13 ಲಕ್ಷ ಜನರಷ್ಟೇ ಓಡಾಡುತ್ತಿದ್ದಾರೆ. ಹೀಗಾಗಿ, ಕೇವಲ 4.85 ಕೋಟಿ ರೂ. ಆದಾಯ ಬರುತ್ತಿದೆ. ಸಂಸ್ಥೆಯಲ್ಲಿ 37,655 ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡಿದೆ. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ನಷ್ಟದಿಂದ ಪಾರಾಗಲು ಹಲವು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕೆಎಸ್ಆರ್ಟಿಸಿ ಸಂಸ್ಥೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸರಾಸರಿ ವರ್ಷಕ್ಕೆ 134 ಕೋಟಿ ನಷ್ಟ:
ಸಂಸ್ಥೆಗೆ ವಾರ್ಷಿಕ 3724.35 ಕೋಟಿ ರೂ. ಆದಾಯ ಬರುತ್ತಿದ್ದು, 3859.28 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ, 2018-19ರಲ್ಲಿ134.93 ಕೋಟಿ ರೂ. ನಷ್ಟ ಉಂಟಾಗಿದೆ. 2019-20ರಲ್ಲಿ 500 ಕೋಟಿ ರೂ. ಆದಾಯ ಖೋತಾ ಆಗಿದೆ. ಬಸ್ಗಳ ಖರೀದಿಗಾಗಿ ಸಂಸ್ಥೆಯು 2019-20ರಲ್ಲಿ220 ಕೋಟಿ ರೂ. ಸಾಲ ಮಾಡಿದೆ.

ಕೊರೊನಾ ಪೂರ್ವದಲ್ಲಿ ಬೆಂಗಳೂರಿನಲ್ಲಿ ನಿತ್ಯ 6185 ಬಿಎಂಟಿಸಿ ಬಸ್ಗಳು ಓಡಾಡುತ್ತಿದ್ದು, ದಿನಕ್ಕೆ 5 ಕೋಟಿ ರೂ. ಆದಾಯ ದೊರೆಯುತ್ತಿತ್ತು. ಈಗ 4700 ಬಸ್ಗಳು ಸಂಚರಿಸುತ್ತಿದ್ದರೂ ಕೇವಲ 1.80 ಕೋಟಿ ರೂ. ಆದಾಯ ಬರುತ್ತಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ 600 ಕೋಟಿ ರೂ. ನಷ್ಟ ಅನುಭವಿಸಿದೆ. ಸಂಸ್ಥೆಯಲ್ಲಿ33465 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಷಿಕ 2300 ಕೋಟಿ ರೂ. ಆದಾಯ ಬರುತ್ತಿದ್ದು, 2700 ಕೋಟಿ ರೂ. ಖರ್ಚಾಗುತ್ತಿದೆ. ಸರಾಸರಿ ವರ್ಷಕ್ಕೆ 400 ಕೋಟಿ ಲಾಸ್ ಆಗುತ್ತಿದ್ದು, ಹೀಗಾಗಿ, ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದೆ. ಇನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಸ್ಗಳಲ್ಲಿ ಕಡಿಮೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ, ಟಿಕೆಟ್ನಿಂದ ಬರುತ್ತಿರುವ ಆದಾಯವು ಡೀಸೆಲ್ ವೆಚ್ಚಕ್ಕೆ ಸರಿ ಹೊಂದುತ್ತಿದೆ. ಆರು ತಿಂಗಳಲ್ಲಿ ಡೀಸೆಲ್ ದರವು ಶೇ. 20ರಷ್ಟು ಏರಿಕೆ ಆಗಿದೆ. ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ.

ಮೊದಲೇ ನಷ್ಟದಲ್ಲಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೊರೊನಾ ಮತ್ತಷ್ಟು ಪೆಟ್ಟು ಕೊಟ್ಟಿದ್ದು, ಈ ವರ್ಷ ಸೆಪ್ಟಂಬರ್ ಅಂತ್ಯದವರೆಗೆ ಬರೋಬ್ಬರಿ 373 ಕೋಟಿ ರೂ. ನಷ್ಟ ಸಂಭವಿಸಿದೆ. ಎನ್ಇಕೆಆರ್ಟಿಸಿ 2018-19ನೇ ಸಾಲಿನಲ್ಲಿ 68 ಕೋಟಿ ರೂ., 19-20ನೇ ಸಾಲಿನಲ್ಲಿ 89 ಕೋಟಿ ರೂ. ನಷ್ಟ ಅನುಭವಿಸಿತ್ತು. ಎನ್ಇಕೆಆರ್ಟಿಸಿ ಎರಡು ವರ್ಷದಿಂದ ನಷ್ಟದಲ್ಲಿಯೇ ನಡೆಯುತ್ತಿದೆ. ಅದರಲ್ಲೂ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ373 ಕೋಟಿ ರೂ. ನಷ್ಟವಾಗಿದೆ. ಜತೆಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಶೇ.45ಕ್ಕೂ ಹೆಚ್ಚು ಹಳ್ಳಿ ರೂಟ್ಗಳಿವೆ. ಈ ರೂಟ್ಗಳಲ್ಲಿ ಒಂದು ಕಡೆ ಮಾತ್ರ ಆದಾಯ ಬರುತ್ತಿದ್ದು, ಇನ್ನೊಂದು ಕಡೆ ಆದಾಯವೇ ಇಲ್ಲ. ಜತೆಗೆ ಡೀಸೆಲ್ ದರ ಹೆಚ್ಚಳ, ಬಸ್ ಟಿಕೆಟ್ ದರ ಹೆಚ್ಚಳ ಮಾಡದಿರುವ ಕಾರಣಕ್ಕಾಗಿ ನಷ್ಟದಲ್ಲಿದೆ ಎನ್ನುತ್ತಾರೆ ಈಶಾನ್ಯ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕ ಕೊಟ್ರಪ್ಪ. ನಿಗಮದಲ್ಲಿ 4670 ಬಸ್ಗಳಿದ್ದು, ಸುಮಾರು 24000 ಉದ್ಯೋಗಿಗಳಿದ್ದಾರೆ.

ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 60% ಪ್ರಯಾಣಿಕರು ಸಮೂಹ ಸಾರಿಗೆಯಿಂದ ದೂರ ಉಳಿದಿದ್ದಾರೆ. ಕೊರೊನಾ ಪೂರ್ವದಲ್ಲಿ ದಿನಕ್ಕೆ 4664 ಬಸ್ಗಳು ಓಡಾಡುತ್ತಿದ್ದು, 16.50 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದರಿಂದ ದಿನಕ್ಕೆ 5.40 ಕೋಟಿ ರೂ.ನಂತೆ ವರ್ಷಕ್ಕೆ 1971 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ದಿನಕ್ಕೆ ಸರಾಸರಿ 3175 ಬಸ್ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ 7 ಲಕ್ಷವಷ್ಟೇ ಇದೆ. ಆದಾಯ ಕೇವಲ 2.60 ಕೋಟಿ ರೂ. ಮಾತ್ರ. ಇದು ಸಂಸ್ಥೆಯ ಸಿಬ್ಬಂದಿ ವೇತನಕ್ಕಷ್ಟೇ ಸಾಗಾಗುತ್ತಿದೆ. ಡೀಸೆಲ್ ಮತ್ತು ಟಯರ್ ಹಾಗೂ ಇತರೆ ಖರ್ಚುಗಳಿಗೆ ಆರ್ಥಿಕ ಕೊರತೆಯಾಗಿದೆ ಎಂದು ಸಂಸ್ಥೆಯ ಮುಖ್ಯ ಸಾರಿಗೆ ವ್ಯವಸ್ಥಾಪಕ ನಿತಿನ್ ಹೆಗಡೆ ಹೇಳುತ್ತಾರೆ. ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳನ್ನು ವಾಯುವ್ಯ ಸಾರಿಗೆ ಹೊಂದಿದ್ದು, ಒಟ್ಟು 4664 ಬಸ್ಗಳಿವೆ. 22,450 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...