ಮುಖ್ಯಮಂತ್ರಿಗಳೇ ಇತ್ತ ಗಮನಿಸಿ, ಗೆಜ್ಜಗಾರ ಸಮುದಾಯವೂ ಇಟ್ಟಿದೆ ವಿಶೇಷ ಪ್ಯಾಕೇಜ್ ಬೇಡಿಕೆ

ಬೆಂಗಳೂರು: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಂಜನಗೂಡು- ಗೆಜ್ಜಗಾರ ಸಮುದಾಯಕ್ಕೂ ಕೂಡ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ಸಿಎಂ ಅವರಲ್ಲಿ ಆಗ್ರಹಿಸಿದೆ. ಈ ಕುರಿತಾಗಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿಯನ್ನು ಸಂಘಟನೆಯ ಪ್ರಮುಖರು ಸಲ್ಲಿಸಿದ್ದಾರೆ. ಕೋವಿಡ್‌ ಹಾಗೂ ಲಾಕ್ಡೌನ್ ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದಕ್ಕೆ ಸಂತೋಷವಾಗಿದೆ ಆದರೆ ಚಾಮರಾಜನಗರ, ಮೈಸೂರು, ಮಂಡ್ಯ, ಮತ್ತು ಹಾಸನ ಜಿಲ್ಲೆಗಳಲ್ಲಿ ಗೆಜ್ಜಗಾರ ಸಮುದಾಯವು ವಾಸ ಮಾಡುತ್ತಿದ್ದು ಇವರು ಪ್ರವರ್ಗ 2A ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಒಳಪಟ್ಟಿರುತ್ತಾರೆ. ಇವರು ಕೂಡ ರೈತರಿಗೆ ಬೇಕಾದ ಸಲಕರಣೆಗಳಾದ ಕುಡುಗೋಲು ಕತ್ತಿ ನೇಗಿಲು ಕುಂಟೆ ಇತ್ಯಾದಿ ವ್ಯವಸಾಯಕ್ಕೆ ಬೇಕಾದ ಸಲಕರಣೆಗಳನ್ನು ಮಾಡುತ್ತಾರೆ. ಆದ್ದರಿಂದ ಈ ಜನಾಂಗದವರು ಕೂಡ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರು ಕಳೆದ ವರ್ಷ ದ ಲಾಕ್ಡೌನ್ ನಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ ಸಂದರ್ಭದಲ್ಲೂ ಹಾಗೂ ಇದೀಗ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಾಗಲೂ ನಮ್ಮ ಸಮುದಾಯವನ್ನು ಮರೆತಿರುವುದು ಬೇಸರ ತಂದಿದೆ ಎಂದು ನೋವು ತೋಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಗೆಜ್ಜೆಗಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾದಿಕಾರಿಗಳ ಮೂಲಕ ಸಿಎಂಗೆ ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ನೋಂ ಹೊಸವೀಡು ಘಟಕದ ಅಧ್ಯಕ್ಷರಾದ ಶಿವಮಲ್ಲು ಹೆಚ್ ಹೆಚ್, ಕಾರ್ಯದರ್ಶಿ ಅಶೋಕ್ ಹೆಚ್ ಎಸ್, ಸೋಮಣ್ಣ ಹೆಚ್ ಹೆಚ್ ಮತ್ತು ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.


from India & World News in Kannada | VK Polls https://ift.tt/3hTiqC9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...