ಚೆನ್ನೈ: ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ತಂಡ ಹಾಲಿ ಚಾಂಪಿಯನ್ಸ್ ವಿರುದ್ಧ ಆರು ವಿಕೆಟ್ಗಳ ಗೆಲುವು ಸಾಧಿಸಿತು. ಗೆಲುವಿನ ಹೊರತಾಗಿಯೂ ಡೆಲ್ಲಿ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಪಂದ್ಯದ ಬಳಿಕ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ರೋಹಿತ್ ಶರ್ಮಾ ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ಗಳಿಗೆ 4 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೇರಿತು. ಇನ್ನು 6 ವಿಕೆಟ್ಗಳ ಸೋಲು ಅನುಭವಿಸಿದ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಮುಂಬೈ ನೀಡಿದ್ದ 138 ರನ್ ಚೇಸಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಬ್ಯಾಟಿಂಗ್ಗೆ ಬಂದ ಶಿಖರ್ ಧವನ್ 42 ಎಸೆತಗಳಲ್ಲಿ 45 ರನ್ ಗಳಿಸಿದರು. ತಮ್ಮ ತಂಡವನ್ನು ಗೆಲುವಿನ ದಡ ಸೇರಿಸುವ ಎಲ್ಲಾ ಪ್ರಯತ್ನವನ್ನು ಅವರು ಮಾಡುತ್ತಿದ್ದರು. ಆದರೆ, 15ನೇ ಓವರ್ನಲ್ಲಿ ಸ್ಪಿನ್ನರ್ ರಾಹುಲ್ ಚಹರ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಪ್ರಯತ್ನಿಸಿ ಕ್ಯಾಚ್ ಕೊಟ್ಟು ಬಿಟ್ಟರು. ಅಂತಿಮವಾಗಿ ಶಿಮ್ರಾನ್ ಹೆಟ್ಮಾಯರ್ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ , ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ಪಂದ್ಯವನ್ನು ಮುಗಿಸದ ಬಗ್ಗೆ ಬೇಸರ ಹೊರಹಾಕಿದರು. "ವಾಂಖೆಡೆ ಕ್ರೀಡಾಂಗಣಕ್ಕೆ ಸಂಪೂರ್ಣ ವಿರುದ್ಧವಾಗಿ ಇಲ್ಲಿನ ಎಂಎ ಚಿದಂಬರಂನ ಪಿಚ್ ಇದೆ. ಚೆನ್ನೈನಲ್ಲಿ ಮೊದಲ ಗೆಲುವು ಸಾಧಿಸಿರುವುದು ತುಂಬಾ ಖುಷಿ ತಂದಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡವನ್ನು ಸೋಲಿಸಿದಾಗ ವಿಶ್ವಾಸದ ಮಟ್ಟ ಯಾವಾಗಲೂ ಅಗ್ರ ಸ್ಥಾನದಲ್ಲಿರುತ್ತದೆ," ಎಂದು ಹೇಳಿದರು. "ಚೆಂಡು ಒದ್ದೆಯಾದಾಗ ಅವರಿಗೆ(ಮುಂಬೈ ಇಂಡಿಯನ್ಸ್ಗೆ) ತುಂಬಾ ಕಠಿಣವಾಗಿರುತ್ತದೆ ಎಂಬುದು ನಮಗೆ ಗೊತ್ತಿತ್ತು. ಸ್ಪಿನ್ನರ್ಗಳು ಚೆಂಡಿನ ಮೇಲೆ ಹಿಡಿತ ಸಾಧಿಸುವುದು ತುಂಬಾ ಕಷ್ಟ. ಆದರೆ, ನಮಗೆ ಜೊತೆಯಾಟ ಮುಂದುವರಿಯುವುದು ಅಗತ್ಯವಿತ್ತು. ಅದರಂತೆ ಲಲಿತ್ ಯಾದವ್ ಜತೆ ಒಂದು ಉತ್ತಮ ಜೊತೆಯಾಟ ಮೂಡಿಬಂತು. ಆದರೆ, ನಾನು ಕೊನೆಯವರೆಗೂ ಆಡಿ ಪಂದ್ಯವನ್ನು ಮುಗಿಸಲಿಲ್ಲವಲ್ಲ ಎಂಬ ಬೇಸರ ಉಂಟಾಗಿದೆ," ಎಂದು ತಿಳಿಸಿದರು. "ಆದರೆ, ಗೆಲುವಿನ ಮೂಲಕ ಪಂದ್ಯವನ್ನು ಮುಗಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ನಾವು ಆಡಿದ ಹಾದಿಯನ್ನು ಗಮನಿಸುವುದಾದರೆ, ಪಂದ್ಯದ ಗೆಲುವಿಗೆ ನಾವು ಅರ್ಹರು ಎಂದು ಭಾವಿಸುತ್ತೇನೆ," ಎಂದರು ಶಿಖರ್ ಧವನ್ ಹೇಳಿದರು. ಸತತ ಎರಡು ಪಂದ್ಯಗಳ ಗೆಲುವಿನ ಉತ್ಸಾಹದಲ್ಲಿ ತೇಲುತ್ತಿರುವ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಭಾನುವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಇದೇ ಅಂಗಳದಲ್ಲಿ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tPbVmQ