ದೊಡ್ಡಬಳ್ಳಾಪುರಕ್ಕೆ ಬಂದಿರುವ ವಲಸಿಗರು ಗೊಂಬೆಗಳನ್ನು ತಯಾರಿಸಿ ಮಾರುವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಚೀನಾ ಗೊಂಬೆಗಳ ಬದಲಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸಿದ್ಧವಾಗುವ ಗೊಂಬೆಗಳ ಕಚ್ಚಾವಸ್ತುಗಳನ್ನು ಬಳಸಿಕೊಂಡು ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಒಪ್ಪತ್ತಿನ ಊಟಕ್ಕಾಗಿ ಶ್ರಮ ಪಡುತ್ತಿದ್ದಾರೆ.
ಆದರ್ಶ ಕೋಡಿ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ:
ಜಿಲ್ಲೆಯಾದ್ಯಂತ ವಿವಿಧ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರ ಜೀವನೋಪಾಯಕ್ಕಾಗಿ ವಿಭಿನ್ನ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದು, ಅದರಲ್ಲಿ ಕೆಲವರು ಗೊಂಬೆಗಳನ್ನು ತಯಾರಿಸಿ ಮಾರುವ ಉದ್ಯೋಗ ದಲ್ಲಿ ತೊಡಗಿಕೊಂಡಿದ್ದಾರೆ. ಚೀನಾ ಗೊಂಬೆಗಳ ಬದಲಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸಿದ್ಧವಾಗುವ ಗೊಂಬೆಗಳ ಕಚ್ಚಾವಸ್ತುಗಳನ್ನು ಬಳಸಿಕೊಂಡು ಗೊಂಬೆಗಳನ್ನು ತಯಾರಿಸಿ ಜಿಲ್ಲೆಯಾದ್ಯಂತ ಮಾರಲಾಗುತ್ತಿದ್ದು, ಉತ್ತಮ ಮಾರುಕಟ್ಟೆ ಸೃಷ್ಟಿಯಾಗಿದೆ.
ಹೇಗಿದೆ ವ್ಯಾಪಾರ!
ಗೊಂಬೆಗಳ ಕಚ್ಚಾವಸ್ತುಗಳು ಬೆಂಗಳೂರಿನಿಂದ ಅವುಗಳ ಗಾತ್ರದ ಆಧಾರದ ಮೇಲೆ 100ರಿಂದ 1000 ರೂ.ಗೆ ತಂದು ಆ ಹೊರ ಪದರದ ಒಳಗೆ ಹತ್ತಿಯನ್ನು ತುಂಬಿ ಗೊಂಬೆ ತಯಾರಿಕಾ ಖರ್ಚಿನ ಮೇಲೆ 100 ರಿಂದ 150 ರೂ. ಲಾಭ ಇಟ್ಟುಕೊಂಡು ಮಾರಲಾಗುತ್ತದೆ. ಆದರೆ ಕೆಲವೊಮ್ಮೆ ಅಸಲು ಕೂಡ ನೀಡದೆ ಜನರು ಖರೀದಿಸುವುದುಂಟು. ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ವ್ಯಾಪಾರ ಸುಧಾರಿಸಿದ್ದು, ಮುಂದಿನ ದಿನಗಳಲ್ಲಿ ವ್ಯಾಪಾರದಲ್ಲಿ ವೃದ್ಧಿಯಾಗುವ ಸಾಧ್ಯತೆಯಿದೆ. ಇನ್ನು ಜಿಲ್ಲೆಯ ಹೆದ್ದಾರಿ ಮೂಲಕ ಬೆಂಗಳೂರು, ಹೈದರಾ ಬಾದ್, ಹಿಂದೂಪುರ ಸೇರಿ ಅನೇಕ ಭಾಗದ ಜನರು ಪ್ರತಿನಿತ್ಯ ಪ್ರಯಾಣಿ ಸುತ್ತಾರೆ. ಇದರಿಂದಾಗಿ ಗೊಂಬೆಗಳಿಗೆ ಒಂದು ಮಾರುಕಟ್ಟೆ ಏರ್ಪಟ್ಟಿದ್ದು, ಬೇಡಿಕೆ ಸ್ವಲ್ಪ ಮಟ್ಟಿಗೆಯಿದೆ. ಅದರಲ್ಲೂ ನಗರದ ಹಾಗೂ ಇತರೆ ಸಿಟಿಗಳಿಂದ ಬರುವಂತಹ ಯುವಕ, ಯುವತಿಯರು ಹೆಚ್ಚಾಗಿ ಟೆಡ್ಡಿ ಬೇರ್ಗಳ ಖರೀದಿಯನ್ನು ಹೆಚ್ಚಾಗಿ ಮಾಡುತ್ತಿದ್ದು, ಅದ್ದರಿಂದ ಬೇಡಿಕೆ ಹೆಚ್ಚಿದ್ದು ವಿಭಿನ್ನ ಬಣ್ಣದ ಹಾಗೂ ವಿಶಿಷ್ಟವಾದ ಟೆಡ್ಡಿ ಬೇರ್ಗಳ ಬೊಂಬೆ ಗಳು ಮಾರುಕಟ್ಟೆಗೆ ಬರುತ್ತಿದೆ ಎಂದು ಗೊಂಬೆ ತಯಾರಕ ಹಾಗೂ ಮಾರಾಟ ಗಾರ ಗೋಪಿ ಹೇಳುತ್ತಾರೆ.
ಯಡಿಯೂರಪ್ಪಗೆ ಚೆಕ್, ವಿಜಯೇಂದ್ರಗೆ ಆರ್ಟಿಜಿಎಸ್ ಮೂಲಕ ಲಂಚ: ಸಿದ್ದರಾಮಯ್ಯ ಆರೋಪ
ಗೊಂಬೆಗಳ ತಯಾರಿ ಹೇಗೆ?
ಗೊಂಬೆಗಳ ತಯಾರಿಕೆಗೆ ಅವಶ್ಯಕವಾಗಿರುವ ಹತ್ತಿಯ ಬಟ್ಟೆಗಳನ್ನು ಕೊರೊನಾ ಮುನ್ನ ಚೀನಾದಿಂದ ಬೆಂಗಳೂರಿನ ವಿವಿಧೆಡೆ ಬರುತ್ತಿತ್ತು. ಆದರೆ ಲಾಕ್ಡೌನ್ ನಂತರ ಚೀನಾ ಉತ್ಪನ್ನಗಳು ದೇಶಕ್ಕೆ ಪ್ರವೇಶಿಸುವುದು ಸ್ಥಗಿತವಾಗಿದ್ದು, ಇದೀಗ ಪಂಜಾಬ್, ದಿಲ್ಲಿಯಿಂದ ರಾಜ್ಯಕ್ಕೆ ಬರುತ್ತಿದ್ದು, ಜಿಲ್ಲೆಯ ಗೊಂಬೆ ಮಾರಾಟ ಮಾಡುವ ವಲಸಿಗರು ಬೆಂಗಳೂರಿನಲ್ಲಿ ಈ ಗೊಂಬೆಯ ಹೊರ ಪದರದ ಬಟ್ಟೆಗಳನ್ನು ಖರೀದಿಸಿ ಅದಕ್ಕೆ ಹತ್ತಿಯನ್ನು ತುಂಬಿ ಗೊಂಬೆಗಳಾಗಿಸಿ ಜಿಲ್ಲೆಯಾದ್ಯಂತ ರಸ್ತೆಯ ಬದಿಗಳಲ್ಲಿ ಕುಳಿತು ಮಾರುತ್ತಿದ್ದಾರೆ. ಇನ್ನು ಗೊಂಬೆಗಳಿಗೆ ಕನಿಷ್ಠ ಬೆಲೆ 200 ರಿಂದ 5000 ವರೆಗೂ ವ್ಯತ್ಯಾಸವಿದೆ. ಕಚ್ಚಾ ವಸ್ತುಗಳ ಬೆಲೆ ಕನಿಷ್ಠವಾಗಿ 150ರಿಂದ ಆರಂಭವಾಗುವುದರಿಂದ ಆರಂಭಿಕವಾಗಿಯೇ 200 ರೂ. ಗೊಂಬೆಯ ಬೆಲೆ ಕಾಣಬಹುದಾಗಿದೆ.
ಗೋಪಾಲಕರಿಗೆ 25ಸಾವಿರ ಬಹುಮಾನ: ಜಿಲ್ಲಾಮಟ್ಟದ ಹಾಲು ಕರೆಯುವ ಸ್ಪರ್ಧೆ ಮಾ.5ಕ್ಕೆ!
ಮುಗಿಯದ ಟೆಂಟ್ ವಾಸ!
ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ದಿಲ್ಲಿ, ಒಡಿಸ್ಸಾ ಮೂಲದ ವಲಸಿಗರು ಗೊಂಬೆಗಳ ವ್ಯಾಪಾರದಲ್ಲಿ ತೊಡಗಿಕೊಂಡು ಟೆಂಟ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಸ್ಥಳೀಯವಾಗಿ ನಿವೇಶನ ಸಮಸ್ಯೆ ಇದೆ. ಬಾಡಿಗೆ ಮನೆಗಳಲ್ಲಿರಲು ಮನೆಯ ಬಾಡಿಗೆಗಳು ಹೆಚ್ಚಾಗಿರು ವುದರಿಂದ ಅದು ಸಾಧ್ಯವಿಲ್ಲ. ಮಳೆಗಾಲದಲ್ಲಿ ಟೆಂಟ್ ವಾಸ ಬಹಳ ಕಷ್ಟ ಕರವಾಗಿರುತ್ತದೆ. ಸ್ಥಳೀಯವಾಗಿ ನಮ್ಮಗೆಲ್ಲ ಸಹಾಯದ ಅಗತ್ಯವಿದೆ ಎಂದು ವಲಸಿಗ ಸುರೇಂದ್ರ ತಿಳಿಸಿದರು. ಇನ್ನು ಉತ್ತರ ಭಾರತದ ವಲಸಿಗರರು ಕೊರೊನಾ ಬರುವ ಮುನ್ನ ರಾಜ್ಯದ ಶಿವಮೊಗ್ಗ, ದಾವಣಗೆರೆ, ಉಡುಪಿಗಳಲ್ಲಿ ಗೊಂಬೆಗಳ ವ್ಯಾಪಾರ ಮಾಡುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಅಲ್ಲಿ ವ್ಯಾಪಾರ ಕುಸಿತವಾಗಿ ಅಲ್ಲಿನಿಂದ ಜಿಲ್ಲೆಗೆ ಬಂದು ವ್ಯಾಪಾರ ಮಾಡಲಾಗುತ್ತಿದೆ.
from India & World News in Kannada | VK Polls https://ift.tt/3uRJZjo