![](https://vijaykarnataka.com/photo/81323248/photo-81323248.jpg)
ಮುದಗಲ್: ಧಾರಣೆ ಕ್ರಮೇಣ ಇಳಿಮುಖವಾಗುತ್ತಿದ್ದು ಸಜ್ಜೆ ಬೆಳೆದ ರಲ್ಲಿ ಆತಂಕ ಮನೆಮಾಡಿದೆ. ಈ ವರ್ಷದ ಮುಂಗಾರು ವಿಳಂಬದ ನಡುವೆಯೂ ಸಜ್ಜೆ ಬೆಳೆ ನಿರೀಕ್ಷಿತಮಟ್ಟದಲ್ಲಿ ಬಂದಿದೆ. ಕಟಾವು ಹಂತದಲ್ಲಿ ಒಂದುವರೆ ತಿಂಗಳು ಕಾಡಿದ ಮಳೆರಾಯನಿಂದಾಗಿ ಅಲ್ಲಲ್ಲಿ ಸಜ್ಜೆ ತೆನೆ ತೋಯ್ದು ಅಲ್ಪ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದ್ದು ಬಿಟ್ಟರೇ, ಸಜ್ಜೆ ಫಸಲು ಉತ್ತಮವಾಗಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ 2400ರೂ.ವರೆಗೂ ಮಾರಾಟವಾಗಿದ್ದ ಸಜ್ಜೆ ಧಾರಣೆ, ಇದೀಗ ಧಿಡೀರನೆ ಕುಸಿದು ಪ್ರತಿ ಕ್ವಿಂಟಲ್ಗೆ 1200ರಿಂದ 1250ರೂ. ವರೆಗೆ ಮಾರಾಟವಾಗುತ್ತಿದೆ ಎಂದು ಸಜ್ಜೆ ಮಾಡಿದ ರೈತರಾದ ಶಂಕ್ರಪ್ಪ ದೆಸಾಯಿಭೋಗಾಪೂರ, ಮಲ್ಲಪ್ಪ ಹಡಗಲಿ, ಲಿಂಬೇಪ್ಪ ಹಡಗಲಿ ತಾಂಡಾ ನೊಂದು ನುಡಿಯುತ್ತಾರೆ. ಸಜ್ಜೆ ಬೆಳೆ ರೈತರಿಗೆ ಲಾಭಾದಾಯಕ ಅಲ್ಲದಿದ್ದರು ರಾಸುಗಳಿಗೆ ಮೇವು, ಕಡಿಮೆ ಖರ್ಚಿನ ಬೆಳೆಯಾಗಿದ್ದರಿಂದ ಈ ಬಾರಿ ಮುದಗಲ್ಲ ಭಾಗದ ರೈತರು ಹೆಚ್ಚಾಗಿ ಸಜ್ಜೆ ಬೆಳೆಯನ್ನು ಬೆಳೆದಿದ್ದಾರೆ. ಬಿತ್ತನೆ ಗುರಿಕೃಷಿ ಇಲಾಖೆ ಮಾಹಿತಿ ಪ್ರಕಾರ ಲಿಂಗಸುಗೂರ ತಾಲೂಕಿನಲ್ಲಿ ಸಜ್ಜೆ 19,416 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ್ ಮಾಹಿತಿ ನೀಡುತ್ತಾರೆ. ಪ್ರತಿದಿನ ಮುದಗಲ್ ಎಪಿಎಂಸಿಗೆ 300ರಿಂದ 500 ಚೀಲದವರೆಗೆ ಸಜ್ಜೆ ಆವಕವಾಗುತ್ತಿದೆ. ಸಜ್ಜೆ ಆವಕ ಹೆಚ್ಚಳವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಜ್ಜೆ ಧಾರಣೆ ಕುಸಿಯುತ್ತಿದೆ. ಧಾರಣೆ ಗಮನಿಸುತ್ತಿರುವ ರೈತರು ನಾ ಮುಂದೆ ತಾ ಮುಂದೆ ಎಂದು ಸಜ್ಜೆ ಮಾರಾಟದಲ್ಲಿ ತೊಡಗಿದ್ದಾರೆ. ಸತತ ಮಳೆಗೆ ಸಿಲುಕಿದ ಸಜ್ಜೆ ಕಪ್ಪಾಗಿದ್ದರಿಂದ ಧಾರಣೆಯಲ್ಲಿ ವ್ಯತ್ಯಾಸವಾಗುತ್ತಿದೆ. ಆರಂಭದಲ್ಲಿ 2400ರೂ.ವರೆಗೆ ಮಾರಾಟವಾಗಿದ್ದ ಸಜ್ಜೆ ಧಾರಣೆ ಈಗ 1200ರೂ.ವರೆಗೆ ಇಳಿಮುಖವಾಗಿದೆ. ನವನೀತ ಜೈನ್, ಎಪಿಎಂಸಿ ವರ್ತಕ ಮುದಗಲ್ ನಮ್ಮ ಭಾಗದ ಭೂಮಿ, ವಾತಾವರಣಕ್ಕೆ ಸಜ್ಜೆ ಉತ್ತಮ ಇಳುವರಿ ಬರುವುದರಿಂದ ಹೆಚ್ಚಿನ ರೈತರು ಸಜ್ಜೆ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಸಿಗದೆ ರೈತರು ನಷ್ಟ ಅನುಭವಿಸುವಂತಾಗಿದೆ. ದುರುಗಪ್ಪ ನಂದಿಹಾಳ ಸಜ್ಜೆ ಬೆಳೆದ ರೈತ
from India & World News in Kannada | VK Polls https://ift.tt/3kHo0a0