ಹಾಸನದಲ್ಲಿ ಫುಡ್‌ಕೋರ್ಟ್‌ ಕನಸು ನನಸು ; ವ್ಯಾಪಾರಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಸಕಲ ಸೌಕರ್ಯ!

ಪ್ರಕಾಶ್‌ ಜಿ. ಹಾಸನ: ರಸ್ತೆಬದಿ ತಿಂಡಿ ವ್ಯಾಪಾರಿಗಳಿಗೆ ಶಾಶ್ವತ ಸೂರು ಕಲ್ಪಿಸುವ ಮೂಲಕ ಗುಣಮಟ್ಟದ ಆಹಾರ ಪೂರೈಸುವಂತಾಗಬೇಕು. ವಾಹನ, ಜನದಟ್ಟಣೆ ನಿಯಂತ್ರಿಸಿ, ವ್ಯವಸ್ಥಿತ ರೀತಿಯಲ್ಲಿ ಆಕರ್ಷಕ ನಿರ್ಮಿಸಲು ಕ್ಷೇತ್ರದ ಶಾಸಕ ಕಂಡ ಕನಸು ಮುಂದಿನ 15ರಿಂದ 20 ದಿನದಲ್ಲಿ ನನಸಾಗಲಿದೆ. ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ರಸ್ತೆಬದಿ ತಿಂಡಿ ಅಂಗಡಿಗಳ ರುಚಿಗೆ ಮಾರುಹೋಗಿದ್ದಾರೆ. ತಿಂಡಿಗಾಡಿಯವರು ಶಕ್ತ್ಯಾನುಸಾರ ಆಟೋಗಳನ್ನು ಮೊಬೈಲ್‌ ಕ್ಯಾಂಟೀನ್‌ ಆಗಿ ಮಾರ್ಪಡಿಸಿಕೊಂಡು ಜನದಟ್ಟಣೆ ಹೆಚ್ಚಿದ ಪ್ರದೇಶದಲ್ಲಿವ್ಯಾಪಾರ ಮಾಡುವುದು ಸರ್ವೆ ಸಾಮಾನ್ಯ. ರಸ್ತೆಬದಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂದು ಪೊಲೀಸರು ಗದರಿದರೆ, ವಾಹನದಲ್ಲಿ ಬರುವ ಸವಾರರು ಕ್ಯಾಂಟಿನ್‌ ಮುಂದೆಯೇ ನಿಲ್ಲಿಸಿಕೊಂಡು ತಿಂಡಿ ಸೇವಿಸುತ್ತಿದ್ದರು. ಆರಂಭದಲ್ಲಿ ಹತ್ತಾರು ಸಂಖ್ಯೆಯಲ್ಲಿ ಇದ್ದ ಮೊಬೈಲ್‌ ಕ್ಯಾಂಟೀನ್‌ ಪ್ರಸ್ತುತ ಸಹ್ಯಾದ್ರಿ ರಸ್ತೆಯೊಂದರಲ್ಲೇ 50ಕ್ಕೂ ಹೆಚ್ಚಿದೆ. ಇನ್ನು ಹೈಸ್ಕೂಲ್‌ ಮೈದಾನ ರಸ್ತೆ, ಎಂಜಿ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳದ್ದೇ ಕಾರುಬಾರು. ಮೊಬೈಲ್‌ ಕ್ಯಾಂಟೀನ್‌ನಲ್ಲಿ ಪ್ಲೇಟ್‌ ಮತ್ತು ಪಾತ್ರೆ ಶುಚಿತ್ವಕ್ಕೆ ಶುದ್ಧ ನೀರು ಬಳಸುವುದಿಲ್ಲ. ಎಲ್ಲೆಂದರಲ್ಲಿ ಪ್ಲೇಟ್‌, ಎಲೆ, ಪೇಪರ್‌ ಬಿಸಾಕಿ ಹೋಗುತ್ತಾರೆ ಎಂಬ ದೂರು ಇತ್ತು. ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಸುಂಕ ಪಾವತಿಸಿದರೂ ಶಾಶ್ವತ ನೆಲೆ ಎಂಬುದು ಮೊಬೈಲ್‌ ಕ್ಯಾಂಟೀನ್‌ ಮಾಲೀಕರಿಗೆ ಇಲ್ಲವಾಗಿ, ಒಂದು ರೀತಿ ಭಯದಲ್ಲೇ ದುಡಿಮೆ ಮಾಡಿಕೊಂಡು ಸಾಗುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂಬ ಚಿಂತನೆಗೆ ಹೊಳೆದದ್ದೇ ಫುಡ್‌ಕೋರ್ಟ್‌. ಮೊಬೈಲ್‌ ಕ್ಯಾಂಟೀನ್‌ ಮಾಲೀಕರೊಂದಿಗೆ ಸಭೆ ನಡೆಸಿ, ಚಿಂತನೆಯನ್ನು ಮುಂದಿಟ್ಟು, ಅವರ ಬೇಡಿಕೆಗೂ ಮನ್ನಣೆ ನೀಡಿ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲೇ ಯೋಜನೆ ರೂಪಿಸಿ, ಸದ್ದುಗದ್ದಲವಿಲ್ಲದೆ ಅನುಷ್ಠಾನಗೊಳಿಸಲಾಗಿದೆ. ಕೋಟಿಗಟ್ಟಲೆ ವೆಚ್ಚದಲ್ಲಿ ಈ ಸೌಲಭ್ಯ ಕಲ್ಪಿಸಿದ್ದು, ಸಹ್ಯಾದ್ರಿ ಚಿತ್ರಮಂದಿರ ರಸ್ತೆಬದಿ ತಿಂಡಿಗಾಡಿ ಖುಷ್‌ ಆಗಿದ್ದಾರೆ. ಹೂ ಮಾರಾಟಕ್ಕೂ ವ್ಯವಸ್ಥೆ ಎರಡನೇ ಹಂತವಾಗಿ ಮಹಾವೀರ ವೃತ್ತದಲ್ಲಿ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ತಮಗೆ ಬೇಕಾದಂತೆ ಕುಳಿತು ವ್ಯಾಪಾರ ಮಾಡುತ್ತಿರುವ ಕಾರಣ ಜನ ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಲ್ಲಿಯೂ ವ್ಯವಸ್ಥಿತವಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪುಗೊಂಡಿದ್ದು, ಶೀಘ್ರವೇ ಅದು ಕೂಡ ಕಾರ್ಯಗತವಾಗಲಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ತಿಳಿಸಿದ್ದಾರೆ. ಎಂಜಿ ರಸ್ತೆಯಲ್ಲಿ ಫುಡ್‌ಕೋರ್ಟ್‌ ಎಂಜಿ ರಸ್ತೆಯಲ್ಲೂ ಫುಡ್‌ ಕೋರ್ಟ್‌ ನಿರ್ಮಾಣದ ಮೂಲಕ ಕಂಡ, ಕಂಡಲ್ಲಿ ಗಾಡಿಗಳು ನಿಲ್ಲಿಸಿ ವಾಹನ, ಜನಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಕ್ರೀಡಾಂಗಣದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಉದ್ದಕ್ಕೂ ವ್ಯವಸ್ಥಿತವಾಗಿ ಫುಡ್‌ಕೋರ್ಟ್‌ ನಿರ್ಮಾಣದ ಕಾಮಗಾರಿಗೂ ಚಾಲನೆ ದೊರೆತಿದೆ. ಹಾಸನ ನಗರ ಸುಂದರ ಹಾಗೂ ಶುಚಿತ್ವದಿಂದ ಕೂಡಿರಬೇಕು. ಜನತೆ ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಫುಡ್‌ಕೋರ್ಟ್‌ ಮಾಡಿಕೊಡಲಾಗುತ್ತಿದೆ. ಇನ್ನು ಮುಂದೆ ಎಲ್ಲೆಂದರಲ್ಲಿ ತಿಂಡಿ ವಾಹನ ನಿಲ್ಲಿಸಿಕೊಳ್ಳುವಂತಿಲ್ಲ. ಒಂದೆಡೆ ಇದ್ದರೆ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಅನುಕೂಲವಾಗಲಿದೆ. ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್‌, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ವರೂ ಸಮಾನರು ಎಂದು ಪರಿಗಣಿಸಿ ತಾರತಮ್ಯಕ್ಕೆ ಆಸ್ಪದ ನೀಡದಂತೆ ಜಾಗ ಒದಗಿಸಲಾಗಿದೆ. ಪ್ರೀತಂ ಜೆ.ಗೌಡ ಶಾಸಕ ಮೊಬೈಲ್‌ ಕ್ಯಾಂಟೀನ್‌ ನಿಲ್ಲಿಸಿಕೊಂಡು ವ್ಯಾಪಾರ ಮಾಡುವುದು ಕಷ್ಟವೋ, ಸುಖವೋ ಮಾಡುತ್ತಿದ್ದೆವು. ಇದೀಗ ಬಿಸಿಲು, ಮಳೆಯಿಂದ ರಕ್ಷಣೆಯಿಂದ ಕೂಡಿದ ವ್ಯವಸ್ಥಿತ ನೀರು, ವಿದ್ಯುತ್‌ ಸಹಿತ ಫುಡ್‌ಕೋರ್ಟ್‌ ಮಾಡಿಕೊಡಲಾಗುತ್ತಿರುವುದು ನೆಮ್ಮದಿ ತಂದಿದೆ. ಮೊಬೈಲ್‌ ಕ್ಯಾಂಟೀನ್‌ ಮಾಲೀಕರು ಸಹ್ಯಾದ್ರಿ ರಸ್ತೆ


from India & World News in Kannada | VK Polls https://ift.tt/3e9Brye

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...