ಬಾಡಿಗೆ ಭಾರ, ವ್ಯಾಪಾರಿ ದೂರ; ಶಿವಮೊಗ್ಗ ಫಿಶ್‌ ಮಾರ್ಕೆಟ್‌ನಲ್ಲಿ ಮಳಿಗೆಗೆ 43 ಸಾವಿರ ಬಾಡಿಗೆ!

ಆತೀಶ್‌ ಬಿ.ಕನ್ನಾಳೆ ಶಿವಮೊಗ್ಗ: ಸಾಕಷ್ಟು ಹಳೇ ಇತಿಹಾಸವಿರುವ ಶಿವಮೊಗ್ಗ ಲಷ್ಕರ್‌ ಮೊಹಲ್ಲಾ ಮಾರುಕಟ್ಟೆಗೆ ಇದೇ ಮೊದಲ ಸಲ ಇ-ಪ್ರಕ್ಯೂರ್‌ಮೆಂಟ್‌ ಮೂಲಕ ಮಳಿಗೆಗಳ ಹರಾಜಿಗೆ ಟೆಂಡರ್‌ ಕರೆಯಲಾಗಿತ್ತು. ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. 10-12 ಮಳಿಗೆಗಳಿಗೆ ಹರಾಜು ಕರೆಯಲಾಗಿತ್ತು. ಅದರಲ್ಲಿ ಇಬ್ಬರು ಮಾತ್ರ ಭಾಗವಹಿಸಿದ್ದು, 43 ಸಾವಿರ ರೂ.ಗೆ ಬಿಡ್‌ ಮಾಡಿದ್ದಾರೆ. ಆದರೆ, ಅವರೂ ಮುಂಗಡ ಹಣ ಪಾವತಿ ಮಾಡಿಲ್ಲ. ಈ ಮುಂಚೆ ಮಳಿಗೆಗಳನ್ನು ಪಾಲಿಕೆಯಿಂದಲೇ ನೇರವಾಗಿ ಹರಾಜು ಮಾಡುತ್ತಿದ್ದರು. ಹೀಗಾಗಿ, ಪ್ರತಿ ಮಳಿಗೆಗೆ ಕನಿಷ್ಠ 1,500 ರೂ. ಇತ್ತು. ಆದರೆ, ಹರಾಜಿನಲ್ಲಿ ಮಳಿಗೆ ಬೇರೊಬ್ಬರ ಪಾಲಾಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ಹಣಕ್ಕೆ ಬಿಡ್‌ ಕೂಗಿದ್ದು ಈಗ ಮಳಿಗೆ ಬಾಡಿಗೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆ ಕೂಡ ಹರಾಜು ಪ್ರಕ್ರಿಯೆ ನಡೆದಿತ್ತು. 21 ಮಳಿಗೆಗಳಲ್ಲಿ ಏಳೆಂಟಕ್ಕೆ ಬಿಡ್‌ ಆಗಿದೆ. ಇನ್ನುಳಿದವುಗಳಿಗೆ ಮತ್ತೊಮ್ಮೆ ಟೆಂಡರ್‌ ಕರೆದಿದ್ದು, ಕೇವಲ ಇಬ್ಬರೇ ಭಾಗವಹಿಸಿದ್ದರು. ಇನ್ನುಳಿದವುಗಳಿಗೆ ಮತ್ತೊಮ್ಮೆ ಹರಾಜು ಮಾಡಬೇಕಾಗಿದೆ. ಮೊದಲು ಬಿಡ್‌ ಆದ ಮಳಿಗೆಗಳಿಗೆ ಕನಿಷ್ಠ 4 ಸಾವಿರ ರೂ. ಮೇಲ್ಪಟ್ಟು ಹರಾಜಾಗಿವೆ. ನೋ ಲಾಸ್‌ ನೋ ಪ್ರಾಫಿಟ್‌ ಮೀನು ಮಾರಾಟಗಾರನೊಬ್ಬರು ಹೇಳುವಂತೆ, 'ಪ್ರತಿ ದಿನ 50-100 ಕೆಜಿ ಮೀನು ಮಾರಾಟ ಮಾಡಲಾಗುತ್ತದೆ. ತಲಾ ಕೆಜಿಗೆ 10-20 ರೂ. ಲಾಭವೆಂದು ಪರಿಗಣಿಸಿದರೂ ಕುಟುಂಬ ನಡೆಸುವುದು ಭಾರಿ ಕಷ್ಟ. ಹೀಗಾಗಿ, ಪ್ರತಿ ಮಳಿಗೆಗೆ 8-9 ಸಾವಿರ ರೂ. ಬಾಡಿಗೆ ನಿರ್ಧರಿಸುವಂತೆ ಪಾಲಿಕೆಗೆ ಮನವಿ ಮಾಡಲಾಗಿದೆ' ಎಂದು ತಿಳಿಸಿದ್ದಾರೆ. ಹರಾಜಿನಲ್ಲಿ ಸಿಕ್ಕಿರುವ ಮಳಿಗೆಗೆ 1.37 ಲಕ್ಷ ರೂ. ಮುಂಗಡ ಹಣ ಪಾವತಿಸಬೇಕು. ಒಂದುವೇಳೆ, ಡೆಪೋಸಿಟ್‌ 50 ಸಾವಿರ ರೂ. ಮೇಲ್ಪಟ್ಟಿದ್ದಲ್ಲಿ ಡಿಡಿ ಮೂಲಕ ಹಣ ಪಾವತಿಸಬೇಕು. ಈ ಎಲ್ಲ ನಿಯಮಗಳಿಂದಾಗಿ ಮೀನು ಮಾರಾಟಗಾರರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಕೆಲವು ನಿಯಮಗಳನ್ನು ಸಡಿಲಿಸಿ, ಬಾಡಿಗೆಯನ್ನು ಇಳಿಕೆ ಮಾಡಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ. ಆನ್‌ಲೈನ್‌ ಮಾಹಿತಿ ಕೊರತೆ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಮೀನು ಮಾರಾಟಗಾರರಿಗೆ ಆನ್‌ಲೈನ್‌ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಗತ್ಯವಿರುವ ಆನ್‌ಲೈನ್‌ ಸಾಕ್ಷರತೆ ಇಲ್ಲ. ಹೀಗಾಗಿ, ಹಲವರು ಇದರಿಂದ ದೂರ ಉಳಿಯುತ್ತಿದ್ದಾರೆ. ಮಾಹಿತಿ ಇದ್ದರೂ ಪಾಲಿಕೆಯಿಂದ ಈ ಬಗ್ಗೆ ಸರಿಯಾಗಿ ಜಾಗೃತಿ ಮೂಡಿಸದೇ ಇರುವುದರಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಟೆಂಡರ್‌ ಕರೆದಿರುವ ಬಗ್ಗೆ ಮೀನು ಮಾರಾಟಗಾರರಿಗೆ ಸರಿಯಾದ ಮಾಹಿತಿ ನೀಡಬೇಕು ಎಂಬುವುದು ಮಾರಾಟಗಾರರ ಒತ್ತಾಯವಾಗಿದೆ. ಮೀನು ಮಾರುಕಟ್ಟೆಯನ್ನು ಬರೀ ಮೀನಿಗಷ್ಟೇ ಸೀಮಿತಗೊಳಿಸದೇ ಮಟನ್‌ ಮಾರಾಟಕ್ಕೂ ಅವಕಾಶ ನೀಡಬೇಕೆಂದು ಈ ಹಿಂದೆಯೇ ಪಾಲಿಕೆಗೆ ಮನವಿ ಮಾಡಲಾಗಿದೆ. ಜತೆಗೆ, ಬಾಡಿಗೆಯೂ ಮಾರಾಟಗಾರರಿಗೆ ಅನುಕೂಲವಾಗುವಂತೆ ವಿಧಿಸಬೇಕು. ಈ ಹಿಂದೆಯೂ ಟೆಂಡರ್‌ ಕರೆಯಲಾಗಿತ್ತು. ಬಿಡ್‌ದಾರರಲ್ಲಿ ಹಲವರು ಮುಂಗಡ ಹಣವನ್ನೇ ಪಾವತಿಸಿಲ್ಲ. ಈ ಬಗ್ಗೆ ಆಡಳಿತರೂಢ ಪಕ್ಷ ಗಮನಹರಿಸಬೇಕು. ಎಚ್‌.ಸಿ.ಯೋಗೇಶ್‌, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಈ ಹಿಂದೆ ಮಳಿಗೆಗೆ 1,500 ರೂ. ಬಾಡಿಗೆ ಪಾವತಿಸುತ್ತಿದ್ದೆ. ಈಗ ಹರಾಜಿನಲ್ಲಿ 43 ಸಾವಿರ ರೂ. ಬಿಡ್‌ ಆಗಿದ್ದು ಇದರೊಂದಿಗೆ ಮುಂಗಡ ಹಣ 1.37 ಲಕ್ಷ ರೂ. ಪಾವತಿಸಬೇಕು. ಇದು ಹೊರೆಯಾಗಲಿದ್ದು, ಪಾಲಿಕೆ ಇದರೆಡೆಗೆ ಗಮನಹರಿಸಬೇಕು. ನೊಂದ ಮೀನು ಮಾರಾಟಗಾರ


from India & World News in Kannada | VK Polls https://ift.tt/2Ptd3NY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...