ಭಾರೀ ಮಳೆಯಿಂದ ಬೆಳೆ ನಾಶ: ಗಗನಕ್ಕೇರಿದ ತರಕಾರಿ ಬೆಲೆ, ಗ್ರಾಹಕರು ಕಂಗಾಲು; ಇಲ್ಲಿದೆ ದರಪಟ್ಟಿ

ಪ್ರಕಾಶ್‌ ಜಿ., ಹಾಸನ ಹಾಸನ: ಮಳೆಯ ಆರ್ಭಟದ ನಡುವೆ ತರಕಾರಿ ಗಗನಮುಖಿಯಾಗಿದ್ದು, ಗ್ರಾಹಕರು ಬೆಲೆ ಕೇಳಿಯೇ ಬೆಚ್ಚಿ ಬೀಳುವಂತಾಗಿದೆ. ಮಳೆಗಾಲದಲ್ಲಿ ಬೆಲೆ ಏರಿಕೆ ಸಹಜವಾದರೂ, ಈ ಬಾರಿ ತಂಪನೆ ವಾತಾವರಣದಲ್ಲೂ ಬೆಲೆ ಕೇಳಿಯೇ ಜನತೆ ಬೆವರುವಂತೆ ಮಾಡುತ್ತಿದೆ. ಈರುಳ್ಳಿ ಸಾಧಾರಣ ಗಾತ್ರದ್ದು ಕೆಜಿಗೆ 30, ಉತ್ತಮ ಗಾತ್ರದ್ದು ಕೆಜಿಗೆ 50 ರೂ. ಇದೆ. ಆಲೂ ಈ ಹಿಂದೆ ಹತ್ತು ರೂ. ಇದ್ದದ್ದು 35ರಿಂದ 40 ರೂ., ಬೀನ್ಸ್‌ ದರ 65ರಿಂದ 80 ರೂ., ಟೊಮೆಟೊ 25 ಕೆಜಿಗೆ ಚೀಲಕ್ಕೆ 150ರಿಂದ 400 ರೂ., ಬೆಂಡೇಕಾಯಿ 40ರಿಂದ 50 ರೂ. ಕ್ಯಾಪ್ಸಿಕಮ್‌ 60ರಿಂದ 65 ರೂ. ಗೆಡ್ಡೆಕೋಸು 30ರಿಂದ 40, ಮುಳುಗಾಯಿ 30ರಿಂದ 40 ರೂ., ಕ್ಯಾರೆಟ್‌ 40ರಿಂದ 50 ರೂ., ನುಗ್ಗೇಕಾಯಿ 35ರಿಂದ 40 ರೂ. ಹೀಗೆ... ತರಕಾರಿ ಬೆಲೆ ಒಂದಕ್ಕಿಂತ ಮತ್ತೊಂದು ಹೆಚ್ಚಾಗಿದೆ. ತರಕಾರಿ ಬೆಲೆಯ ನಡುವೆ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಕೂಡ ಕೆಜಿ ಬೆಲೆಗೆ ಬದಲು ಕಾಲು ಕೆಜಿ ಬೆಲೆ ಕೂಗುತ್ತಿರುತ್ತಾರೆ. ಸಮೀಪಕ್ಕೆ ಬಂದು ಕಡಿಮೆ ಇಲ್ಲವೇ ಎಂದಾಗ ಮಾತ್ರ ಕೆಜಿ ಬೆಲೆ ಹೇಳಿ ಬೆಚ್ಚಿ ಬೀಳಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಮಳೆಯಿಂದಾಗಿ ಹೊರ ಜಿಲ್ಲೆಯಿಂದ ತರಕಾರಿ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಇಲ್ಲಿಂದ ಮೈಸೂರು, ಬೆಂಗಳೂರು ಸೇರಿದಂತೆ ಪ್ರಮುಖ ನಗರಕ್ಕೆ ತರಕಾರಿ ಸಾಗಣೆ ಆಗುತ್ತಿದ್ದು, ಸ್ಥಳೀಯವಾಗಿ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಸೊಪ್ಪು ದರ ನಾನಾ ಬಗೆಯ ಸೊಪ್ಪಿನ ಬೆಲೆಯೂ ಹೆಚ್ಚಳವಾಗಿದೆ. ಸಂಬಾರ ಹತ್ತು ರೂ.ಗೆ ಎರಡು ಕಂತೆ, ಮೆಂತ್ಯ 5 ರೂ. ಪುದಿನ 2 ರೂ. ಕರಿಬೇವು 2ರಿಂದ ಮೂರು ರೂ. ಇದೆ. ''ತರಕಾರಿ ಮಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ತರಕಾರಿ ಬರುತ್ತಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ,'' ಎನ್ನುತ್ತಾರೆ ಹಾಸನದ ವರ್ತಕ ಸಂದೀಪ್‌. ಹಣದ ಚೀಲ ಎಗರಿಸಿದ ಭೂಪತರಕಾರಿ ಬೆಲೆ ದುಬಾರಿ ಕಾಲದಲ್ಲಿ ಕುವೆಂಪುನಗರದ ರಸ್ತೆಬದಿ ಗಾಡಿ ನಿಲ್ಲಿಸಿಕೊಂಡು ತರಕಾರಿ ವ್ಯಾಪಾರ ಮಾಡುತ್ತಿದ್ದ ವೇಳೆ ವರ್ತಕರ ಗಮನ ಬೇರೆಡೆ ಸೆಳೆದು ಹಣದ ಚೀಲ ಅಪಹರಿಸಿಕೊಂಡು ಹೋಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಷ್ಟರಲ್ಲಿ ಹಣದ ಚೀಲ ಎಲ್ಲಿ ಎಸೆದ ಎಂಬುದು ಮಾತ್ರ ತಿಳಿಯದೆ ಕಳ್ಳ ಸಿಕ್ಕರೂ, ಹಣ ಮಾತ್ರ ಕೈ ಸೇರಿಲ್ಲ.


from India & World News in Kannada | VK Polls https://ift.tt/341nnQZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...