ವಿಮಾನಕ್ಕಿಂತ ದುಬಾರಿಯಾಯ್ತು ಖಾಸಗಿ ಬಸ್‌ ಪ್ರಯಾಣ ದರ!

ಬೆಂಗಳೂರು: ಲಾಕ್‌ಡೌನ್‌ ಅವಧಿ ಮೇ 3ಕ್ಕೆ ಕೊನೆಗೊಳ್ಳಬಹುದೆಂಬ ನಿರೀಕ್ಷೆಯಿಂದ ಟ್ರಾವೆಲ್ಸ್‌ ಏಜೆನ್ಸಿಗಳು ಮುಂಗಡ ಟಿಕೆಟ್‌ ಬುಕ್ಕಿಂಗ್‌ ಶುರು ಮಾಡಿದ್ದು, ರಾಜ್ಯ ಮತ್ತು ಅಂತಾರಾಜ್ಯ ಪ್ರಯಾಣಿಕರ ಸುಲಿಗೆಗೆ ಸಿದ್ಧವಾಗಿವೆ. ದುಬಾರಿ ದರ ವಿಧಿಸುವುದಕ್ಕೆ ಮುಂದಾಗಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಮುಂಗಡ ಟಿಕೆಟ್‌ ಕಾಯ್ದಿರಿಸುವ ಸೇವೆ ಆರಂಭಿಸುವ ಕುರಿತು ಭಾನುವಾರದ ಬಳಿಕ ತೀರ್ಮಾನ ತೆಗೆದುಕೊಳ್ಳಲಿದೆ. ಹೀಗಾಗಿ, ಇದನ್ನೇ ವರದಾನವಾಗಿಸಿಕೊಂಡಿರುವ ಖಾಸಗಿ ಬಸ್‌ ಮಾಲೀಕರು ದುಬಾರಿ ದರ ವಿಧಿಸುವ ಮೂಲಕ ಪ್ರಯಾಣಿಕರ ಸುಲಿಗೆಗೆ ಇಳಿದಿದ್ದಾರೆ. ಬೆಂಗಳೂರಿನಿಂದ ನಾನಾ ಪ್ರದೇಶಗಳು ಮತ್ತು ಹೊರರಾಜ್ಯಗಳಿಗೆ ಪ್ರಯಾಣಿಸಲು ಮುಂಗಡ ಟಿಕೆಟ್‌ ಬುಕ್ಕಿಂಗ್‌ ದರವು ವಿಮಾನ ಪ್ರಯಾಣ ದರಕ್ಕಿಂತ ದುಬಾರಿ ಎನಿಸಿದೆ. ಬೆಂಗಳೂರಿನಿಂದ ಬೆಳಗಾವಿ, ಮುಂಬೈಗೆ ಸಂಚರಿಸುವ ವೋಲ್ವೊ ಮಲ್ಟಿ ಆಕ್ಸೆಲ್‌ ಸ್ಲೀಪರ್‌ ಬಸ್‌ಗಳ ಪ್ರಯಾಣ ದರವನ್ನು 8500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಲಾಕ್‌ಡೌನ್‌ ಮೊದಲಿಗಿಂತ ನಾಲ್ಕು ಪಟ್ಟು ಜಾಸ್ತಿ ಇದೆ. ಎಸಿ ಸೆಮಿ ಸ್ಲೀಪರ್‌ ಬಸ್‌ಗಳ ಪ್ರಯಾಣ ದರವು 6900 ರೂ. ಇದೆ. ಸಾಮಾನ್ಯ ದಿನಗಳಲ್ಲಿ 1800 ರೂ. ನಿಂದ 2 ಸಾವಿರ ರೂ. ದರವಿತ್ತು. ಹಾಗೆಯೇ, ಬೆಂಗಳೂರಿನಿಂದ ಹೈದರಾಬಾದ್‌ಗೆ 4500 ರೂ. ಮುಂಗಡ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಖಾಸಗಿ ಬಸ್‌ ಟ್ರಾವೆಲ್ಸ್‌ ಏಜೆನ್ಸಿಗಳು ಅತಿ ಹೆಚ್ಚು ದರ ವಸೂಲು ಮಾಡುತ್ತಿರುವುದು ಇದೇ ಮೊದಲು. ಕೇಂದ್ರ ಸರಕಾರವು ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ತಲುಪಿಸಲು ಅಂತಾರಾಜ್ಯ ಬಸ್‌ಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಿಗೆ ಬೇಡಿಕೆ ಬಂದಿದೆ. ಲಾಕ್‌ಡೌನ್‌ ತೆರವುಗೊಳಿಸಿದರೂ ರೈಲು ಮತ್ತು ವಿಮಾನ ಸೇವೆ ಆರಂಭವಾಗುವ ಸಾಧ್ಯತೆಗಳು ಕಡಿಮೆ ಇವೆ. ಹೀಗಾಗಿ, ಜನರು ಪ್ರಯಾಣಕ್ಕೆ ಸಾರಿಗೆ ಬಸ್‌ಗಳನ್ನು ಅವಲಂಬಿಸಲಿದ್ದಾರೆ. ಈ ನಡುವೆ, ''ಕೇಂದ್ರ ಸರಕಾರವು ಮೇ 4ರಿಂದ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುವ ಕುರಿತು ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ. ಆದ ಕಾರಣ, ಮುಂಗಡ ಟಿಕೆಟ್‌ ಬುಕ್ಕಿಂಗ್‌ ಸೇವೆ ಶುರು ಮಾಡಿಲ್ಲ. ಸರಕಾರದ ಆದೇಶ ಆಧರಿಸಿ, ಕ್ರಮ ಕೈಗೊಳ್ಳಲಾಗುವುದು,'' ಎಂದು ಕೆಎಸ್‌ಆರ್‌ಟಿಸಿ ಅಕಾರಿಯೊಬ್ಬರು ತಿಳಿಸಿದರು. ''ಲಾಕ್‌ಡೌನ್‌ನಿಂದ ಖಾಸಗಿ ಬಸ್‌ ಟ್ರಾವೆಲ್ಸ್‌ ಏಜೆನ್ಸಿಗಳು ಸಾಕಷ್ಟು ನಷ್ಟ ಅನುಭವಿಸಿವೆ. ಹೀಗಾಗಿ, ಮುಂಗಡ ಟಿಕೆಟ್‌ ಬುಕ್ಕಿಂಗ್‌ಗೆ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ,'' ಎಂದು ಬಸ್‌ ಆ್ಯಂಡ್‌ ಕಾರ್‌ ಆಪರೇಟರ್ಸ್ ಕಾನ್ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಕೆ.ಟಿ. ರಾಜಶೇಖರ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.''ಇಲ್ಲವೇ ಶೇ 50ರಷ್ಟಾದರೂ ತೆರಿಗೆ ಕಡಿತ ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿಹೆಚ್ಚಿನ ಮಂದಿ ಪ್ರಯಾಣ ಮಾಡುವುದಿಲ್ಲ. ಹೀಗಾಗಿ, ಕಡಿಮೆ ಪ್ರಯಾಣಿಕರು ಟಿಕೆಟ್‌ ಬುಕ್ಕಿಂಗ್‌ ಮಾಡಿದರೂ ಸೇವೆ ಒದಗಿಸಲೇಬೇಕಿದೆ,'' ಎಂದು ತಿಳಿಸಿದರು.


from India & World News in Kannada | VK Polls https://ift.tt/2Wn2zzg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...