ಲಾಕ್‌ಡೌನ್‌ ವೇಳೆ ತಂದೆಯನ್ನು ಸೈಕಲ್‌ ಮೇಲೆ ಡಬಲ್‌ ರೈಡ್‌ ಮಾಡಿ 8 ದಿನದಲ್ಲಿ 1200 ಕಿಲೋ ಮೀಟರ್ ಕ್ರಮಿಸಿದ ಧೀರೆ

ಹೊಸದಿಲ್ಲಿ: ಕೊರೊನಾ ವೈರಸ್ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಿದೆ. ಲಾಕ್‌ಡೌನ್‌ ಹಲವಾರನ್ನು ಸಂಕಷ್ಟಕ್ಕೆ ದೂಡಿದ್ದರೆ, ಇನ್ನೂ ಕೆಲವರನ್ನು ಪ್ರಯೋಗಾತ್ಮಕ ಹಾಗೂ ಕ್ರಿಯಾಶೀಲತೆಗೆ ಒಗ್ಗುವಂತೆ ಮಾಡಿದೆ. ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನೂ ಮೈಗೂಡಿಸಿಕೊಟ್ಟಿದೆ. ಇಂಥ ಧೈರ್ಯ, ಸಾಹಸ ಹಾಗೂ ಆತ್ಮೀಯರನ್ನು ಬದುಕಿಸಿಕೊಳ್ಳಬೇಕು ಎಂಬ ಛಲ ಪುಟ್ಟ ಬಾಲಕಿಯಲ್ಲಿ ಕಂಡುಬಂದಿದ್ದು, ಇಡೀ ದೇಶ ಈಗ ಆಕೆಯನ್ನು ಕೊಂಡಾಡುತ್ತಿದೆ. ಹೌದು, ಮೊದಲ ಹಂತದ ಲಾಕ್‌ಡೌನ್‌ ವೇಳೆ ಒಂದಲ್ಲ, ಎರಡರಲ್ಲ, 1200 ಕಿಲೋ ಮೀಟರ್‌ ದೂರವನ್ನು ಕ್ರಮಿಸುವ ಮೂಲಕ ಬಾಲಕಿಯೊಬ್ಬಳು ತಂದೆಯ ಪಾಲಿಗೆ "ದೇವತೆ'ಯಾಗಿದ್ದಾಳೆ. ಮಗಳು ಎಂದಿದ್ದರೂ ತಂದೆಗೆ ದೇವತೆಯೇ. ಈತನ ಪಾಲಿಗೆ (15) ಪ್ರತ್ಯಕ್ಷ ದೇವತೆಯಾಗಿದ್ದಾಳೆ. ಈಕೆಯ ಸಾಧನೆಗೆ ಇಡೀ ದೇಶದ ಜನತೆ ಫಿದಾ ಆಗಿದ್ದಾರೆ. ಇಷ್ಟೇ ಅಲ್ಲ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಕೂಡ ಜ್ಯೋತಿ ಕುಮಾರ್‌ ಸಾಧನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. 8ನೇ ತರಗತಿ ಪಾಸಾಗಿರುವ ಜ್ಯೋತಿಯ ತಂದೆ ಮೋಹನ್‌ ಪಾಸ್ವಾನ್‌ ಗುರುಗ್ರಾಮದಲ್ಲಿಇ- ರಿಕ್ಷಾ ಚಾಲನೆ ಮಾಡುತ್ತಿದ್ದರು. ಈ ನಡುವೆ ಅಪಘಾತದಲ್ಲಿಗಾಯಗೊಂಡಿದ್ದ ಅವರು ಮನೆಯಲ್ಲಿಯೇ ಉಳಿದಿದ್ದರು. ಲಾಕ್‌ಡೌನ್‌ ಘೋಷಣೆಯಾದಾಗ ತಂದೆ ಮಗಳಿಗೆ ಆಹಾರದ ಕೊರತೆ ಎದುರಾಯಿತು. ಹೀಗಾಗಿ ಸೈಕಲ್‌ ಎರವಲು ಪಡೆದ ಜ್ಯೋತಿ, ಗಾಯಾಳು ತಂದೆಯನ್ನು ಕುಳ್ಳಿರಿಸಿ ದರ್ಭಾಂಗಾ ತಲುಪಿದ್ದಾಳೆ. ಈ ಕುರಿತು ಜ್ಯೋತಿ ಕುಮಾರಿ ಹೇಳಿದ್ದೇನು.. ನಮ್ಮ ತಂದೆ ಗುರುಗ್ರಾಮದಲ್ಲಿದ್ದರು. ಜತೆಗೆ ಅಪಘಾತಗೊಂಡು ಅಸ್ವಸ್ಥಗೊಂಡಿದ್ದರು. ಹೀಗಾಗಿ ಅವರನ್ನು ತವರಿಗೆ ಕರೆದುಕೊಂಡು ಬರಲು ನಿರ್ಧರಿಸಿದೆ. ಸೈಕಲ್‌ ಎರವಲು ಪಡೆದು ಡಬಲ್‌ ರೈಡ್‌ ಮಾಡಲು ತೀರ್ಮಾನಿಸಿದೆ. ಮಾರ್ಗಮಧ್ಯೆ ದಾನಿಗಳು ಹಂಚುವ ಆಹಾರ ಹಾಗೂ ನೀರು ಕುಡಿದು ಸಾಗಿ ಬಂದೆವು. ಕೊನೆಯ ಎರಡು ದಿನವಂತೂ ಉಪವಾಸವೇ ಇದ್ದೆವು. ಅಷ್ಟೊಂದು ಕಠಿಣ ಪರಿಸ್ಥಿತಿಯಲ್ಲಿಡಬಲ್‌ ರೈಡ್‌ ಸೈಕಲ್‌ ತುಳಿದ ಆಕೆಗೆ ಪ್ರಶಂಸೆಗಳ ಸುರಿಮಳೆಯೇ ವ್ಯಕ್ತವಾಗಿದೆ. ಅಲ್ಲದೆ, ಪುರಾಣದ ಶ್ರವಣಕುಮಾರನಿಗೆ ಹೋಲಿಸಲಾಗುತ್ತಿದೆ. ಆಕೆಯ ಕ್ವಾರಂಟೈನ್‌ ಮುಗಿದ ಬಳಿಕ ಆರ್ಥಿಕ ಸಹಾಯ ಮಾಡುವುದಾಗಿ ಸಾಕಷ್ಟು ಜನ ಮಂದೆ ಬಂದಿದ್ದಾರೆ. 1200 ಕಿ.ಮೀ ಸೈಕಲ್‌ ತುಳಿದು ಊರು ತಲುಪಿದ ಬಾಲಕಿ ಜ್ಯೋತಿ ಕುಮಾರಿ (15) ಪಾಲಿಗೆ ಬದುಕು ಬಂಗಾರವಾಗುವ ಅವಕಾಶವೊಂದು ಒದಗಿ ಬಂದಿದೆ. ಅಸಾಮಾನ್ಯ ಸಾಮರ್ಥ್ಯದ ಮೂಲಕ ಜಾಲ ತಾಣಗಳಲ್ಲಿ ಸರ್ವರ ಕಣ್ಮಣಿಯಾಗಿದ್ದ ಆಕೆಗೆ ಸೈಕ್ಲಿಂಗ್‌ ಫೆಡರೇಷನ್‌ನಿಂದ ಟ್ರಯಲ್ಸ್‌ಗೆ ಆಹ್ವಾನ ದೊರೆತಿದೆ. ಅಲ್ಲೇನಾದರೂ ತೇರ್ಗಡೆಯಾದರೆ ಉನ್ನತ ಮಟ್ಟದ ಸೈಕ್ಲಿಸ್ಟ್‌ ಆಗಲಿದ್ದಾಳೆ. ಜ್ಯೋತಿ ಕುಮಾರಿ ಕೇವಲ ಎಂಟೇ ದಿನದಲ್ಲಿ 1200 ಕಿಲೋ ಮೀಟರ್‌ ದೂರ ಕ್ರಮಿಸಿದ್ದಾಳೆ. ಈ ಬಗ್ಗೆ ಬಿಬಿಸಿ ಸೇರಿದಂತೆ ಹಲವು ಮಾಧ್ಯಗಳಲ್ಲಿ ವರದಿ ಪ್ರಕಟವಾಗಿತ್ತು. ಅದನ್ನು ಗಮನಿಸಿದ ಸೈಕ್ಲಿಂಗ್‌ ಫೆಡರೇಷನ್‌ ಅಧ್ಯಕ್ಷ ಒಂಕಾರ್‌ ಸಿಂಗ್‌, ಮುಂದಿನ ತಿಂಗಳು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಆಕೆಗೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಓಂಕಾರ್‌ ಸಿಂಗ್‌ ''ಡಬಲ್‌ ರೈಡ್‌ (ಹಿಂಬದಿ ವ್ಯಕ್ತಿಯನ್ನು ಕುಳ್ಳಿರಿಸಿ) ಸೈಕಲ್‌ ತುಳಿಯುವುದು ಶ್ರಮದಾಯಕ. ಅಂಥದ್ದರಲ್ಲಿತನಗಿಂತ ಹಿರಿ ತೂಕದ ತಂದೆಯನ್ನು ಕುಳ್ಳಿರಿಸಿ ಸೈಕಲ್‌ ತುಳಿದಿದ್ದರೆ ಆಕೆಯಲ್ಲಿ ಸಾಕಷ್ಟು ಸಾಮರ್ಥ್ಯ ಅಡಗಿರಬಹುದು. ಒಂದು ವೇಳೆ ಜ್ಯೋತಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದರೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುವುದು,'' ಎಂದು ಮಾಹಿತಿ ಹೇಳಿದ್ದಾರೆ. ''ಜ್ಯೋತಿ ಮುಂದಿನ ತಿಂಗಳು ದಿಲ್ಲಿಗೆ ಬರಲಿದ್ದಾಳೆ. ಪ್ರಯಣಾದ ಸಂಪೂರ್ಣ ವೆಚ್ಚವನ್ನು ಒಕ್ಕೂಟ ಭರಿಸಲಿದೆ,'' ಎಂದು ಸಿಂಗ್‌ ಹೇಳಿದ್ದಾರೆ. ಬಾಲಕಿಯ ಸಾಹಸ? ದಿನಕ್ಕೆ 100ಕ್ಕೂ ಅಧಿಕ ಕಿ.ಮೀ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್‌ಗಳು ದಿನಕ್ಕೆ 110 ಕಿ.ಮೀ. ಕ್ರಮಿಸುತ್ತಾರೆ. ಆದರೆ, ಬಾಲಕಿ 8 ದಿನದಲ್ಲಿಊರು ತಲುಪಿರುವುದು ಸತ್ಯವಾಗಿದ್ದರೆ ಸರಾಸರಿ 150 ಕಿ.ಮೀ ದೂರ ಕ್ರಮಿಸಿದಂತೆ ಆಗುತ್ತದೆ. ಕನಿಷ್ಠ ಆಹಾರದ ನಡುವೆಯೂ ಆಕೆ ಅಸಾಧಾರಣ ಗುರಿ ಮುಟ್ಟಿದ್ದಾಳೆ ಎಂದು ಬಣ್ಣಿಸಲಾಗುತ್ತಿದೆ. ತನ್ನ ತಂದೆಗಾಗಿ ಇಷ್ಟೊಂದು ಪರಿಶ್ರಮ ಬಿದ್ದಿರುವ ಈ ಬಾಲಕಿಯ ಜೀವನದಲ್ಲಿ ಸಂತೋಷ, ಸಂಭ್ರಮದ 'ಜ್ಯೋತಿ'ಯಂತೆ ಪ್ರಕಾಶಿಸಲಿ.


from India & World News in Kannada | VK Polls https://ift.tt/2A2tzwJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...