ಕೊರೊನಾ ಮೆಟ್ಟಿ ನಿಂತ ಬೇಸಾಯ: ಈಗ ಎಲ್ಲೆಲ್ಲೂ 'ಉಳುವಾ ಯೋಗಿಯ ನೋಡಲ್ಲಿ..!'

ರಾಜ್ಯದ ನಾನಾ ಜಿಲ್ಲೆಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾದ ಬೆಳೆಗಳ ಬಿತ್ತನೆಗೆ ಸಿದ್ಧತೆಗಳು ನಡೆಯುತ್ತಿದ್ದು, ಕೃಷಿ ಇಲಾಖೆ ಈ ಬಾರಿ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೇಸಾಯದ ಗುರಿಯನ್ನು ಹೊಂದಿದೆ. ಅದಕ್ಕೆ ಪೂರಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಮುಂಗಾರಿಗೆ ಒಟ್ಟು 8.42 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ದಾಸ್ತಾನಿದೆ. ಒಟ್ಟು 7,27,310 ಮೆಟ್ರಿಕ್‌ ಟನ್‌ ವಿವಿಧ ಶ್ರೇಣಿಯ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಮುಂಗಾರು ಬಿತ್ತನೆ ಚಟುವಟಿಕೆಗೆ ಯಾವುದೇ ಕೊರತೆ ಆಗುವುದಿಲ್ಲಎಂದು ಕೃಷಿ ಇಲಾಖೆ ಹೇಳಿದೆ.ಕೊರೊನಾ ಅಬ್ಬರದ ನಡುವೆ ಮುಂಗಾರು ಪೂರ್ವ ಬೆಳೆಗೆ ಮಾರುಕಟ್ಟೆ ಸಿಗದೆ ರೈತರು ತೊಂದರೆಗೊಳಗಾದರೂ ಮುಂದಿನ ಹಂಗಾಮಿನಲ್ಲಿ ಉತ್ತಮ ಫಸಲಿನ ಜತೆಗೆ ಉತ್ತಮ ಬೆಲೆಯೂ ಸಿಗಬಹುದು ಎಂಬ ಆಶಯವನ್ನು ಹೊಂದಿದ್ದಾರೆ. ಮುಂಗಾರು ಪೂರ್ವ ಮಳೆಯನ್ನು ಬಳಸಿಕೊಂಡು ಕೃಷಿ ಚಟುವಟಿಕೆಗೆ ಇಳಿದಿರುವ ಕೃಷಿಕರು ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮುಂಗಾರು ಪೂರ್ವ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಜತೆಗೆ ಜೂನ್‌ ಮೊದಲ ವಾರದಲ್ಲಿ ಮುಂಗಾರು ಕೂಡ ಎಂಟ್ರಿ ಕೊಡಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಈಗ ಬೇಸಿಗೆ ಮಳೆಯಲ್ಲಿ ಮಾಗಿ ಉಳುಮೆ ಮಾಡಿ ಭೂಮಿ ಅಚ್ಚುಕಟ್ಟು ಮಾಡಿಕೊಂಡು ಮುಂಗಾರು ಮೊದಲ ಮಳೆಯಲ್ಲಿಯೇ ಬಿತ್ತನೆಗೆ ತಯಾರಿ ನಡೆಸಿದ್ದಾರೆ.ಚಿತ್ರ: ಉಡುಪಿ ಜಿಲ್ಲೆ ಬ್ರಹ್ಮಾವರ ಬಳಿ ಗದ್ದೆಗೆ ಗೊಬ್ಬರ ಹಾಕುತ್ತಿರುವುದು.ಆಂಫಾನ್‌ ಎಫೆಕ್ಟ್‌, ಮುಂಗಾರು ಆಗಮನ ನಿರೀಕ್ಷೆ, ಗರಿಗೆದರಿದ ಕೃಷಿ ಚಟುವಟಿಕೆ

ತುಂಗಾ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿರುವ ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಗಂಗಾವತಿ, ದಾವಣಗೆರೆ, ಚಿತ್ರದುರ್ಗ ಮತ್ತು ಪರಿಸರದಲ್ಲಿ ಭತ್ತದ ಬೆಳೆಗೆ ಸಿದ್ಧತೆಗಳು ನಡೆಯುತ್ತಿವೆ. ಕಲಬುರಗಿ ಭಾಗದಲ್ಲಿ ಭತ್ತ, ಹೆಸರು, ಉದ್ದು, ಸೋಯಾ, ಅವರೆ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಸಜ್ಜೆ ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಬೀದರ್‌ನಲ್ಲಿ ಸೋಯಾಬೀನ್‌ ಪ್ರಮುಖ ಬೆಳೆಯಾಗಲಿದೆ. ಚಾಮರಾಜನಗರ ಜಿಲ್ಲೆಯಲ್ಲಿಈಗಾಗಲೇ ಪೂರ್ವ ಮುಂಗಾರಿನ ಬಿತ್ತನೆ ಮುಗಿದಿದೆ. ಮಂಡ್ಯದಲ್ಲಿ ರಾಗಿ ಮತ್ತು ಭತ್ತದ ಬಿತ್ತನೆ ಸಿದ್ಧತೆ ಜೋರಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆಕಾಳು, ಹತ್ತಿ, ಕಬ್ಬು, ತಂಬಾಕು ಬೆಳೆಯನ್ನು 2,84 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ. ಬೆಳಗಾವಿಯಲ್ಲಿ ತರಕಾರಿ, ಹತ್ತಿ, ಜೋಳ ಸೇರಿದಂತೆ ಸಿರಿಧಾನ್ಯ ಬೆಳೆಗಳ ಬಿತ್ತನೆ ಬೀಜಗಳಿಗೆ ಬೇಡಿಕೆ ಜೋರಾಗಿದೆ. ಉತ್ತರ ಕರ್ನಾಟಕದ ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಮೆಕ್ಕೆ ಜೋಳ ಪ್ರಮುಖ ಬೇಡಿಕೆ ಪಡೆದಿದೆ.

ಉತ್ತರ ಕರ್ನಾಟಕದ ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವುದನ್ನು ಕೃಷಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅದರ ಪರಿಣಾಮ ಬೆಳಗಾವಿ ಜಿಲ್ಲೆ ಮೇಲೂ ಉಂಟಾಗುತ್ತಿದೆ. ಆ ಹಿನ್ನೆಲೆಯಲ್ಲಿ ಇದೇ ಪ್ರದೇಶದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನಕಲಿ ಬಿತ್ತನೆ ಬೀಜಗಳನ್ನು ಅಧಿಕಾರಿಗಳು ಎರಡು ತಿಂಗಳ ಅವಧಿಯಲ್ಲಿ ಜಪ್ತಿ ಮಾಡಿದ್ದಾರೆ. ಇದರ ಜತೆಗೆ ಉಪ್ಪು ಮತ್ತಿತರ ವಸ್ತುಗಳನ್ನು ಬಳಸಿ ನಕಲಿ ರಸಗೊಬ್ಬರ ತಯಾರಿಸಿ ಅಸಲಿ ರೇಟಿಗೆ ಮಾರುವ ದಂಧೆಯೂ ಇಲ್ಲಿ ಬಯಲಾಗಿದೆ. ಹಲವಾರು ಅಂಗಡಿಗಳಿಗೆ ದಾಳಿ ನಡೆಸಿ ಪರವಾನಗಿಗಳನ್ನು ರದ್ದುಪಡಿಸಿದ್ದು, ಕೃಷಿ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಪ್ರತಿ ಬಾರಿ ಬಿತ್ತನೆ ವೇಳೆ ನಕಲಿ ಮತ್ತು ಕಳಪೆ ಬೀಜಗಳ ಹಾವಳಿ ಮಾಮೂಲಿ. ಇದರಿಂದ ರೈತರು ಬಲಿಪಶು ಆಗುವುದನ್ನು ತಡೆಯಲು ಕೃಷಿ ಇಲಾಖೆ ಮೈಕೊಡವಿ ಎದ್ದಿದೆ. ಇಲಾಖೆ ಜಾಗೃತ ದಳ ಹಾಗೂ ಬೀಜ ಪರಿವೀಕ್ಷಕರ ತಂಡಗಳು ರಾಜ್ಯದ ಎಲ್ಲೆಡೆ ಕ್ರಿಯಾಶೀಲರಾಗಿ ನಕಲಿ ಮತ್ತು ಕಳಪೆ ಬೀಜ ದಾಸ್ತಾನು ಪತ್ತೆ ಕಾರ್ಯಾಚರಣೆಗೆ ಇಳಿದಿವೆ. ಈವರೆಗೆ 11,636 ಕೋಟಿ ರೂ. ಮೌಲ್ಯದ ಒಟ್ಟು 8,037 ಕ್ವಿಂಟಾಲ್‌ ಕಳಪೆ ಮತ್ತು ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯೂರಿಯಾ -8.50 ಲಕ್ಷ ಟನ್‌.

ಎಂಒಪಿ: 2 ಲಕ್ಷ ಟನ್‌.

ಡಿಎಪಿ : 4 ಲಕ್ಷ ಟನ್‌.

ಎಸ್‌ ಎಸ್‌ ಪಿ: 0.75 ಲಕ್ಷ ಟನ್‌.

ಕಾಂಪ್ಲೆಕ್ಸ್‌ : 7.60 ಲಕ್ಷ ಟನ್‌.

ಒಟ್ಟು : 22.85 ಲಕ್ಷ ಟನ್‌.

ಒಟ್ಟು ಬಿತ್ತನೆ ಪ್ರದೇಶ 73 ಲಕ್ಷ ಹೆಕ್ಟೇರ್‌

ಜೋಳ 11.8 ಲಕ್ಷ ಹೆಕ್ಟೇರ್‌

ಕೆಂಪು ತೊಗರಿ 11.6 ಲಕ್ಷ ಹೆಕ್ಟೇರ್‌

ಭತ್ತ 10.05 ಲಕ್ಷ ಹೆಕ್ಟೇರ್‌

ಹತ್ತಿ 6.25 ಲಕ್ಷ ಹೆಕ್ಟೇರ್‌

ನೆಲಗಡಲೆ 4.90 ಲಕ್ಷ ಹೆಕ್ಟೇರ್‌

ಇತರ: ಹೆಸರು, ಅಲಸಂಡೆ, ಉದ್ದು, ಸೋಯಾ, ಸೂರ್ಯಕಾಂತಿ

- ಮೇ ತಿಂಗಳ ಆರಂಭದಿಂದಲೇ ಮಳೆಯಾಗಿ ಬೇಗನೆ ಕೃಷಿ ಚಟುವಟಿಕೆ ಆರಂಭ

- ನಗರದಲ್ಲಿದ್ದ ವಲಸಿಗರು ಮರಳಿ ಬಂದು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

- ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾರತ ಚಟುವಟಿಕೆ ಪುಟಿದೇಳುವ ಆಸೆ



from India & World News in Kannada | VK Polls https://ift.tt/3ecLPSJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...