ಕತಾರ್‌ನಿಂದ ಪತ್ನಿ ಬಿಟ್ಟು ಬರಲೊಪ್ಪದ ಪತಿ ಹೃದಯಾಘಾತದಿಂದ ಸಾವು!

ಎಸ್‌. ಜಿ. ಕುರ್ಯ,ಉಡುಪಿ ನಿನ್ನ ಬಿಟ್ಟು ನಾನೊಬ್ಬನೇ ಭಾರತಕ್ಕೆ ಮರಳಲಾರೆ, ಲಾಕ್‌ ಡೌನ್‌ ಸಂಕಷ್ಟದ ನಡುವೆ ನಿನ್ನಿಂದ ದೂರವಾಗಲಾರೆ. ಹೀಗೆಂದು ಮರುಭೂಮಿಯ ನಾಡು ಕತಾರ್‌ನಲ್ಲಿ ಪ್ರೀತಿ, ಧೈರ್ಯದ ನುಡಿಗಳನ್ನಾಡಿದ್ದ ಪತಿರಾಯ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದು ವೈದ್ಯೆ ಪತ್ನಿ ಶುಕ್ರವಾರ ಪತಿಯ ಶವದ ಜತೆ ಬೆಂಗಳೂರಿಗೆ ಮರಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಮೂಲದ ಎಂಜಿನಿಯರ್‌ ಪ್ರವಾಸಿ ವೀಸಾದಲ್ಲಿ ಕತಾರ್‌ಗೆ ತೆರಳಿದ್ದು ಮಾ. 13ಕ್ಕೆ ಮರಳಲು ಯೋಜಿಸಿದ್ದರೂ ಕೊರೊನಾ ಲಾಕ್‌ ಡೌನ್‌ ಅಡ್ಡಗಾಲು ಹಾಕಿತು. ಮಕ್ಕಳು ಮೈಸೂರಲ್ಲಿದ್ದರೆ ಕತಾರ್‌ನಲ್ಲಿ ಪತ್ನಿಯೊಂದಿಗೆ ಎರಡು ತಿಂಗಳ ಲಾಕ್‌ ಡೌನ್‌ ಕಳೆದರು. ಕೇಂದ್ರ ಸರಕಾರದ ವಂದೇ ಭಾರತ್‌ ಯೋಜನೆಯಡಿ ಭಾರತಕ್ಕೆ ವೈದ್ಯ ಪತ್ನಿ ಜತೆ ಮರಳಲು ವೀಸಾ ಅರ್ಜಿ ಹಾಕಿದರು. ಪತಿಗೆ ವೀಸಾ ಸಿಕ್ಕರೂ ದೇಶದ ಉದ್ಯೋಗಿಯಾದ ವೈದ್ಯ ಪತ್ನಿಗೆ ವೀಸಾ ಸಿಗಲಿಲ್ಲ. ಮೇ 22ಕ್ಕೆ ಭಾರತಕ್ಕೆ ಮರಳುವ ದಿನ, ವಿಮಾನವೂ ನಿಗದಿಯಾಯಿತು. ಆದರೆ ಲಾಕ್‌ಡೌನ್‌ ಸಂಕಷ್ಟ ಕಾಲದಲ್ಲಿ ಪತ್ನಿಯನ್ನು ಬಿಟ್ಟು ಮರಳಲು ಪತಿ ಮನಸೊಪ್ಪಲಿಲ್ಲ. ಖಿನ್ನತೆಗೊಳಗಾಗಿ ಮನದ ಸಂಕಟ ವೈದ್ಯ ಪತ್ನಿ ಮುಂದೆ ತೋಡಿಕೊಂಡರೂ ಕೊರಗಿ, ಹೃದಯಾಘಾತದಿಂದ ಸಾವನ್ನಪ್ಪಿದರು. ನಿನ್ನ ಬಿಟ್ಟು ಹೋಗಲಾರೆ, ಭಾರತಕ್ಕೆ ಹೋಗೋದಾದರೆ ನಾವಿಬ್ಬರೇ ಹೋಗೋಣ ಎಂದಿದ್ದ ಪತಿಯನ್ನು ವೈದ್ಯೆಯಾಗಿ ಉಳಿಸಿಕೊಳ್ಳಲಾಗದ ನೋವಿನ ನಡುವೆ ಕಣ್ಣೆದುರೇ ಪ್ರಾಣ ಬಿಟ್ಟ ಪತಿಯ ಶವ ಭಾರತಕ್ಕೆ ತಂದು ಮಣ್ಣು ಮಾಡುವ ನಿಟ್ಟಿನಲ್ಲಿ ಹೋರಾಟ ಶುರುವಿಟ್ಟರು. ಕತಾರಿನ ಲಾಕ್‌ಡೌನ್‌ ನಿಯಮ ಪ್ರಕಾರ ಶವ ಬೇರೆಡೆಗೆ ಒಯ್ಯುವಂತಿಲ್ಲ. ಏರ್‌ ಇಂಡಿಯಾ ವಿಮಾನ ಶವ ಒಯ್ಯಲು ಒಪ್ಪಲಿಲ್ಲ. ಕೊನೆಗೆ ಕತಾರ್‌ ಕನ್ನಡ ಸಂಘದ ಮೊರೆ ಹೋದ ವೈದ್ಯೆಗೆ ಪತಿಯ ಶವವನ್ನು ಭಾರತಕ್ಕೆ ಒಯ್ಯಲು, ಕೊರೊನಾದಿಂದ ಸತ್ತಿಲ್ಲ ಎನ್ನುವ ಪ್ರಮಾಣ ಪತ್ರ ಸಿಕ್ಕಿತು. ಏರ್‌ ಇಂಡಿಯಾ ತಕರಾರಿನ ನಡುವೆ ಮೃತದೇಹ ಏರ್‌ಲಿಫ್ಟ್‌ ನಿಟ್ಟಿನಲ್ಲಿ ಕತಾರಿನ ಭಾರತೀಯ ರಾಯಭಾರ ಕಚೇರಿ, ಏರ್‌ ಇಂಡಿಯಾ ಕಚೇರಿ, ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರನ್ನು ಸಂಪರ್ಕಿಸಿ ನೆರವು ಯಾಚಿಸಿದರು. ಪತಿ ಶವದ ಜತೆ ಶುಕ್ರವಾರ ಕತಾರ್‌ನಿಂದ ಬೆಂಗಳೂರಿನ ವಿಮಾನವನ್ನು ಕಣ್ಣೀರಿನೊಂದಿಗೆ ಏರಿದ ವೈದ್ಯೆ ಮೈಸೂರಿಗೆ ತೆರಳಿದ್ದಾರೆ. ರೋಗಿಗಳು, ಗರ್ಭಿಣಿಯರು, ಊರಲ್ಲಿ ತಮ್ಮನ್ನು ಕಳೆದುಕೊಂಡ ಕರಾವಳಿಗರು, ಕನ್ನಡಿಗರು ಕತಾರ್‌ನಲ್ಲಿನಾನಾ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರಿನ ಬದಲು (14 ದಿನಗಳ ಕ್ವಾರಂಟೈನ್‌ ಅನಿವಾರ್ಯ) ಮಂಗಳೂರಿಗೆ ಕತಾರ್‌ನಿಂದ ನೇರವಾಗಿ ವಿಮಾನ ಸೌಲಭ್ಯ ಒದಗಿಸಿದರೆ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಉಡುಪಿಯ ಜನರಿಗೆ ಅನುಕೂಲವಾಗಲಿದೆ.ಈ ನಿಟ್ಟಿನಲ್ಲಿಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಿದೆ. -ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಪ್ರತಿನಿಧಿ, ಭಾರತೀಯ ಸಮುದಾಯ ಹಿತೈಷಿ ವೇದಿಕೆ(ಐಸಿಬಿಎಫ್‌), ಕತಾರ್‌.


from India & World News in Kannada | VK Polls https://ift.tt/2TvWDTU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...