ಶಾರುಖ್‌ ಪುತ್ರ ಆರ್ಯನ್‌ ಖಾನ್‌ ಬಂಧನಕ್ಕೆ ಎನ್‌ಸಿಬಿ ಬಲೆ ಬೀಸಿದ್ದು ಹೇಗೆ?

ಮುಂಬಯಿ: ಬಾಲಿವುಡ್‌ ನಟ ಪುತ್ರ ಸೇರಿದಂತೆ ಹಲವರನ್ನು ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಭಾನುವಾರ ಬಂಧಿಸಿದೆ. ಮುಂಬಯಿ-ಗೋವಾ ನಡುವೆ ಸಮುದ್ರದ ಮಧ್ಯೆ ಐಷಾರಾಮಿ ಕ್ರೂಸ್‌ ಶಿಪ್‌ನಲ್ಲಿನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಮತ್ತು ವೈದ್ಯಕೀಯ ತಪಾಸಣೆ ಬಳಿಕ 23 ವರ್ಷದ ಆರ್ಯನ್‌ ಖಾನ್‌, ಆತನ ಇಬ್ಬರು ಸ್ನೇಹಿತರಾದ ಅರ್ಬಾಜ್‌ ಸೇಠ್‌ ಹಾಗೂ ಮುನ್‌ಮುನ್‌ ಧಮೇಛಾನನ್ನು ಬಂಧಿಸಲಾಗಿದೆ. ಕೋರ್ಟ್‌ ಮುಂದೆ ಹಾಜರು ಪಡಿಸಿದ ಬಳಿಕ ಮೂವರೂ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಎನ್‌ಸಿಬಿ ವಶಕ್ಕೆ ಪಡೆದುಕೊಂಡಿದೆ. ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್‌ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ. ಮಾದಕ ವಸ್ತು ವಶ: ದಾಳಿ ವೇಳೆ ಕ್ರೂಸ್‌ಶಿಪ್‌ನಲ್ಲಿಮಾದಕ ವಸ್ತು ಪತ್ತೆಯಾಗಿದ್ದು, 13 ಗ್ರಾಮ್‌ ಕೊಕೇನ್‌, 6 ಗ್ರಾಮ್‌ ಎಂಡಿ, 21 ಗ್ರಾಮ್‌ ಚರಸ್‌ ಹಾಗೂ 1,33,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಹೇಗೆ?
  • 15 ದಿನಗಳ ಮುನ್ನವೇ ನಡೆದಿತ್ತು ರೇವ್‌ ಪಾರ್ಟಿ ಬಗ್ಗೆ ಸುಳಿವು ಪಡೆದಿದ್ದ ಎನ್‌ಸಿಬಿ
  • ಡ್ರಗ್ಸ್‌ ಸೇವನೆ ಮಾಡುವ ಅತಿಥಿಗಳ ಸೋಗಿನಲ್ಲಿ ಕ್ರೂಸ್‌ ಹಡಗು ಏರಿದ್ದ ಎನ್‌ಸಿಬಿ ಸಿಬ್ಬಂದಿ
  • ರೇವ್‌ ಪಾರ್ಟಿ ಬಗ್ಗೆ ಸುಳಿವಿದ್ದರೂ, ಅದರಲ್ಲಿ ಭಾಗಿಯಾಗುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ
  • ದಾಳಿ ವೇಳೆ ಸೆಲೆಬ್ರಿಟಿಗಳು, ಅವರ ಸಂಬಂಧಿಕರನ್ನು ಕಂಡು ಶಾಕ್‌ ಆದ ಅಧಿಕಾರಿಗಳು
  • ರೇವ್‌ ಪಾರ್ಟಿಗೂ ನಮಗೂ ಸಂಬಂಧ ಇಲ್ಲವೆಂದ ಕಾರ್ಡಿಲಿಯಾ ಕ್ರೂಸ್‌ ಶಿಪ್‌ ಮಾಲೀಕ
ಇತರ ನಟರೂ ಉಪಸ್ಥಿತಿ ಶನಿವಾರ ರಾತ್ರಿ ದಾಳಿಯ ವೇಳೆ ಕ್ರೂಸ್‌ ಶಿಪ್‌ನಲ್ಲಿಇತರ ನಟರೂ ಇದ್ದರೆಂದು ತಿಳಿದುಬಂದಿದೆ. ಆದರೆ ಅವರ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗದ ಕಾರಣ ಅವರನ್ನು ವಶಕ್ಕೆ ಪಡೆದಿಲ್ಲ. ಆದರೆ ಅವರ ಹೆಸರನ್ನು ಗೌಪ್ಯವಾಗಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾರ್ಟಿ ಆಯೋಜಿಸಿದ್ದ ಕಾಡೇಲಿಯಾ ಹಡಗು ಶನಿವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮುಂಬಯಿ ತೀರದಿಂದ ಸಮುದ್ರಯಾನ ಆರಂಭಿಸಿತ್ತು. ಮೂರು ದಿನಗಳ ಪ್ರವಾಸದ ಬಳಿಕ ಅ.4ರಂದು ರಾತ್ರಿ ಮುಂಬಯಿಗೆ ಮರಳಲು ಯೋಜಿಸಲಾಗಿತ್ತು. ಮಾದಕ ದಂಧೆ ಮುನ್ನೆಲೆಗೆ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಳಿಕ ಎನ್‌ಸಿಬಿ ಬಾಲಿವುಡ್‌ನಲ್ಲಿ ಮಾದಕ ವಸ್ತು ದಂಧೆಯ ಬೆನ್ನು ಹತ್ತಿತ್ತು. ಸುಶಾಂತ್‌ ಸಿಂಗ್‌ ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಡ್ರಗ್ಸ್‌ ದಂಧೆಯ ಸುಳಿವು ದೊರೆತಿತ್ತು. ಅಂದಿನಿಂದಲೂ ದೇಶಾದ್ಯಂತ ಕಾರ್ಯಾಚರಣೆ ತೀವ್ರಗೊಳಿಸಿರುವ ಎನ್‌ಸಿಬಿ ಹಲವರನ್ನು ಬಂಧಿಸಿದೆ. ಕಳೆದ ವಾರ ಗೋವಾದಲ್ಲಿ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳ ತಂಡವು ಬಾಲಿವುಡ್‌ ನಟ ಅರ್ಜುನ್‌ ರಾಮ್‌ಪಾಲ್‌ ಗೆಳತಿ ಗೇಬ್ರಿಯೆಲ್ಲಾ ಡೆಮಿಟ್ರಿಯಾಡೆಸ್‌ಮ ಸೋದರನನ್ನು ಬಂಧಿಸಿತ್ತು. ಈ ಮೂಲಕ ಬಾಲಿವುಡ್‌ನಲ್ಲಿ ಡ್ರಗ್ಸ್‌ ಘಾಟು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇಂತಹ ಕೃತ್ಯಗಳಲ್ಲಿಯಾರೇ ಭಾಗಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹಾರಾಷ್ಟ್ರ, ಬಾಲಿವುಡ್‌ ಅನ್ನು ಮಾದಕ ವಸ್ತು ದಂಧೆಯಿಂದ ಮುಕ್ತಗೊಳಿಸಲು ಮಹಾರಾಷ್ಟ್ರ ಸರಕಾರ ದಿಟ್ಟ ಪ್ರಯತ್ನ ಮಾಡಬೇಕು. - ರಾಮದಾಸ್‌ ಅಠಾವಳೆ, ಕೇಂದ್ರ ಸಚಿವ


from India & World News in Kannada | VK Polls https://ift.tt/3oIIjrZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...