ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಹಾರ್ದಿಕ್‌ ಸ್ಥಾನ ತುಂಬಬಲ್ಲ ಆಟಗಾರನನ್ನು ಹೆಸರಿಸಿದ ರಹಾನೆ!

ನಾಟಿಂಗ್‌ಹ್ಯಾಮ್‌ (ಇಂಗ್ಲೆಂಡ್): ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಸ್ಟಾರ್‌ ಆಲ್‌ರೌಂಡರ್‌ ಅವರ ಸ್ಥಾನವನ್ನು ತುಂಬಲಿದ್ದಾರೆಂದು ಉಪ ನಾಯಕ ಹೇಳಿದ್ದಾರೆ. ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಾಳೆಯಿಂದ(ಬುಧವಾರ) ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸಲಿದೆ. ಆ ಮೂಲಕ ಕೊಹ್ಲಿ ಪಡೆಯ ಇಂಗ್ಲೆಂಡ್‌ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಟೆಸ್ಟ್‌ ಸರಣಿ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ, ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಶಾರ್ದುಲ್‌ ಠಾಕೂರ್‌ ಅವರನ್ನು ಶ್ಲಾಘಿಸಿದರು. ಶಾರ್ದುಲ್‌ ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಎಲ್ಲರ ಗಮನ ಸೆಳೆದಿದ್ದರು. ನಿರ್ಣಾಯಕ ಸಮಯದಲ್ಲಿ ಅರ್ಧಶತಕ ಹಾಗೂ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ತಂಡದ ಐತಿಹಾಸಿಕ ಗೆಲುವಿಗೆ ನೆರವಾಗಿದ್ದರು. ಅಂದಿನಿಂದ ಮುಂಬೈ ಮೂಲದ ಆಟಗಾರ ಬ್ಯಾಟಿಂಗ್‌ ಮೂಲಕವೂ ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. "ಪ್ರತಿಯೊಬ್ಬರು ವಿಭಿನ್ನವಾಗಿರುತ್ತಾರೆ. ಹಾರ್ದಿಕ್‌ ಪಾಂಡ್ಯ 2018ರಲ್ಲಿ ನಮಗೆ ವಿಭಿನ್ನವಾಗಿ ನೆರವಾಗಿದ್ದರು. ಅಂದಹಾಗೆ ಶಾರ್ದುಲ್‌ ಠಾಕೂರ್‌ ಕೂಡ ಬ್ಯಾಟ್‌ ಮಾಡಬಲ್ಲರು. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಶಾರ್ದುಲ್‌ ಅವರ ಬ್ಯಾಟಿಂಗ್‌ ಅನ್ನು ನೀವು ಕಣ್ತುಂಬಿಸಿಕೊಂಡಿದ್ದೀರಿ. ಇದಕ್ಕೂ ಮುನ್ನ ಅವರು ದೇಶಿ ಕ್ರಿಕೆಟ್‌ನಲ್ಲಿ ಎರಡೂ ವಿಭಾಗಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿದ್ದರು," ಎಂದು ರಹಾನೆ ಸಹ ಆಟಗಾರನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. "ಅಂದಹಾಗೆ ಬೌಲರ್‌ಗಳಾದ ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಇಶಾಂತ್‌ ಶರ್ಮಾ ನೆಟ್ಸ್‌ನಲ್ಲಿ ಸಾಕಷ್ಟು ಬ್ಯಾಟಿಂಗ್‌ ಅಭ್ಯಾಸ ನಡೆಯುತ್ತಿದ್ದಾರೆ. ಹಾಗಾಗಿ, ಕೊನೆಯಲ್ಲಿ ಕನಿಷ್ಠ 20 ರಿಂದ 30 ನಿರ್ಣಾಯಕ ರನ್‌ ತಂಡಕ್ಕೆ ಸೇರ್ಪಡೆಯಾಗುವ ಬಗ್ಗೆ ನಮಗೆ ಹೊಸ ಭರವಸೆ ಮೂಡಿದೆ," ಎಂದಿದ್ದಾರೆ. "ಬೌಲರ್‌ಗಳು ನೆಟ್ಸ್‌ನಲ್ಲಿ 10 ರಿಂದ 12 ನಿಮಿಷಗಳ ಕಾಲ ಬ್ಯಾಟಿಂಗ್‌ ಮಾಡುತ್ತೇವೆಂದು ಹೇಳುತ್ತಿರುವ ನಿಜಕ್ಕೂ ಉತ್ತಮ ಸಂಗತಿ. ಫಲಿತಾಂಶ ತಡವಾಗಿ ಮೂಡಿಬರಲಿದೆ. ಆದರೆ, ಕಠಿಣ ಪರಿಶ್ರಮ, ಪ್ರಕ್ರಿಯೆ ಹಾಗೂ ತಂಡದ ಗೆಲುವಿಗೆ ಪ್ರತಿಯೊಬ್ಬರೂ ಕೊಡುಗೆ ನೀಡುವುದು ತುಂಬಾ ಮುಖ್ಯ. ಈ ಬಾರಿ ಟೈಲ್‌-ಎಂಡರ್ಸ್‌ಗಳ ಕಡೆಯಿಂದಲೂ ಅಲ್ಪ ಕೊಡುಗೆಯನ್ನು ನಿರೀಕ್ಷಿಸುತ್ತಿದ್ದೇವೆ," ಎಂದು ರಹಾನೆ ತಿಳಿಸಿದರು. ಟೆಸ್ಟ್‌ ಸರಣಿಗೆ ತಯಾರಿ ಮಾಡಿರುವ ಇಲ್ಲಿನ ಪಿಚ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಅಜಿಂಕ್ಯ ರಹಾನೆ, ಇಂಗ್ಲೆಂಡ್‌ ವಿಕೆಟ್‌ಗಳ ಪರಿಸ್ಥಿತಿಗಳ ಬಗ್ಗೆ ಟೀಮ್‌ ಇಂಡಿಯಾ ತುಂಬಾ ಎಚ್ಚರಿಕೆಯಿಂದ ಇದೆ ಹಾಗೂ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದೆ. ಅಂದಹಾಗೆ, ವೇಗಿಗಳ ಸ್ನೇಹಿ ಪಿಚ್‌ಗಳಲ್ಲಿ ಪ್ರವಾಸಿಗರ ವಿರುದ್ಧ ಪ್ರಾಬಲ್ಯ ಸಾಧಿಸುವ ಇಂಗ್ಲೆಂಡ್‌ ತಂಡದ ತಂತ್ರದ ಬಗ್ಗೆ ನಾವು ಎಚ್ಚರದಿಂದ ಇದ್ದೇವೆ ಎಂದು ರಹಾನೆ ಹೇಳಿದ್ದಾರೆ. "ಇಂತಹ ಮಾರಕ ಪಿಚ್‌ಗಳನ್ನು ಇಂಗ್ಲೆಂಡ್‌ ನಮಗೆ ನೀಡಲಿದೆ ಎಂದು ನಾವು ನಿರೀಕ್ಷೆ ಮಾಡಿದ್ದೇವೆ. ಇದು ಅವರ ತವರು ಅಂಗಳವಾಗಿರುವುದರಿಂದ ಇದರ ಬಗ್ಗೆ ನಾವು ಜಾಸ್ತಿ ಯೋಚಿಸುವುದಿಲ್ಲ. ಆದರೆ, ಪ್ರತಿಯೊಂದು ಸನ್ನಿವೇಶವನ್ನು ಗೆಲ್ಲುವುದು ಟೆಸ್ಟ್‌ ಕ್ರಿಕೆಟ್‌ನಲ್ಲಿ ತುಂಬಾ ಮುಖ್ಯ. ಹಾಗಾಗಿ, ಅವರು ನಮಗೆ ಯಾವ ವಿಕೆಟ್‌ ನೀಡಲಿದ್ದಾರೆಂಬ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ," ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lro3Jp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...